AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕೊಟ್ಟಿಗೆಯಲ್ಲಿ ಕಾಡುವ ಸೊಳ್ಳೆಗಳಿಗಾಗಿ ಹೀಗೊಂದು ದೇಸೀ ಉಪಾಯ

Desi Indian Jugaad : ಅನಿವಾರ್ಯತೆ, ಸೌಲಭ್ಯಗಳ ಕೊರತೆ ಇದ್ದಲ್ಲಿ ಹೊಸ ಅನ್ವೇಷಣೆಗಳು ಯಾವಾಗಲೂ ಚಾಲ್ತಿಯಲ್ಲಿರುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

Viral Video : ಕೊಟ್ಟಿಗೆಯಲ್ಲಿ ಕಾಡುವ ಸೊಳ್ಳೆಗಳಿಗಾಗಿ ಹೀಗೊಂದು ದೇಸೀ ಉಪಾಯ
ಕೊಟ್ಟಿಗೆಯ ಸೊಳ್ಳೆಗಳನ್ನು ಓಡಿಸಲು ಬೇವಿನಹೊಗೆ ಮತ್ತು ಫ್ಯಾನ್​ ಗಾಳಿ
TV9 Web
| Edited By: |

Updated on: Sep 17, 2022 | 4:58 PM

Share

Viral Video : ಹಸುವಿನ ಕೊಟ್ಟಿಗೆಯಲ್ಲಿ ಸೊಳ್ಳೆಗಳನ್ನು ಓಡಿಸಲು ಹಳ್ಳಿಗೊರೊಬ್ಬರು ಕಂಡುಕೊಂಡು ಈ ದೇಸೀ ತಂತ್ರವುಳ್ಳ ವಿಡಿಯೋ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ. ಎಲ್ಲಿ ಅನಿವಾರ್ಯತೆ ಮತ್ತು ಸೌಲಭ್ಯಗಳ ಕೊರತೆ ಇರುತ್ತದೆಯೋ ಅಲ್ಲಿಯೇ ಹೀಗೆ ಹೊಸಹೊಸ ಆಲೋಚನೆ, ಪ್ರಯೋಗಗಳು ಹುಟ್ಟಿಕೊಳ್ಳುವುದು. ಈ ವಿಡಿಯೋದಲ್ಲಿ ಹಸುಗಳು ತಮ್ಮ ಪಾಡಿಗೆ ಕೊಟ್ಟಿಗೆಯಲ್ಲಿ ಮೇಯುತ್ತಿವೆ. ಇತ್ತ ಬೇವಿನಸೊಪ್ಪಿನ ಹೊಗೆ ಹಾಕಿ ಅದರ ಪಕ್ಕದಲ್ಲಿ ಟೇಬಲ್​ ಫ್ಯಾನ್​ ಇರಿಸಲಾಗಿದೆ. ಆ ಫ್ಯಾನ್​ಗಾಳಿಯಿಂದ ಹೊಗೆ ಕೊಟ್ಟಿಗೆ ಪೂರ್ತಿ ಹರಡಿ ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತಿದೆ.

Desi Indian Jhasu Jugad from india

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಐಎಎಸ್ ಅಧಿಕಾರಿ ಅವನೀಶ್​ ಶರಣ್​ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆನಂತರ ರೆಡ್ಡಿಟ್​ನಲ್ಲಿ ಶುಕ್ರವಾರದಂದು ಮರುಪೋಸ್ಟ್​ಗೊಂಡಿದೆ. ರೆಡ್ಡಿಟ್​ ಖಾತೆದಾರರು, ಪ್ರಾಣಿಗಳ ರಕ್ಷಣೆಗೆ ಇಂಥ ದೇಸೀ ಉಪಾಯ ಕಂಡುಕೊಂಡ ಹಳ್ಳಿಗರನ್ನು ಪ್ರಶಂಸಿಸಿದ್ದಾರೆ.

‘ಎಂಥ ಪ್ರತಿಭಾವಂತ ಜನರು ನಮ್ಮಲ್ಲಿದ್ದಾರೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಸೃಜನಶೀಲತೆಗೆ ಇದೊಂದು ಉತ್ತಮ ಮಾದರಿ’ ಎಂದು ಇನ್ನೊಬ್ಬರು ಹೇಳಿದ್ದಾರೆ. ‘ಈ ದೇಸೀ ಜುಗಾಡ್​ ನನಗೆ ಬಹಳ ಇಷ್ಟವಾಯಿತು’ ಎಂದು ಮಗದೊಬ್ಬರು ಹೇಳಿದ್ದಾರೆ. ‘ಈ ಕಲ್ಪನೆಯೇ ಅದ್ಭುತ’ ಎಂದು ಇನ್ನೊಬ್ಬರು ಹೇಳಿದ್ದಾರೆ.

ಸೃಜನಶೀಲ ಮತ್ತು ರಚನಾತ್ಮಕ ಪ್ರಯೋಗಗಳಿಗೆ ಯಾವತ್ತೂ ಮನ್ನಣೆ ಇದ್ದೇ ಇದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್