AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಬೇಡ ಅಣ್ಣ ಅಳಬೇಡ; ಮಿಲಿಯನ್​ಗಟ್ಟಲೆ ಜನಕ್ಕೆ ಈ ವಿಡಿಯೋ ಇಷ್ಟವಾಗಿದೆ

Cat : ನನಗ್ಯಾರೂ ಇಲ್ಲ, ನನ್ನ ನೋವನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು, ತುಂಬಾ ಒಂಟಿತನ ಕಾಡುತ್ತಿದೆ ಎಂದುಕೊಳ್ಳುವವರೆಲ್ಲ ಒಮ್ಮೆ ಬೆಕ್ಕನ್ನು ಸಾಕಿನೋಡಿ.

ಅಳಬೇಡ ಅಣ್ಣ ಅಳಬೇಡ; ಮಿಲಿಯನ್​ಗಟ್ಟಲೆ ಜನಕ್ಕೆ ಈ ವಿಡಿಯೋ ಇಷ್ಟವಾಗಿದೆ
Pet cat comforts crying hooman in viral video.
TV9 Web
| Edited By: ಶ್ರೀದೇವಿ ಕಳಸದ|

Updated on: Nov 17, 2022 | 1:55 PM

Share

Viral Video : ಮನುಷ್ಯರಿಗಿಂತ ಪ್ರಾಣಿಗಳೇ ನಿಮ್ಮ ಮನಸ್ಸಿಗೆ ಹೆಚ್ಚು ಸ್ಪಂದಿಸುತ್ತವೆ. ಬಾಯಿಬಿಟ್ಟು ಹೇಳಿದರೂ ಮನುಷ್ಯರು ಸಾಕಷ್ಟು ಸಲ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಪ್ರಾಣಿಗಳು ಮೌನದಲ್ಲಿಯೇ ನಿಮ್ಮ ಮನಸ್ಸಿನಲ್ಲಿ ನಡೆಯುವುದನ್ನು ಗ್ರಹಿಸುತ್ತವೆ ಮತ್ತು ಸ್ಪಂದಿಸುತ್ತವೆ. ಹಾಗಾಗಿಯೇ ಮನುಷ್ಯ ಸಾಕುಪ್ರಾಣಿಗಳನ್ನು ಮನುಷ್ಯಸಂಬಂಧಗಳಿಗಿಂತ ಹೆಚ್ಚು ನೆಚ್ಚುವುದು ಮತ್ತು ಪ್ರೀತಿಸುವುದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಈ ಮನುಷ್ಯ ಯಾಕೆ ಅಳುತ್ತಿದ್ದಾನೆ ಗೊತ್ತಿಲ್ಲ. ಆದರೆ ಅವನ ಬಳಿ ಬಂದ ಈ ಬೆಕ್ಕು ಮಾತ್ರ ನಿನ್ನೊಂದಿಗೆ ನಾನಿದ್ದೇನೆ ಎಂಬಂತೆ ಸಮಾಧಾನ ಹೇಳಿದೆ.

ನೆಟ್ಟಿಗರು ಈ ವಿಡಿಯೋ ನೋಡಿ ಕರಗುತ್ತಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 1.9 ಮಿಲಿಯನ್​ ಜನರು ನೋಡಿದ್ದಾರೆ. ಅನೇಕರು ತಮ್ಮ ತಮ್ಮ ಬೆಕ್ಕು ತಮಗೆ ಸ್ಪಂದಿಸಿದ ಭಾವುಕ ಕ್ಷಣಗಳ ವಿಡಿಯೋ ಅನ್ನು ಅಪ್​ಲೋಡ್ ಮಾಡಿದ್ದಾರೆ. ನಾಯಿ, ಬೆಕ್ಕು, ಆಕಳು ಮುಂತಾದ ಸಾಕುಪ್ರಾಣಿಗಳು ಬಹಳೇ ಸೂಕ್ಷ್ಮ. ಎಂಥ ಸಂದರ್ಭದಲ್ಲಿಯೂ ಸಾಕಿದವರನ್ನು ಬಿಟ್ಟು ಕದಲಲಾರವು.

ಎಂಥ ಭಾವುಕ ಕ್ಷಣಗಳಿವು ಎಂದು ನೆಟ್ಟಿಗರು ಬೆಕ್ಕಿನ ವಿಡಿಯೋಗೆ ಸ್ಪಂದಿಸಿದ್ದಾರೆ. ಇದ್ದರೆ ಇಂಥದೊಂದು ಆಪ್ತಜೀವ ಇರಬೇಕು. ಈ ಮನುಷ್ಯರ ಸಹವಾಸವೇ ಬೇಡ ಎಂದಿದ್ದಾರೆ ಮತ್ತೊಬ್ಬರು. ಬೆಕ್ಕುಗಳು ಎಂದೂ ಮನುಷ್ಯನನ್ನು ನೋಯಿಸುವುದಿಲ್ಲ ಬದಲಿಗೆ ಸಾಂತ್ವನ ನೀಡುತ್ತವೆ ಎಂದಿದ್ದಾರೆ ಮಗದೊಬ್ಬರು. ದಿನವೂ ನಾನು ಬೆಕ್ಕುಗಳ ವಿಡಿಯೋ ನೋಡಿಯೇ ಸಮಾಧಾನ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!