AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?

ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ.

ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ವಾಸ್ಕೋಡಿಗಾಮ
shruti hegde
|

Updated on: May 20, 2021 | 11:10 AM

Share

ದೆಹಲಿ: ಇವತ್ತಿಗೆ ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್​ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್​ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್​ಗೆ ತಲುಪಿದನು. ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ.

ಭಾರತವನ್ನು ವಾಸ್ಕೋಡಿಗಾಮನಿಗಿಂತ ಮೊದಲು ಅನೇಕರು ಹುಡುಕಲು ಪ್ರಯತ್ನಿಸಿದ್ದರು. ಆದರೆ ಯಾರೂ ಕೂಡ ಯಶಸ್ವಿಯಾಗಿರಲಿಲ್ಲ. ಭಾರತ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿ ಹೊಂದಿತ್ತು. ಈ ಮೂಲಕ ಅನೇಕ ದೇಶಗಳು ಆಮದು ಮಾಡಿಕೊಳ್ಳಲು ಭಾರತಕ್ಕೆ ಬರುತ್ತಿದ್ದರು. ಯುರೋಪ್​ ಮತ್ತು ಭಾರತದ ನಡುವೆ ಸಮುದ್ರಯಾನದ ಮೂಲಕ ಸಂಚರಿಸಿ ಮಾರ್ಗ ಕಂಡು ಹಿಡಿದ ಮೊದಲಿಗ ವಾಸ್ಕೋಡಿಗಾಮ .

ಕ್ರಿಸ್ಟೋಫರ್​ ಕೊಲಂಬಸ್​ 1492ರಲ್ಲಿ ಪ್ರಯಾಣವನ್ನು ಕೈಗೊಂಡಿದ್ದ. ಅದಾದ 5 ವರ್ಷದ ಬಳಿಕ ವಾಸ್ಕೋಡಿಗಾಮ ಪ್ರಯಾಣ ಕೈಗೊಂಡನು. ಆದರೆ, ಭಾರತದ ಮಾರ್ಗ ಕಂಡುಹಿಡಿಯುವ ಉದ್ದೇಶದಿಂದ ಸಂಚಾರ ಕೈಗೊಂಡಿದ್ದು ಮೊದಲು ಕಂಡು ಹಿಡಿದ ದೇಶ ಅಮೇರಿಕಾ.

ಸಮುದ್ರಯಾನ ಪ್ರಯಾಣ ಕೈಗೊಂಡ ಸಮಯದಲ್ಲಿ ವಾಸ್ಕೋಡಿಗಾಮ ನೌಕಾಪಡೆ ಕ್ರಿಸ್​ಮಸ್​ದಿನದಂದು ನಟಾಲ್​ ತೀರವನ್ನು ತಲುಪಿತು. ವಿವಿಧ ನದಿಗಳನ್ನು ದಾಟಿ ಮೊಜಾಂಬಿಕ್​ ಎಂಬ ದ್ವೀಪದಲ್ಲಿ ನೌಕಾಪಡೆ ಸೇರಿತು. ಅಲ್ಲೇ ಒಂದು ತಿಂಗಳ ಕಾಲ ನೆಲೆಸಿದರು.

ಮೊಜಾಂಬಿಕ್​ನಲ್ಲಿ ನೆಲೆಸಿದ್ದ ಒಂದು ತಿಂಗಳ ಕಾಲದಲ್ಲಿ ವಾಸ್ಕೋಡಿಗಾಮ ಅರಬ್ಬರ ಜೊತೆಗಿನ ತಮ್ಮ ವಾಣಿಜ್ಯ ಸಂಪರ್ಕವನ್ನು ಪ್ರಾರಂಭಿಸಿದನು. ಚಿನ್ನ, ಬೆಳ್ಳಿ ಮತ್ತು ಸಾಂಬಾರು ಪದಾರ್ಥದ ವ್ಯಾಪಾರದ ಕುರಿತಾಗಿ ತಿಳಿದುಕೊಂಡನು. ಈ ಮೂಲಕ ವಾಸ್ಕೋಡಿಗಾಮ ಭಾರತಕ್ಕೆ ಹೋಗಬಹುದು ಎಂಬ ಭರವಸೆ ಹೊಂದಿದನು. 1598 ಏಪ್ರಿಲ್​ 7ರಂದು ಮೊಂಬಾಸಾಕ್ಕೆ (ಈಗಿನ ಕೀನ್ಯಾ) ತಲುಪಿ ಗುಜರಾತಿ ಪೈಲೆಟ್​ ಓರ್ವರನ್ನು ಭೇಟಿ ಮಾಡಿದನು.

ಗುಜರಾತಿ ಪೈಲೆಟ್​ ಸಹಾಯದಿಂದ 20 ದಿನಗಳ ಕಾಲ ಸಂಚರಿಸಿ ಭಾರತದ ಮಾರ್ಗದೆಡೆಗೆ ಪ್ರಯಾಣ ಬೆಳೆಸಿದನು. 1498 ಮೇ 17ರಂದು ಭಾರತವನ್ನು ತಲುಪಿದ ಮೊದಲ ಯುರೋಪಿಯನ್​ ನಾವಿಕ ವಾಸ್ಕೋಡಿಗಾಮ.

ಭಾರತದಿಂದ ಪೋರ್ಚುಗಲ್​ಗೆ ಸಂಬಾರ ಪದಾರ್ಥ ಮತ್ತು ರೇಷ್ಮೆಯನ್ನು ಖರೀದಿಸಿ ಪುನಃ ಪೋರ್ಚುಗಲ್​ಗೆ ಹಿಂತಿರುಗಿದನು. ಭಾರತಕ್ಕೆ ಮೂರನೇ ಪ್ರಯಾಣ ಕೈಗೊಂಡ ಸಮಯದಲ್ಲಿ 1524ರ ಸಂದರ್ಭದಲ್ಲಿ ವಾಸ್ಕೋಡಾಗಾಮಾ ಸಾವಿಗೀಡಾದರು.

Follow Us
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!