AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ, ಪ್ರವಾಸಿಗರಿಗೆ ಚಳಿ ಬಿಡಿಸಿದ ಯುವಕ 

ತ್ಯಾಜ್ಯಗಳನ್ನು ಕಸದ ತೊಟ್ಟಿಗೆ ಎಸೆಯಬೇಕೆ ಹೊರತು ರಸ್ತೆಗಳಲ್ಲಿ ಅಲ್ಲ ಎಂದು ಗೊತ್ತಿದ್ರೂ ಕೂಡಾ ಕೆಲವೊಬ್ರು ರಸ್ತೆಗಳಲ್ಲಿಯೇ ಕಸಗಳನ್ನು ಎಸೆಯುತ್ತಾರೆ. ಅದರಲ್ಲೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಲ್ಲಿಯೇ  ಕಸಗಳನ್ನು ಎಸೆದು ಹೋಗ್ತಾರೆ.  ಹೀಗೆ ಕೊಡಗಿನಲ್ಲಿಯೂ ಕೂಡಾ ಪ್ರವಾಸಿಗರೊಬ್ಬರು ರಸ್ತೆ ಬದಿಯಲ್ಲಿ ಕಸವನ್ನು ಎಸೆದಿದ್ದು, ಇದನ್ನು ನೋಡಿದ ಸ್ಥಳೀಯ ಯುವಕ ಆ ಪ್ರವಾಸಿಗರಿಂದಲೇ ಬಿಸಾಡಿದ ಕಸವನ್ನು ಹೆಕ್ಕಿಸಿ, ಇನ್ನು ಮುಂದೆ ರಸ್ತೆಗಳಲ್ಲಿ ಕಸವನ್ನು ಎಸೆದು ಬೇಜವಬ್ದಾರಿತನವನ್ನು ಮೆರೆಯಬಾರದು ಎಂಬ ನೀತಿ ಪಾಠವನ್ನು ಕಲಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಯುವಕನ ನಡೆಗೆ ಭಾರಿ ಮೆಚ್ಚುಗೆ ಲಭಿಸಿದೆ. 

Viral Video: ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ, ಪ್ರವಾಸಿಗರಿಗೆ ಚಳಿ ಬಿಡಿಸಿದ ಯುವಕ 
ಮಾಲಾಶ್ರೀ ಅಂಚನ್​
| Edited By: |

Updated on: Jan 06, 2024 | 12:54 PM

Share

ಪ್ರವಾಸಿ ತಾಣಗಳು ಬಿಡಿ, ಪ್ರವಾಸಿ ತಾಣಗಳಿಗೆ ಹೋಗುವಂತಹ ರಸ್ತೆಗಳಲ್ಲಿಯೂ  ಪ್ರವಾಸಿಗರು ಕಸಗಳನ್ನು ಎಸೆದು ಹೋಗ್ತಾರೆ.  ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಬೇಕಾಬಿಟ್ಟಿಯಾಗಿ ಕಸಗಳನ್ನು ಎಸೆದು ಹೋಗುವುದು ತಪ್ಪು ಅಂತ ಗೊತ್ತಿದ್ರೂ ಕೂಡಾ ಕೆಲವೊಬ್ರು  ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ನೀರಿನ ಬಾಟಲಿ ಇರಲಿ ಅಥವಾ ತಾವು ತಿಂದಂತಹ ತಿಂಡಿ ಪ್ಯಾಕೆಟ್ಗಳಿರಲಿ, ಈ ಎಲ್ಲಾ ಕಸವನ್ನು ಕಸದ ತೊಟ್ಟಿಗೆ ಎಸೆಯದೆ, ಅಲ್ಲಲ್ಲಿಯೇ ರಸ್ತೆಗಳಲ್ಲಿ ಈ ಕಸಗಳನ್ನು ಎಸೆದು ಹೋಗ್ತಾರೆ.  ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕೊಡಗಿಗೆ ಬಂದಂತಹ ಮಹಾರಾಷ್ಟ್ರದ ಪ್ರವಾಸಿಗರು ರಸ್ತೆಯಲ್ಲಿಯೇ ಕಾರಲ್ಲಿ ಇದ್ದಂತಹ ತಿಂಡಿ ಪ್ಯಾಕೆಟ್​​ಗಳು ಕಸವನ್ನು ಎಸೆದು ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ಇವರಿಗೆ ತಕ್ಕ ಪಾಠ ಕಲಿಸ್ಬೇಕು ಅಂತಾ, ಆ ಪ್ರವಾಸಿಗರನ್ನು 4 ಕಿ.ಮೀ ವರೆಗೂ ಬೈಕ್ ಅಲ್ಲಿ ಹಿಂಬಾಲಿಸುತ್ತಾ ಹೋಗಿ, ಎಸೆದಂತಹ ಕಸವನ್ನು ಅವರ ಕೈಯಿಂದಲೇ ಹೆಚ್ಚಿಸಿ, ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ ಇನ್ನು ಮುಂದೆ ರಸ್ತೆ ಬದಿಗಳಲ್ಲಿ ಬೇಕಾಬಿಟ್ಟಿ ಕಸಗಳನ್ನು ಎಸೆಯಬಾರದು ಎಂದು ನೀತಿ ಪಾಠವನ್ನು  ಹೇಳಿದ್ದಾನೆ. ಈ ಘಟನೆಯ ಕುರಿತ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

@kodaguConnect ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಕೊಡಗಿಗೆ ಬಂದಂತಹ ಪ್ರವಾಸಿಗರು ಎಸೆದಂತಹ ಕಸವನ್ನು ಅವರ ಕೈಯಲ್ಲಿಯೇ ಹೆಕ್ಕಿಸಿದ ಸ್ಥಳೀಯ ಯುವಕ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಕೊಡಗಿನ ಯುವಕನೊಬ್ಬ ರಸ್ತೆಗಳಲ್ಲಿ ಕಸ ಎಸೆದಂತಹ ಪ್ರವಾಸಿಗರಿಗೆ ತಕ್ಕ ಪಾಠವನ್ನು ಕಲಿಸಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಕಸ ಎಸೆದಂತಹ ಪ್ರವಾಸಿಗರ ಕಾರನ್ನು ನಿಲ್ಲಿಸಿ ಕೊಡಗಿನ ಸ್ಥಳೀಯ ಯುವಕನೊಬ್ಬ, ನೀವು ರಸ್ತೆಯಲ್ಲಿ ಏತಕ್ಕಾಗಿ ಕಸ ಎಸೆದಿದ್ದೀರಾ? ಇಲ್ಲಿಗೆ ಬರೋ ಪ್ರವಾಸಿಗರು  ಹೀಗೆ ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾ ಹೋದ್ರೆ  ನಮ್ಮ ಊರಿನ  ಸ್ಥಿತಿ ಏನಾಗ್ಬೇಡಾ? ಇಷ್ಟು ವಿದ್ಯಾವಂತರಾಗಿದ್ರೂ ಕೂಡಾ ರಸ್ತೆಗಳಲ್ಲಿ ಕಸ ಎಸೆಯಬಾರದು ಅನ್ನೋ ಸ್ವಲ್ಪ ಜ್ಞಾನವೂ ನಿಮಗಿಲ್ವಾ? ಅಂತ ಪ್ರಶ್ನೆ ಮಾಡ್ತಾನೆ. ನಂತರ ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ, ರಸ್ತೆಯಲ್ಲಿ ಎಸೆದಂತಹ ಕಸವನ್ನು ನೀವೇ ಹೆಕ್ಕಬೇಕು ಎಂದು ಹೇಳಿ, ಕಸ ಹಾಕಿದ  ಪ್ರವಾಸಿಗರಿಂದಲೇ   ಕಸ ಹೆಕ್ಕಿಸುವ ಮೂಲಕ ಇನ್ನು ಮುಂದೆ ಎಲ್ಲಿಯೂ ಕೂಡಾ  ಈ ರೀತಿ ರಸ್ತೆ ಬದಿಗಳಲ್ಲಿ ಕಸ ಎಸೆಯಬಾರದು ಎಂದು ತಕ್ಕ ಪಾಠವನ್ನು ಕಲಿಸಿದ್ದಾನೆ.

ಇದನ್ನೂ ಓದಿ: ನೆರಳಿನಲ್ಲಿ ಮೂಡಿದ ರಾಮ ಮಂದಿರ, ಈ ಕಲಾಕೃತಿಗೆ ಹಳೆಯ ಟಿವಿ ಬಳಕೆ 

ಜನವರಿ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಯುವಕ ನಿಜವಾಗಿಯೂ ಒಳ್ಳೆ ಕೆಲಸವನ್ನು ಮಾಡಿದ್ದಾನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಭಾರತದ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಬೇಜವಬ್ದಾರಿಯಿಂದ ಕಸ ಎಸೆಯುವವರಿಗೆ ಇದೇ ರೀತಿ ಪಾಠವನ್ನು ಕಲಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಹಲವು ಬಳಕೆದಾರರು ಈ ಯುವಕನ ನಡೆಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ