AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಜಾ ಅಂದ್ರೆ ಇದಪ್ಪಾ! 7.5 ಟನ್​ ತೂಕದ ಟ್ರಕ್​ನಲ್ಲಿ ಸಣ್ಣ ಸ್ಕೂಟರ್​ ಕೊಂಡೊಯ್ದ ಪೊಲೀಸರು

ಟ್ರಕ್​ನಲ್ಲಿ ಸುಮಾರು 20-30 ಸ್ಕೂಟರ್​​ ಒಯ್ಯಬಹುದು. ಅಂತಹ ದೈತ್ಯಾಕಾರದ ಟ್ರಕ್​ ಮೂಲಕ ಆ ಚಿಕ್ಕ ಎಲೆಕ್ಟ್ರಾನಿಕ್​ ಸ್ಕೂಟರ್​ ತೆಗೆದುಕೊಂಡ ಹೋದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

Viral Video: ಮಜಾ ಅಂದ್ರೆ ಇದಪ್ಪಾ! 7.5 ಟನ್​ ತೂಕದ ಟ್ರಕ್​ನಲ್ಲಿ ಸಣ್ಣ ಸ್ಕೂಟರ್​ ಕೊಂಡೊಯ್ದ ಪೊಲೀಸರು
7.5 ಟನ್​ ತೂಕದ ಟ್ರಕ್​ನಲ್ಲಿ ಸಣ್ಣ ಸ್ಕೂಟರ್​ ಕೊಂಡೊಯ್ದ ಪೊಲೀಸರು
TV9 Web
| Edited By: |

Updated on: Jun 07, 2021 | 4:50 PM

Share

ವಶಪಡಿಸಿಕೊಂಡ 15 ಕಿಲೊಗ್ರಾಮ್​ಗಳಿಗಿಂತ ಕಡಿಮೆ ತೂಕವಿರುವ ಸ್ಕೂಟರ್​ಅನ್ನು ಸಾಗಿಸಲು 7.5 ಟನ್​ ತೂಕದ ಟ್ರಕ್​ಅನ್ನು ಬಳಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್​ನಲ್ಲಿ ನಡೆದ ಈ ಘಟನೆಯ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ದೃಶ್ಯ ನೋಡಿದ ನೆಟ್ಟಿಗರು ಹಾಸ್ಯ ಮಾಡಿದ್ದಾರೆ.

ವರದಿಗಳ ಪ್ರಕಾರ, ಜೂನ್​ 4ರಂದು ಪೊಲೀಸರು ಹೆರೆಫೋರ್ಡ್ನ್​ನಲ್ಲಿ ಸಣ್ಣ ಇಲೆಕ್ಟ್ರಾನಿಕ್​​ ಸ್ಕೂಟರ್​ಅನ್ನು ವಶಪಡಿಸಿಕೊಂಡರು. ನಂತರ ದೊಡ್ಡ್ ಟ್ರಕ್​ ಮೂಲಕ ಸ್ಕೂಟರ್​ಟನ್ನು ತೆಗೆದುಕೊಂಡು ಹೋಗಲಾಯಿತು. ಸಾರ್ವಜನಿಕ ರಸ್ತೆಗಳಲ್ಲಿ ಸವಾರನನ್ನು ಗುರುತಿಸಿದ ನಂತರ ಸ್ಕೂಟರ್​ಅನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿತು.

‘ಅಂತಹ ಸ್ಥಳಗಳಲ್ಲಿ ಇ-ಸ್ಕೂಟರ್​ ಬಳಸಿದರೆ ನೀವು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹಾಗೂ ನಿಗದಿತ ದಂಡವನ್ನೂ ಪಾವತಿಸಬೇಕಾಗುತ್ತದೆ’ ಎಂದು ಇಲಾಖೆ ಪೋಸ್ಟ್​ ಮಾಡಿದೆ. ಟ್ರಕ್​ನಲ್ಲಿ ಸುಮಾರು 20-30 ಸ್ಕೂಟರ್​​ ಒಯ್ಯಬಹುದು. ಅಂತಹ ದೈತ್ಯಾಕಾರದ ಟ್ರಕ್​ ಮೂಲಕ ಆ ಚಿಕ್ಕ ಎಲೆಕ್ಟ್ರಾನಿಕ್​ ಸ್ಕೂಟರ್​ ತೆಗೆದುಕೊಂಡ ಹೋದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಈ ದೃಶ್ಯ ಇದೀಗ ಬಾರೀ ಚರ್ಚೆಗೂ ಕಾರಣವಾಗಿದೆ.

ಚಿತ್ರ ಸಂಭಾಷಣೆಯು ಇದೀಗ ತರ್ಕವನ್ನು ಹುಟ್ಟುಹಾಕಿದ್ದು, ಅಷ್ಟು ಸಣ್ಣ ಸ್ಕೂಟರ್​ ತೆಗೆದುಕೊಂಡು ಹೋಗಲು ಅಷ್ಟು ದೊಡ್ಡ ಟ್ರಕ್​ ಬಳಸಿದ್ದೀರಿ ಎಂದು ಸಾಮಾಜಿಕ ಬಳಕೆದಾರರು ಹೇಳಿದ್ದಾರೆ. ಅಷ್ಟು ದೊಡ್ಡ ಟ್ರಕ್​ ಬಳಸಿ ಸಂಪನ್ಮ ಲವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಇನ್ನೋರ್ವರು ಹೇಳಿದ್ದಾರೆ. ಆ ಸ್ಕೂಟರ್​ಅನ್ನು ಮಡಚಿ ಕಾರಿನಲ್ಲಿ ಇರಿಸಿ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಚಿರಂಜೀವಿ ಸರ್ಜಾ ಇಲ್ಲದೇ ಉರುಳಿತು ಒಂದು ವರ್ಷ; ಅಣ್ಣನಿಗೆ ಧ್ರುವ ಭಾವುಕ ಪತ್ರ ವೈರಲ್​

Viral Video: ಪಾಕಿಸ್ತಾನದ ವೈದ್ಯೆಯ ಭಾವಪೂರ್ಣ ಹಾಡಿಗೆ ನೆಟ್ಟಿಗರು ಫಿದಾ!

Follow Us
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ