AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘನ್ ಬಾಲೆಯ ಎಬಿಸಿಡಿ ವಿಡಿಯೋ ಟ್ವೀಟ್ ಮಾಡಿದ ರವೀನಾ ಟಂಡನ್

Afghanistan : ಈ ಪುಟ್ಟ ಮಗುವಿಗೂ ಹಿಜಾಬ್​ ಬೇಕೆ? ಅಲ್ಲಿಯ ಹೆಣ್ಣುಮಕ್ಕಳು ತಾಲಿಬಾನಿಗಳ ಅಟ್ಟಹಾಸಕ್ಕೆ ಒಳಗಾಗಬಾರದು. ಹೆಣ್ಣುಮಕ್ಕಳಿಗೆ ಶಿಕ್ಷಣ ಬೇಕು. ಈ ಮಗುವಿನ ಮುಖದ ಮೇಲೆ ಅರಳಿರುವ ಸಂತೋಷ ನೋಡಿ ಎನ್ನುತ್ತಿದ್ದಾರೆ ಹಲವರು.

ಅಫ್ಘನ್ ಬಾಲೆಯ ಎಬಿಸಿಡಿ ವಿಡಿಯೋ ಟ್ವೀಟ್ ಮಾಡಿದ ರವೀನಾ ಟಂಡನ್
ಅಫ್ಗನ್​ ಬಾಲಕಿ ABCD ಹೇಳುತ್ತಿರುವುದು
TV9 Web
| Edited By: |

Updated on:Dec 10, 2022 | 9:39 AM

Share

Viral Video : ಅಫ್ಘಾನಿಸ್ತಾನದ ಪುಟ್ಟ ಹುಡುಗಿ ಇಂಗ್ಲಿಷ್​ನ ವರ್ಣಮಾಲೆಗಳನ್ನು ಹೇಳುತ್ತಿರುವ ವಿಡಿಯೋ ಅನ್ನು ನಟಿ ರವೀನಾ ಟಂಡನ್ ಟ್ವೀಟ್ ಮಾಡಿದ್ಧಾರೆ. 1.6 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಈ ವಿಡಿಯೋ ನೋಡಿದ್ದಾರೆ. ಸುಮಾರು 1,500 ಜನರು ಇಷ್ಟಪಟ್ಟಿದ್ದಾರೆ. ತಾಲಿಬಾನ್​ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವಾಗ ಇಂಥ ವಿಡಿಯೋಗಳು ಭರವಸೆಯನ್ನು ಹುಟ್ಟಿಸುತ್ತಿವೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಮೂಲತಃ ಈ ವಿಡಿಯೋ ಅನ್ನು ಪತ್ರಕರ್ತ ನಾಸರ್ ಖಾನ್​ ಎನ್ನುವವರು ಟ್ವೀಟ್ ಮಾಡಿದ್ದಾರೆ. ತರಗತಿಯೊಂದರಲ್ಲಿ ಶಿಕ್ಷಕಿ ಉದ್ದೇಶಪೂರ್ವಕವಾಗಿ ಇಂಗ್ಲಿಷ್​ ವರ್ಣಮಾಲೆಗಳನ್ನು ಹೇಳಲು ಈ ಪುಟ್ಟಹುಡುಗಿಗೆ ಪ್ರೋತ್ಸಾಹಿಸಿದ್ದಾರೆ. ಮುಖದ ಮೇಲಿನ ಉತ್ಸಾಹ ಮತ್ತು ಖುಷಿ ಗಮನಿಸಿ. ಅಲ್ಲಲ್ಲಿ ಒಂದೆರಡು ಅಕ್ಷರಗಳು ಲೋಪವಾದರೂ ಅದೆಲ್ಲ ಲೆಕ್ಕಕ್ಕುಂಟೇ?

ಅಫಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಬೇಕು, ತಾಲಿಬಾನಿಗಳ ಅಟ್ಟಹಾಸದಿಂದ ಅವರು ನರಳಬಾರದು ಎಂದು ನೆಟ್ಟಿಗರು ಹೇಳಿದ್ದಾರೆ. ಈ ಮಗುವಿನ ಉತ್ಸಾಹ ಸಂತೋಷ ವರ್ಣಿಸಲಸಾಧ್ಯ ಎಂದು ಒಬ್ಬರು ಹೇಳಿದ್ಧಾರೆ. ಪುಟ್ಟಮಗುವಿಗೆ ಹಿಜಾಬ್​ ಬೇಕೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ಮಕ್ಕಳಿಗೆಲ್ಲ ಶಿಕ್ಷಣ, ಜ್ಞಾನ ಅಪರಿಮಿತವಾಗಿ ಸಿಗಲಿ, ಅವರ ಮುಖಗಳು ಹೀಗೇ ನಗುವಿನಿಂದ ಕೂಡಿರಲಿ ಎಂದಿದ್ದಾರೆ ಮಗದೊಬ್ಬರು. ಅಲ್ಲಿರುವ ಹೆಣ್ಣುಮಕ್ಕಳಿಗೆ ಆರು ವರ್ಷ ತುಂಬುತ್ತಿದ್ದಂತೆ 40ರ ಗಂಡಸಿನೊಂದಿಗೆ ಮದುವೆಯಾಗುವ ಹಿಂಸೆ ಇದೆಯಲ್ಲ ಅದೆಲ್ಲ ಯಾವಾಗ ತಪ್ಪುತ್ತದೆಯೋ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:16 am, Sat, 10 December 22

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ