AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಭಾರತವನ್ನು ತೊರೆಯುವ ಕನಸು’; ಟ್ರೋಲ್​ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ

Truecaller : ಭಾರತೀಯ ಮೂಲದ ಈ ವಿದ್ಯಾರ್ಥಿನಿ ಕೆನಡಾದ ಮಾಧ್ಯಮವೊಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ. ಟ್ರೋಲಿಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಧೃತಿಗೆಡಬೇಡ ಎಂದು ಈಕೆಯನ್ನು ಬೆಂಬಲಿಸಿದ್ದಾರೆ ಅಲನ್ ಮಮೆದಿ.

Viral Video: 'ಭಾರತವನ್ನು ತೊರೆಯುವ ಕನಸು'; ಟ್ರೋಲ್​ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ
ಕೆನಡಾದಲ್ಲಿ ಓದುತ್ತಿರುವ ಭಾರತೀಯ ಮೂಲದ ಬಯೋಟೆಕ್ ವಿದ್ಯಾರ್ಥಿನಿ ಏಕ್ತಾ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Aug 04, 2023 | 5:37 PM

Share

Troll : ‘ಜನರು ಈಕೆ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಈಕೆಯನ್ನು ಗೇಲಿ ಮಾಡುತ್ತಿದ್ದಾರೆ. ಆದರೆ ಇದು ಸರಿಯಲ್ಲ! ಏಕ್ತಾ, ಗೇಲಿ ಮಾಡುತ್ತಿರುವವ ಮಾತನ್ನು ಕೇಳಬೇಡಿ. ನೀವು ನಿಮ್ಮ ಕನಸಿನಂತೆ ಬದುಕುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ನೀವು ನಿಮ್ಮ ಕೋರ್ಸ್ ಮುಗಿಸುತ್ತಿದ್ದಂತೆ ಜಗತ್ತಿನಾದ್ಯಂತ ಇರುವ ನಮ್ಮ ಯಾವುದೇ ಟ್ರ್ಯೂಕಾಲರ್​ ಕಚೇರಿಯಲ್ಲಿ ನೀವು ಕೆಲಸ ಮಾಡಬಹುದು, ಸ್ವಾಗತ.’ ಎಂದು ಟ್ರ್ಯೂಕಾಲರ್ ಕಂಪೆನಿಯ ಸಿಇಒ ಅಲನ್​ ಮಮ್ಮೇದಿ (Alan Mamedi, CEO of Truecaller) ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಕೆನಡಾದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಓದುತ್ತಿರುವ ಏಕ್ತಾ ಎಂಬ ಈ ವಿದ್ಯಾರ್ಥಿನಿ ಭಾರತೀಯ ಮೂಲದಾಕೆ. ಕೆನಡಾದ ಮಾಧ್ಯಮ ವರದಿಗಾರರೊಬ್ಬರು ಈಕೆಯೊಂದಿಗೆ ಸಹಜವಾಗಿ ಮಾತಿಗಿಳಿದು, ಇಲ್ಲಿಗೆ ಏಕೆ ಬಂದಿದ್ದೀರಿ, ಯಾವ ದೇಶದಿಂದ ಬಂದಿದ್ದೀರಿ, ಕೆನಡಾದಲ್ಲಿ ನಿಮಗಿಷ್ಟವಾದ ಸಂಗತಿ ಏನು? ಎಂದು ಕೇಳಿದ್ದಾರೆ, ‘ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುವುದು ನನ್ನ ಕನಸಾಗಿತ್ತು (ಭಾರತವನ್ನು ಬಿಟ್ಟು ಯಾವುದಾದರೂ ಹೊರದೇಶದಲ್ಲಿ ಓದಬೇಕು ಎನ್ನುವ ಅರ್ಥದಲ್ಲಿ), ಹಾಗಾಗಿ ಕೆನಡಾಗೆ ಬಂದೆ. ಬಯೋಟೆಕ್​ ಕೋರ್ಸ್ ಮುಗಿಸಿದ ತಕ್ಷಣ ನಾನು ಉದ್ಯಮದಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡಿದ್ದೇನೆ. ಇನ್ನು ಕೆನಡಾದಲ್ಲಿರುವ ಸುಂದರ ಪ್ರಕೃತಿದೃಶ್ಯ; ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ನನ್ನಿಷ್ಟದ ಸಂಗತಿ’ ಎಂದಿದ್ದಾಳೆ.

ಇದನ್ನೂ ಓದಿ : Viral Video: ಮುಂಬೈ; ‘ಡ್ಯಾನ್ಸ್ ನಿಲ್ಲಿಸಿದರೆ ಮಾತ್ರ ಪ್ರಮಾಣಪತ್ರ’; ಪ್ರಾಧ್ಯಾಪಕರ ತಾಕೀತು

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ‘ಡ್ರೀಮ್ ಟು ಲೀವ್ ಇಂಡಿಯಾ- Dream to leave India’ದಡಿ ಈ ವಿದ್ಯಾರ್ಥಿಯನ್ನು ಟೀಕಿಸಿ ಟ್ರೋಲ್ ಮಾಡಲಾಯಿತು. ಇದನ್ನು ಗಮನಿಸಿದ ಟ್ರ್ಯೂಕಾಲರ್ ಸಿಇಒ ಅಲನ್ ಮಮೆಡಿ  ತಮ್ಮ ಕಂಪೆನಿಯಲ್ಲಿ ಈಕೆಗೆ ಉದ್ಯೋಗದ ಭರವಸೆಯನ್ನು ನೀಡಿ ಬೆಂಬಲಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಿಗಳು ಮಮೆಡಿಯವರ ಟ್ವೀಟ್​ನಡಿ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇವರನ್ನು ಬೆಂಬಲಿಸಿದ್ದರೆ ಇನ್ನೂ ಕೆಲವರು ಶಬ್ದಪ್ರಹಾರಗಳಡಿ ಟೀಕಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:33 pm, Fri, 4 August 23

Follow Us
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು