AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಬೇಡ ಅಣ್ಣ ಅಳಬೇಡ; ಮಿಲಿಯನ್​ಗಟ್ಟಲೆ ಜನಕ್ಕೆ ಈ ವಿಡಿಯೋ ಇಷ್ಟವಾಗಿದೆ

Cat : ನನಗ್ಯಾರೂ ಇಲ್ಲ, ನನ್ನ ನೋವನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು, ತುಂಬಾ ಒಂಟಿತನ ಕಾಡುತ್ತಿದೆ ಎಂದುಕೊಳ್ಳುವವರೆಲ್ಲ ಒಮ್ಮೆ ಬೆಕ್ಕನ್ನು ಸಾಕಿನೋಡಿ.

ಅಳಬೇಡ ಅಣ್ಣ ಅಳಬೇಡ; ಮಿಲಿಯನ್​ಗಟ್ಟಲೆ ಜನಕ್ಕೆ ಈ ವಿಡಿಯೋ ಇಷ್ಟವಾಗಿದೆ
Pet cat comforts crying hooman in viral video.
TV9 Web
| Edited By: |

Updated on: Nov 17, 2022 | 1:55 PM

Share

Viral Video : ಮನುಷ್ಯರಿಗಿಂತ ಪ್ರಾಣಿಗಳೇ ನಿಮ್ಮ ಮನಸ್ಸಿಗೆ ಹೆಚ್ಚು ಸ್ಪಂದಿಸುತ್ತವೆ. ಬಾಯಿಬಿಟ್ಟು ಹೇಳಿದರೂ ಮನುಷ್ಯರು ಸಾಕಷ್ಟು ಸಲ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಪ್ರಾಣಿಗಳು ಮೌನದಲ್ಲಿಯೇ ನಿಮ್ಮ ಮನಸ್ಸಿನಲ್ಲಿ ನಡೆಯುವುದನ್ನು ಗ್ರಹಿಸುತ್ತವೆ ಮತ್ತು ಸ್ಪಂದಿಸುತ್ತವೆ. ಹಾಗಾಗಿಯೇ ಮನುಷ್ಯ ಸಾಕುಪ್ರಾಣಿಗಳನ್ನು ಮನುಷ್ಯಸಂಬಂಧಗಳಿಗಿಂತ ಹೆಚ್ಚು ನೆಚ್ಚುವುದು ಮತ್ತು ಪ್ರೀತಿಸುವುದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಈ ಮನುಷ್ಯ ಯಾಕೆ ಅಳುತ್ತಿದ್ದಾನೆ ಗೊತ್ತಿಲ್ಲ. ಆದರೆ ಅವನ ಬಳಿ ಬಂದ ಈ ಬೆಕ್ಕು ಮಾತ್ರ ನಿನ್ನೊಂದಿಗೆ ನಾನಿದ್ದೇನೆ ಎಂಬಂತೆ ಸಮಾಧಾನ ಹೇಳಿದೆ.

ನೆಟ್ಟಿಗರು ಈ ವಿಡಿಯೋ ನೋಡಿ ಕರಗುತ್ತಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 1.9 ಮಿಲಿಯನ್​ ಜನರು ನೋಡಿದ್ದಾರೆ. ಅನೇಕರು ತಮ್ಮ ತಮ್ಮ ಬೆಕ್ಕು ತಮಗೆ ಸ್ಪಂದಿಸಿದ ಭಾವುಕ ಕ್ಷಣಗಳ ವಿಡಿಯೋ ಅನ್ನು ಅಪ್​ಲೋಡ್ ಮಾಡಿದ್ದಾರೆ. ನಾಯಿ, ಬೆಕ್ಕು, ಆಕಳು ಮುಂತಾದ ಸಾಕುಪ್ರಾಣಿಗಳು ಬಹಳೇ ಸೂಕ್ಷ್ಮ. ಎಂಥ ಸಂದರ್ಭದಲ್ಲಿಯೂ ಸಾಕಿದವರನ್ನು ಬಿಟ್ಟು ಕದಲಲಾರವು.

ಎಂಥ ಭಾವುಕ ಕ್ಷಣಗಳಿವು ಎಂದು ನೆಟ್ಟಿಗರು ಬೆಕ್ಕಿನ ವಿಡಿಯೋಗೆ ಸ್ಪಂದಿಸಿದ್ದಾರೆ. ಇದ್ದರೆ ಇಂಥದೊಂದು ಆಪ್ತಜೀವ ಇರಬೇಕು. ಈ ಮನುಷ್ಯರ ಸಹವಾಸವೇ ಬೇಡ ಎಂದಿದ್ದಾರೆ ಮತ್ತೊಬ್ಬರು. ಬೆಕ್ಕುಗಳು ಎಂದೂ ಮನುಷ್ಯನನ್ನು ನೋಯಿಸುವುದಿಲ್ಲ ಬದಲಿಗೆ ಸಾಂತ್ವನ ನೀಡುತ್ತವೆ ಎಂದಿದ್ದಾರೆ ಮಗದೊಬ್ಬರು. ದಿನವೂ ನಾನು ಬೆಕ್ಕುಗಳ ವಿಡಿಯೋ ನೋಡಿಯೇ ಸಮಾಧಾನ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ