ರಾ ರಾ ರಕ್ಕಮ್ಮ; ತನ್ನ ಮದುವೆಯ ದಿನ ವಧು ನರ್ತಿಸಿದ ವಿಡಿಯೋ ವೈರಲ್​

Ra Ra Rakkamma : ಸುದೀಪ್​ ಅಭಿನಯದ ಈ ಚಿತ್ರದಲ್ಲಿರುವ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಈಗಿಲ್ಲಿ ವಧು ತನ್ನ ಮದುವೆಯ ದಿನ ಮೈಚಳಿ ಬಿಟ್ಟು ಈ ಹಾಡಿಗೆ ಕುಣಿದದ್ದನ್ನು ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಏನಂತೀರಿ?

ರಾ ರಾ ರಕ್ಕಮ್ಮ; ತನ್ನ ಮದುವೆಯ ದಿನ ವಧು ನರ್ತಿಸಿದ ವಿಡಿಯೋ ವೈರಲ್​
ರಾ ರಾ ರಕ್ಕಮ್ಮ ಹಾಡಿಗೆ ನರ್ತಿಸಿದ ವಧು
Follow us
| Updated By: ಶ್ರೀದೇವಿ ಕಳಸದ

Updated on:Dec 01, 2022 | 1:07 PM

Viral Video : ಎಳೇಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಈ ಹಾಡು ಜನಪ್ರಿಯವಾಗಿದೆ. ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನೆಮಾದ ಹಾಡು ಇದು. ಲಯಪ್ರಧಾನವಾದ ಈ ಹಾಡನ್ನು ತೆಲುಗು ಗಾಯಕಿ ಮಂಗ್ಲಿ ಹಾಡಿದ್ದಾರೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ತನ್ನ ಮದುವೆಯ ದಿನ ಸ್ನೇಹಿತೆಯರೊಂದಿಗೆ ನರ್ತಿಸಿದ್ದಾರೆ. ವಧು ಹಿಂದೆ ಕುಳಿತು ನೃತ್ಯ ನೋಡುತ್ತಿದ್ಧಾನೆ. ವಧು ಮೈಚಳಿ ಬಿಟ್ಟು ಕುಣಿದ ರೀತಿ ನೆಟ್ಟಿಗರಲ್ಲಿ ಹುರುಪು ತುಂಬಿದೆ.

ಮುಂದೆ ಕುಳಿತು ನೃತ್ಯ ನೋಡುವುದನ್ನು ಬಿಟ್ಟು ಹಿಂದೆ ಏಕೆ ಕುಳಿತನೋ ಈ ವರಮಹಾಶಯ ಎಂದು ಈ ವಿಡಿಯೋ ನೋಡಿದ ಯಾರಿಗೂ ಅನ್ನಿಸುತ್ತದೆ. ಅಲ್ಲವೆ? ಈ ತನಕ ಈ ವಿಡಿಯೋ ಅನ್ನು ಸುಮಾರು 6.24 ಲಕ್ಷ ಜನರು ನೋಡಿದ್ದಾರೆ. ಪ್ರತಿಕ್ರಿಯಿಸದೇ ಇರಲು ಹೇಗೆ ಸಾಧ್ಯ? ಹಾಗಿದೆ ಈ ನೃತ್ಯ!

ಎಂಥ ಅಸಹ್ಯ ಪ್ರದರ್ಶನ ಇದು, ಇಂಥವನ್ನೆಲ್ಲ ಸಹಿಸಿಕೊಳ್ಳುವುದೂ ಕಷ್ಟವೇ ಎಂದಿದ್ದಾರೆ ಇನ್ನೊಬ್ಬರು. ನನ್ನ ಹುಡುಗಿ ಏನಾದರೂ ಹೀಗೆ ಕುಣಿದಿದ್ದರೆ ನಾನಂತೂ ಮಂಟಪದಿಂದಲೇ ಎದ್ದು ಓಡಿಬಿಡುತ್ತಿದ್ದೆ ಎಂದಿದ್ದಾರೆ ಮತ್ತೊಬ್ಬರು. ಮದುವೆಗೆ ಬಂದ ಅತಿಥಿಗಳನ್ನು ಸಂತೋಷಪಡಿಸಲು ನೃತ್ಯಕಲಾವಿದರನ್ನು ಕರೆಸಲಾಗುತ್ತಿತ್ತು. ಆದರೆ ಇದೆಲ್ಲವೂ ಇಂದು ಮಿತಿಮೀರಿ ಅಸಹ್ಯಕರವೆನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ಮದುವೆಗೆ ಅವರು ಟಿಕೆಟ್​ ಇಟ್ಟಿದ್ದರೆ ಖಂಡಿತ ಸಾಕಷ್ಟು ಹಣವನ್ನು ಗಳಿಸಬಹುದಿತ್ತು ಎಂದು ತಮಾಷೆ ಮಾಡಿದ್ದಾರೆ ಒಬ್ಬರು.

ಇದನ್ನೂ ನೋಡಿ : Viral Video : ಚಲಿಸುವ ಕಲ್ಯಾಣ ಮಂಟಪ; ಬಂತೈ ಬಂತೈ ಮನೆಗೇ ಬಂತೈ, ವಧುವರರು ತಯಾರೇ?

ಇದು ಮೂರ್ಖತನದ ಪರಮಾವಧಿ. ಮದುವೆಯ ಮಂಟಪವು ಇಂಥ ನೃತ್ಯಗಳಿಗೆ ಅಲ್ಲ. ಸಂಸ್ಕೃತಿಯನ್ನೇ ಇವರು ಮರೆಯುತ್ತಿದ್ದಾರೆ ಎಂದಿದ್ದಾರೆ ಹಲವರು. ನೀವು ಈ ಹಾಡಿನ ನೃತ್ಯವನ್ನು ಎಷ್ಟೇ ಅನುಕರಿಸಲು ನೋಡಿದರೂ ಮೂಲನೃತ್ಯಕ್ಕೆ ಸಾಟಿಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ ಒಬ್ಬರು. ಈ ಮದುಮಗನ ಬಗ್ಗೆ ಕನಿಕರವೆನ್ನಿಸುತ್ತದೆ, ಈ ವಧು ಸಾರ್ವಜನಿಕವಾಗಿ ಐಟಮ್​ ಸಾಂಗ್​ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿ ಎಂದಿದ್ದಾರೆ ಮತ್ತೊಬ್ಬರು.

ನನ್ನ ಮದುವೆಯ ದಿನ ಹುಡುಗಿಯಾದವಳು ಹೀಗೆ ನರ್ತಿಸಿದ್ದರೆ ಖಂಡಿತ ನಾನು ಈ ಮದುವೆಯನ್ನು ಮುರಿದುಕೊಳ್ಳುತ್ತಿದ್ದೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟೂ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:07 pm, Thu, 1 December 22

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು