Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral post : ‘ನನ್ನ ಮದುವೆಯಲ್ಲಿ ನಿಮ್ಮ ಊಟದ ಖರ್ಚು ನಿಮ್ಮದೇ’ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ ವಧು

Marriage : ಮದುವೆಯನ್ನು ಮುಂದೂಡಬೇಕೋ ಅಥವಾ ಹೀಗೆ ಮಾಡುವುದು ಸರಿಯೋ? ಎಂದು ಕೇಳಿದ ವಧುವಿಗೆ ನೆಟ್ಟಿಗರು ನೀಡಿದ ಸಲಹೆ ಇಲ್ಲಿದೆ.

Viral post : ‘ನನ್ನ ಮದುವೆಯಲ್ಲಿ ನಿಮ್ಮ ಊಟದ ಖರ್ಚು ನಿಮ್ಮದೇ’ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ ವಧು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 07, 2022 | 3:48 PM

Viral : ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇಂದಿಗೂ ಚಾಲ್ತಿಯಲ್ಲಿದೆ ಎಂದರೆ ಯೋಚಿಸಿ. ಮದುವೆ ಎನ್ನುವುದು ಎಷ್ಟು ದೊಡ್ಡ ಹೊರೆ. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಇದು ಹೇಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ವಾಸ್ತವದಲ್ಲಿ ಪರಿಹಾರ ಸಿಗದಿದ್ದಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಇಂಥ ಪೋಸ್ಟ್​ಗಳು ಕಾಣಿಸಿಕೊಳ್ಳುವುದು. ಈಗಿಲ್ಲಿ ಒಬ್ಬ ವಧುವಿಗೆ ಇದೇ ಪರಿಸ್ಥಿತಿ ಉಂಟಾಗಿದೆ. ತನ್ನ ಮದುವೆಯ ಆಮಂತ್ರಣ ಪತ್ರಿಕೆ ಹಂಚಿದ್ದಾಳೆ. ಆದರೂ ಮದುವೆಗಾಗಿ ಹಣ ಹೊಂದಿಸುವುದು ಮುಗಿದೇ ಇಲ್ಲ. ಕೊನೆಗೆ ರೋಸಿಹೋದ ಈಕೆ ಫೇಸ್​ಬುಕ್​ನಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾಳೆ. ತನ್ನ ಈ ಪರಿಸ್ಥಿತಿಗೆ ನೆಟ್ಟಿಗರಲ್ಲಿ ಸಲಹೆ ಕೋರಿದ್ದಾಳೆ. ಈ ಪೋಸ್ಟ್​ ಈಗ ವೈರಲ್ ಆಗಿದೆ.

ಪೋಸ್ಟ್ ಹೀಗಿದೆ, ‘ಮದುವೆಗೆ ಕರೆದು, ತಮ್ಮ ಊಟದ ಖರ್ಚನ್ನು ತಾವೇ ಭರಿಸಬೇಕೆಂದು ಯಾರಾದರೂ ಕೇಳುತ್ತಾರೆಯೇ? ಈಗ ಎಲ್ಲವೂ ತುಟ್ಟಿಯಾಗಿ ಕುಳಿತಿದೆ. ಇಂಥ ಸಂದರ್ಭದಲ್ಲಿ ಏನು ಮಾಡುವುದು? ಅಕ್ಟೋಬರ್​ಗೆ ಮದುವೆ ಮುಂದೂಡದೆ ವಿಧಿಯಿಲ್ಲ ಅಥವಾ ಮದುವೆಗೆ ಅತಿಥಿಗಳನ್ನು ಕರೆಯದೇ ಇರಬಹುದು. ಕರೆದರೂ ಉಡುಗೊರೆ ಬದಲಾಗಿ ತಮ್ಮ ಊಟದ ಖರ್ಚನ್ನು ಅವರೇ ಭರಿಸುವಂತಾಗಬೇಕು. ಈಗಾಗಲೇ ನಾನು ಅತಿಥಿಗಳಿಗೆ ಆಮಂತ್ರಣವನ್ನು ಕಳಿಸಿದ್ದೇನೆ. ಆದರೆ ಪರಿಸ್ಥಿತಿ ಹೀಗಿದೆ. ನಾನು ತುಂಬಾ ಒತ್ತಡದಲ್ಲಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.’

ಅವಳ ಈ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದ ನೆಟ್ಟಿಗರು, ‘ಆಕೆ ಅತಿಥಿಗಳಿಂದ ಉಡುಗೊರೆ ನಿರೀಕ್ಷಿಸದೇ ಇದ್ದರೆ, ಅತಿಥಿಗಳು ತಮ್ಮ ಊಟದ ಖರ್ಚನ್ನು ತಾವೇ ಭರಿಸುವುದು ಸೂಕ್ತ’ ಎಂದಿದ್ದಾರೆ. ಇನ್ನೊಬ್ಬರು, ‘ಮದುವೆಯ ಊಟಕ್ಕೆ ನೀವೇ ಹಣ ಪಾವತಿಸಬೇಕು ಎಂದು ನನ್ನನ್ನು ವೈಯಕ್ತಿಕವಾಗಿ ಕೇಳಲ್ಪಟ್ಟಿದ್ದರೆ ನಾನು ಖುಷಿಯಿಂದ ಪಾಲ್ಗೊಳ್ಳುತ್ತಿದ್ದೆ. ಏಕೆಂದರೆ ಕೆಲ ಕುಟುಂಬಗಳು ಪರಸ್ಪರ ಖುಷಿಯಿಂದ ಕಳೆಯಲು ಒಂದು ಅವಕಾಶದಂತೆ ಈ ಮದುವೆಗಳು. ಹಾಗಾಗಿ ಈ ನಿಲುವು ವಾಸ್ತವದಲ್ಲಿ ತಿಳಿವಳಿಕೆಯಿಂದ ಕೂಡಿದೆ’ ಎಂದಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಮದುವೆಯೂಟಕ್ಕೆ ಸೂಕ್ತಬೆಲೆ ನಿಗದಿ ಮಾಡಿದಲ್ಲಿ ಮತ್ತು ಉಡುಗೊರೆಗಳನ್ನು ನಿರೀಕ್ಷಿಸದಿದ್ದಲ್ಲಿ ನಾನಿದನ್ನು ಒಪ್ಪುತ್ತೇನೆ.’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ನನ್ನ ತಂದೆ ತಮ್ಮ ಮದುವೆಯಲ್ಲಿ ಹೀಗೆಯೇ ಮಾಡಿದ್ದರು. ಉಡುಗೊರೆಗಳು ಬೇಡ. ಆದರೆ ಊಟದ ಖರ್ಚನ್ನು ಪಾವತಿಸಿ.’ ಎಂದಿದ್ದಾರೆ ಇನ್ನೂ ಒಬ್ಬರು.

ನೆಟ್ಟಿಗರೆಲ್ಲರೂ ಈ ಹುಡುಗಿಯ ಅಭಿಪ್ರಾಯವನ್ನು ಬೆಂಬಲಿಸಿದ್ಧಾರೆ ಎಂದರೆ ವಾಸ್ತವವನ್ನು ಯೋಚಿಸಬೇಕಾದ್ದೇ.

ಇನ್ನಷ್ಟು ಇಂಥ ಸುದ್ದಿ ಓದಲು ಕ್ಲಿಕ್ ಮಾಡಿ

Published On - 3:44 pm, Sun, 7 August 22

ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್