AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಜನ್ಯ ಪಾಠ: ಜಪಾನಿನ ಮಕ್ಕಳು ಈ ಬಸ್ಸಿನಲ್ಲಿ ಹೊರಟಿದ್ದಾರೆ, ಮುಂದೇನಾಗುತ್ತದೆ?

Japanese Kids : ಎಳವೆಯಲ್ಲಿಯೇ, ದಯೆ, ಸಹಾನುಭೂತಿಯಂಥ ಮಾನವೀಯತೆಯ ಬೀಜವನ್ನು ಮಕ್ಕಳಲ್ಲಿ ಬಿತ್ತಬೇಕು. ಅದಕ್ಕಾಗಿ ಪಠ್ಯಪುಸ್ತಕಕ್ಕಿಂತ ಇಂಥ ಪ್ರಾಯೋಗಿಕ ಪಾಠಗಳೇ ಬಹಳ ಮುಖ್ಯ. ನೆಟ್ಟಿಗರೂ ಇದನ್ನು ಬೆಂಬಲಿಸುತ್ತಿದ್ದಾರೆ.

ಸೌಜನ್ಯ ಪಾಠ: ಜಪಾನಿನ ಮಕ್ಕಳು ಈ ಬಸ್ಸಿನಲ್ಲಿ ಹೊರಟಿದ್ದಾರೆ, ಮುಂದೇನಾಗುತ್ತದೆ?
ಬಸ್ಸಿನಲ್ಲಿ ಸೌಜನ್ಯ ಪಾಠ
TV9 Web
| Edited By: |

Updated on:Dec 10, 2022 | 11:10 AM

Share

Viral Video : ಪಠ್ಯಪುಸ್ತಕಕ್ಕಿಂತ ಪ್ರಾಯೋಗಿಕವಾಗಿ ಹೇಳಿಕೊಡುವ ಪಾಠಗಳೇ ಮಗುವಿನ ಕಲಿಕೆಗೆ ಮತ್ತು ಬದುಕಿಗೆ ಹೆಚ್ಚು ಪೂರಕವಾಗಿರುತ್ತವೆ. ಜಪಾನಿನ ಶಿಕ್ಷಣ ವ್ಯವಸ್ಥೆ ಈ ವಿಷಯವಾಗಿ ಮುಂಚೂಣಿಯಲ್ಲಿದೆ. ಬಸ್ಸಿನಲ್ಲಿ ಪ್ರಯಾಣಿಸುವಾಗ ನಮ್ಮ ನಡೆವಳಿಕೆಗಳು ಎಷ್ಟು ಸೌಜನ್ಯಯುತವಾಗಿ ಕೂಡಿರಬೇಕು ಎಂಬ ಪ್ರಾತ್ಯಕ್ಷಿಕೆಯೊಂದಿಗೆ ಈ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಈ ವಿಡಿಯೋದಲ್ಲಿ. ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಎಸ್ ಅಧಿಕಾರಿ ಅವನೀಶ ಶರಣ ಟ್ವೀಟ್ ಮಾಡಿದ್ದಾರೆ.

ಸಹಾನುಭೂತಿ, ಕರುಣೆ, ದಯೆಯಂಥ ಮಾನವೀಯ ಗುಣಗಳ ಬೀಜವನ್ನು ಎಳವೆಯಲ್ಲಿಯೇ ಬಿತ್ತಬೇಕು. ಅದಕ್ಕೆ ಮನೆಯಲ್ಲಿಯೂ ಶಾಲೆಯಲ್ಲಿಯೂ ಮಾರ್ಗದರ್ಶನ ಅತ್ಯವಶ್ಯ. ಸಾರ್ವಜನಿಕ ಸ್ಥಳದಲ್ಲಿ ಮಕ್ಕಳು ಪರಸ್ಪರ ಸಂವಹನ ಹೇಗೆ ನಡೆಸಬೇಕು ಎನ್ನುವುದಂತೂ ಬಹಳೇ ಮುಖ್ಯ. ಈ ವಿಷಯವಾಗಿ ಬೋಧನೆ ಮಾಡಿದರೆ ಸಾಲದು. ಪ್ರಯೋಗ ಮತ್ತು ಪ್ರಾತ್ಯಕ್ಷಿಕೆ ಮೂಲಕವೇ ಮಕ್ಕಳಿಗೆ ಹೇಳಿಕೊಡಬೇಕು. ಅಂದಾಗ ಮಾತ್ರ ಮಕ್ಕಳ ಸ್ಮೃತಿಪಟಲದಲ್ಲಿ ಇಂಥ ವಿಷಯಗಳು ಅಚ್ಚಾಗುತ್ತವೆ.

ತರಗತಿಯೊಳಗೆ ‘ಕಲ್ಪನೆಯ ಬಸ್ಸು’ ಬಂದಿದೆ.  ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತಿದ್ದಾರೆ. ಡ್ರೈವರ್ ಗಾಡಿ ಓಡಿಸುತ್ತಿದ್ದಾರೆ. ವಯಸ್ಸಾದ ಅಜ್ಜ, ಗರ್ಭಿಣಿ, ಶಾಲಾ ಮಗು ಹೀಗೆ ಒಬ್ಬೊಬ್ಬರೇ ಬಂದಾಗ ಉಳಿದ ಪ್ರಯಾಣಿಕರು ಸೌಜನ್ಯಯುತವಾಗಿ ಆಸನವನ್ನು ಬಿಟ್ಟು ಕೊಡುತ್ತಾರೆ.

ಈ ವಿಡಿಯೋ ಅನ್ನು ಈತನಕ 4 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಇಂಥ ಪ್ರಾಯೋಗಿಕ ಪಾಠದ ಅವಶ್ಯಕತೆ ಜಗತ್ತಿನ ಎಲ್ಲ ಮಕ್ಕಳಿಗೂ ದೊರೆಯಬೇಕು ಎಂದು ಬೆಂಬಲ ಸೂಚಿಸಿದ್ದಾರೆ.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:09 am, Sat, 10 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ