AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು

Road Crossing : ವನ್ಯಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಅರಣ್ಯಪ್ರದೇಶಗಳ ಸುತ್ತಮುತ್ತ ಸೇತುವೆ, ಸುರಂಗ ಮಾರ್ಗವನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಇಲ್ಲವಾದರೆ ಅವು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು
ಈ ಮಕ್ಕಳನ್ನು ಹೇಗೆ ರಸ್ತೆ ದಾಟಿಸುವುದೋ!?
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Aug 05, 2023 | 10:13 AM

Share

Bear: ಅತ್ತಿಂದಿತ್ತ ಇತ್ತಿಂದಿತ್ತ ಗಾಡಿಗಳ ಓಡಾಟ. ಒಂದನ್ನು ಹಿಡಿದರೆ ಇನ್ನೊಂದು ಓಡಿಹೋಗುತ್ತದೆ, ಇನ್ನೊಂದನ್ನು ಹಿಡಿದರೆ ಒಂದು ಓಡಿಹೋಗುತ್ತದೆ. ಕರಡಿಯಮ್ಮನಿಗೆ (Mother) ಇರುವುದೊಂದೇ ಬಾಯಿ. ಹೇಗೆ ಅದು ಎರಡೂ ಮರಿಗಳನ್ನು ರಸ್ತೆ ದಾಟಿಸೀತು? ಇನ್ನು ಪುಟ್ಟಮಕ್ಕಳಿಗಾದರೂ ತಾವು ರಸ್ತೆಯ ಮೇಲೆ ಹೀಗೆ ಓಡಾಡುತ್ತಿರುವುದು ಅಪಾಯ ಎಂದು ತಿಳಿಯುವುದಾದರೂ ಹೇಗೆ? ಹೀಗಿರುವಾಗ ಅಮ್ಮನ ಕಷ್ಟ ಅವುಗಳಿಗೆ ಅರ್ಥವಾಗುವುದು ದೂರವೇ! ಚಿಣ್ಣಾಟದ ವಯಸ್ಸು. ಆದರೆ ಅಮ್ಮನ ಪರದಾಟ!?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by cutest._.bear (@cutest._.bear)

ಈತನಕ ಈ ವಿಡಿಯೋ ಅನ್ನು ಸುಮಾರು 20 ಮಿಲಿಯನ್​ ಜನರು ನೋಡಿದ್ದಾರೆ. 8 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ವನ್ಯಜೀವಿಗಳ ಅನುಕೂಲಕ್ಕೆ ತಕ್ಕಂತೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದು ನಿಜಕ್ಕೂ ಅಪ್ಯಾಯಮಾನ, ಇಂತ ದಯಾಮಯಿಗಳಿಗೆ ಯಾವಾಗಲೂ ನಾನು ಕೃತಜ್ಞ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಭಾರತವನ್ನು ತೊರೆಯುವ ಕನಸು; ಟ್ರೋಲ್​ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ

ಈ ವನ್ಯಜೀವಿಗಳು ಮಕ್ಕಳೊಂದಿಗೆ ಹೀಗೆ ನಾಡಿಗೆ ಬಂದಿದ್ದಾದರೂ ಎಲ್ಲಿ? ಇವುಗಳ ಓಡಾಟಕ್ಕೆ ಪ್ರತ್ಯೇಕವಾದ ಸುರಂಗ ಮಾರ್ಗ, ಸೇತುವೆಗಳನ್ನು ನಿರ್ಮಿಸಿ ಅವುಗಳು ನಿರಾತಂಕವಾಗಿ ಬದುಕುವಂತೆ ಮಾಡಬೇಕು ಎಂದಿದ್ದಾರೆ ಇನ್ನೊಬ್ಬರು. ಅವಳಿ ಮಕ್ಕಳ ತಾಯಿಯಾಗಿರುವ ನಾನು ಪ್ರತೀ ದಿನವು ಇಂಥ ಸವಾಲುಗಳನ್ನು ಎದುರಿಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಚಲಿಸುವ ಜೀಪಿನ ಬಾನೆಟ್ ಮೇಲೆ ಕುಳಿತ ಯುವತಿ ಹೋಷಿಯಾರಪುರದ ಪೊಲೀಸರ ಅತಿಥಿ

ಪಾಪ ಕರಡಿಯಮ್ಮನ ಎದೆಯಲ್ಲಿ ಅಷ್ಟೂ ಹೊತ್ತು ಅದೆಂಥ ಆತಂಕ ಮನೆಮಾಡಿತ್ತೋ ಏನೋ. ತಾಯ್ತನವೆಂದರೆ ಸುಮ್ಮನೇ ಅಲ್ಲವಲ್ಲ? ನೊಂದು ಬೆಂದೇ ತಾಯಿಯಾಗುವುದು. ಪ್ರಾಣಿಯಾದರೇನು ಮನುಷ್ಯರಾದರೇನು ಜವಾಬ್ದಾರಿ ಜವಾಬ್ದಾರಿಯೇ. ಹಂತಹಂತವಾಗಿ ಎದುರಾಗುವ ಸವಾಲುಗಳನ್ನು ಎದುರಿಸುತ್ತ ಮಕ್ಕಳಿಗೂ ಅದನ್ನು ಕಲಿಸುತ್ತ ಸಾಗಬೇಕು.

ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ