AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಭಾರತವನ್ನು ತೊರೆಯುವ ಕನಸು’; ಟ್ರೋಲ್​ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ

Truecaller : ಭಾರತೀಯ ಮೂಲದ ಈ ವಿದ್ಯಾರ್ಥಿನಿ ಕೆನಡಾದ ಮಾಧ್ಯಮವೊಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ. ಟ್ರೋಲಿಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಧೃತಿಗೆಡಬೇಡ ಎಂದು ಈಕೆಯನ್ನು ಬೆಂಬಲಿಸಿದ್ದಾರೆ ಅಲನ್ ಮಮೆದಿ.

Viral Video: 'ಭಾರತವನ್ನು ತೊರೆಯುವ ಕನಸು'; ಟ್ರೋಲ್​ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ
ಕೆನಡಾದಲ್ಲಿ ಓದುತ್ತಿರುವ ಭಾರತೀಯ ಮೂಲದ ಬಯೋಟೆಕ್ ವಿದ್ಯಾರ್ಥಿನಿ ಏಕ್ತಾ
Follow us
ಶ್ರೀದೇವಿ ಕಳಸದ
|

Updated on:Aug 04, 2023 | 5:37 PM

Troll : ‘ಜನರು ಈಕೆ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಈಕೆಯನ್ನು ಗೇಲಿ ಮಾಡುತ್ತಿದ್ದಾರೆ. ಆದರೆ ಇದು ಸರಿಯಲ್ಲ! ಏಕ್ತಾ, ಗೇಲಿ ಮಾಡುತ್ತಿರುವವ ಮಾತನ್ನು ಕೇಳಬೇಡಿ. ನೀವು ನಿಮ್ಮ ಕನಸಿನಂತೆ ಬದುಕುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ನೀವು ನಿಮ್ಮ ಕೋರ್ಸ್ ಮುಗಿಸುತ್ತಿದ್ದಂತೆ ಜಗತ್ತಿನಾದ್ಯಂತ ಇರುವ ನಮ್ಮ ಯಾವುದೇ ಟ್ರ್ಯೂಕಾಲರ್​ ಕಚೇರಿಯಲ್ಲಿ ನೀವು ಕೆಲಸ ಮಾಡಬಹುದು, ಸ್ವಾಗತ.’ ಎಂದು ಟ್ರ್ಯೂಕಾಲರ್ ಕಂಪೆನಿಯ ಸಿಇಒ ಅಲನ್​ ಮಮ್ಮೇದಿ (Alan Mamedi, CEO of Truecaller) ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಕೆನಡಾದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಓದುತ್ತಿರುವ ಏಕ್ತಾ ಎಂಬ ಈ ವಿದ್ಯಾರ್ಥಿನಿ ಭಾರತೀಯ ಮೂಲದಾಕೆ. ಕೆನಡಾದ ಮಾಧ್ಯಮ ವರದಿಗಾರರೊಬ್ಬರು ಈಕೆಯೊಂದಿಗೆ ಸಹಜವಾಗಿ ಮಾತಿಗಿಳಿದು, ಇಲ್ಲಿಗೆ ಏಕೆ ಬಂದಿದ್ದೀರಿ, ಯಾವ ದೇಶದಿಂದ ಬಂದಿದ್ದೀರಿ, ಕೆನಡಾದಲ್ಲಿ ನಿಮಗಿಷ್ಟವಾದ ಸಂಗತಿ ಏನು? ಎಂದು ಕೇಳಿದ್ದಾರೆ, ‘ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುವುದು ನನ್ನ ಕನಸಾಗಿತ್ತು (ಭಾರತವನ್ನು ಬಿಟ್ಟು ಯಾವುದಾದರೂ ಹೊರದೇಶದಲ್ಲಿ ಓದಬೇಕು ಎನ್ನುವ ಅರ್ಥದಲ್ಲಿ), ಹಾಗಾಗಿ ಕೆನಡಾಗೆ ಬಂದೆ. ಬಯೋಟೆಕ್​ ಕೋರ್ಸ್ ಮುಗಿಸಿದ ತಕ್ಷಣ ನಾನು ಉದ್ಯಮದಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡಿದ್ದೇನೆ. ಇನ್ನು ಕೆನಡಾದಲ್ಲಿರುವ ಸುಂದರ ಪ್ರಕೃತಿದೃಶ್ಯ; ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ನನ್ನಿಷ್ಟದ ಸಂಗತಿ’ ಎಂದಿದ್ದಾಳೆ.

ಇದನ್ನೂ ಓದಿ : Viral Video: ಮುಂಬೈ; ‘ಡ್ಯಾನ್ಸ್ ನಿಲ್ಲಿಸಿದರೆ ಮಾತ್ರ ಪ್ರಮಾಣಪತ್ರ’; ಪ್ರಾಧ್ಯಾಪಕರ ತಾಕೀತು

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ‘ಡ್ರೀಮ್ ಟು ಲೀವ್ ಇಂಡಿಯಾ- Dream to leave India’ದಡಿ ಈ ವಿದ್ಯಾರ್ಥಿಯನ್ನು ಟೀಕಿಸಿ ಟ್ರೋಲ್ ಮಾಡಲಾಯಿತು. ಇದನ್ನು ಗಮನಿಸಿದ ಟ್ರ್ಯೂಕಾಲರ್ ಸಿಇಒ ಅಲನ್ ಮಮೆಡಿ  ತಮ್ಮ ಕಂಪೆನಿಯಲ್ಲಿ ಈಕೆಗೆ ಉದ್ಯೋಗದ ಭರವಸೆಯನ್ನು ನೀಡಿ ಬೆಂಬಲಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಿಗಳು ಮಮೆಡಿಯವರ ಟ್ವೀಟ್​ನಡಿ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇವರನ್ನು ಬೆಂಬಲಿಸಿದ್ದರೆ ಇನ್ನೂ ಕೆಲವರು ಶಬ್ದಪ್ರಹಾರಗಳಡಿ ಟೀಕಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:33 pm, Fri, 4 August 23

ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ