Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ‘ಜಿರಳೆದೇವೋಭವ’

Indian Railways : ರಾತ್ರಿ ಈ ರೈಲಿನಲ್ಲಿ ಮಲಗಿದ್ದಾಗ ಮೈಮೇಲೆಲ್ಲ ಜಿರಳೆಗಳು ಹರಿದಾಡಿವೆ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಎಲ್ಲಿದೆ ಶುಚಿತ್ವದ ಭರವಸೆ ಎಂದು ಪ್ರಶ್ನಿಸಿದ್ಧಾರೆ. ನೆಟ್ಟಿಗರನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ 'ಜಿರಳೆದೇವೋಭವ'
ದೆಹಲಿ ತಿರುಪತಿ ಎಕ್ಸ್​​ಪ್ರೆಸ್​ನಲ್ಲಿ ಪತ್ತೆಯಾದ ಜಿರಳೆಗಳು.
Follow us
|

Updated on:Aug 08, 2023 | 3:46 PM

Cockroach : ಕೆಲ ದಿನಗಳ ಹಿಂದೆಯಷ್ಟೇ ವಂದೇಭಾರತ ಎಕ್ಸ್​ಪ್ರೆಸ್​ನಲ್ಲಿ (Vande Bharat Express) ಐಆರ್​ಸಿಟಿಸಿಯ ಚಪಾತಿಯಲ್ಲಿ ಜಿರಳೆಯೊಂದು ಪತ್ತೆಯಾಗಿದ್ದನ್ನು ಓದಿದ್ದಿರಿ. ಇದೀಗ ದೆಹಲಿ ತಿರುಪತಿ ಎಕ್ಸ್​​ಪ್ರೆಸ್​ (Delhi Tirupati Express) ರೈಲಿನಲ್ಲಿಯೂ ಜಿರಳೆ ಪತ್ತೆಯಾಗಿದ್ದು ಪ್ರಯಾಣಿಕರೊಬ್ಬರು, ‘ದೆಹಲಿ ತಿರುಪತಿ ಎಕ್ಸ್​ಪ್ರೆಸ್ ರೈಲಿನ​ (12708 A/C) ಕಂಪಾರ್ಟ್‌ಮೆಂಟ್​ನಲ್ಲಿ ಮಲಗಿದ್ದಾಗ ನಮ್ಮ ಮೈಮೇಲೆಲ್ಲ ಜಿರಳೆಗಳು ಹರಿದಾಡುತ್ತಿದ್ದವು. ಶುಚಿತ್ವದ ಭರವಸೆ ಎಲ್ಲಿದೆ?’ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಮತ್ತೀಗ ಭಾರತೀಯ ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಆತಿಫ್ ಅಲಿ ಎಂಬ ಪ್ರಯಾಣಿಕರು ದೆಹಲಿ-ತಿರುಪತಿ ಎಕ್ಸ್‌ಪ್ರೆಸ್‌ನ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹಾಸಿಗೆ ಮತ್ತು ಮೈಮನೇಲೆಲ್ಲ ಜಿರಳೆಮರಿಗಳು ಹರಿದಾಡಿದ್ದರಿಂದ ಕೋಪಗೊಂಡ ಪ್ರಯಾಣಿಕರು ದಿಂಬಿನ ಮೇಲೆ ಮತ್ತು ರೈಲಿನ ಗೋಡೆಯ ಮೇಲೆ ಜಿರಳೆಗಳು ಹರಿದಾಡುತ್ತಿರುವ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ವಂದೇಭಾರತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಪಾತಿಯಲ್ಲಿ ಸಿಕ್ಕ ಜಿರಳೆಯ ಫೋಟೋ ಈ ಕೆಳಗಿದೆ.

ಭಾರತೀಯ ರೈಲ್ವೇಯ ಅಧಿಕೃತ ಖಾತೆಯಾದ ರೈಲ್ವೇ ಸೇವಾ, ದೆಹಲಿ-ತಿರುಪತಿ ರೈಲಿನ ಪ್ರಯಾಣಿಕರ ಮತ್ತು ವಂದೇಭಾರತ ಎಕ್ಸ್​ಪ್ರೆಸ್​ ರೈಲಿನ ಪ್ರಯಾಣಿಕರ ಟ್ವೀಟ್​ಗೆ ಪ್ರತಿಕ್ರಿಯಿಸಿದೆ. ಈ ವಿಷಯವನ್ನು ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ದಯವಿಟ್ಟು ಪ್ರಯಾಣದ ವಿವರಗಳನ್ನು (PNR/UTS No.) ಮತ್ತು ಮೊಬೈಲ್ ನಂಬರ್​ ಅನ್ನು ಮೆಸೇಜ್ ಮಾಡಿ ಎಂದು ವಿನಂತಿಸಿಕೊಂಡಿದೆ. ಇಲ್ಲವೆ http://railmadad.indianrailways.gov.in ನಲ್ಲಿ ಕೂಡ ನೇರವಾಗಿ ದೂರು ಸಲ್ಲಿಸಬಹುದು. ಇನ್ನು ತುರ್ತು ಪರಿಹಾರಕ್ಕಾಗಿ 139 ಗೆ ಕರೆ ಮಾಡಬಹುದು ಎಂದು ತಿಳಿಸಿದೆ.

ಇದನ್ನೂ ಓದಿ : Viral Video: ವೃದ್ಧರೊಬ್ಬರ ಕಾಲ್ಪನಿಕ ಕ್ರಿಕೆಟ್​; ನೆಟ್ಟಿಗರಲ್ಲಿ ಚಿಮ್ಮಿದ ಉತ್ಸಾಹ

ಇಂಥ ಮೆಸೇಜುಗಳಿಂದ ಕಣ್ಣೊರೆಸುವ ತಂತ್ರವನ್ನು ರೈಲ್ವೇ ಇಲಾಖೆಯು ಕೈಬಿಡಬೇಕು. ಒಟ್ಟಾರೆಯಾಗಿ ಶುಚಿತ್ವದ ಕಡೆ ಗಮನ ಕೊಟ್ಟು ಪ್ರಯಾಣಿಕರ ಹಿತ ಮತ್ತು ಸುರಕ್ಷತೆಗಾಗಿ ಶ್ರಮಿಸಬೇಕು ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:43 pm, Tue, 8 August 23

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?