AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜನ ಸೈಕಲ್ ಸ್ಟಂಟ್; ವಯಸ್ಸು ಅನ್ನೋದು ಕೇವಲ ಅಂಕಿಯಷ್ಟೇ!

Cycle Stunts : ಅಜ್ಜಾ, ನೀನೇ ನಿಜವಾದ ಶ್ರೀಮಂತ. ಆರೋಗ್ಯ ಆಯಸ್ಸು, ಸಂತೋಷ ಮತ್ತು ಉತ್ಸಾಹದೊಂದಿಗೆ ನಿನ್ನ ಪಾಡಿಗೆ ನೀ ಸಾಹಸವನ್ನೂ ಮಾಡುತ್ತಿದ್ದೀ ಎಂದು ಬೆನ್ನು ತಟ್ಟುತ್ತಿದ್ದಾರೆ ನೆಟ್ಟಿಗರು.

ಅಜ್ಜನ ಸೈಕಲ್ ಸ್ಟಂಟ್; ವಯಸ್ಸು ಅನ್ನೋದು ಕೇವಲ ಅಂಕಿಯಷ್ಟೇ!
ಸೈಕಲ್ ಸ್ಟಂಟ್​ನಲ್ಲಿ ಈ ಅಜ್ಜ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 01, 2022 | 3:24 PM

Viral Video : ಕಲಿಕೆಗೆ ಯಾವ ವಯಸ್ಸು? ಆದರೆ ಸಾಹಸಕ್ಕೆ!? ಅದಕ್ಕೂ ಇಲ್ಲ ಅನ್ನುತ್ತಿದ್ದಾನೆ ಈ ಅಜ್ಜ. ಹೀಗೆ ಈ ಮೋಡಮುಸುಕಿದ ವಾತಾವರಣದಲ್ಲಿ ಜಿಬುರು ಮಳೆಯಲ್ಲಿ ಈ ಅಜ್ಜ ಮುಖ್ಯರಸ್ತೆಯಲ್ಲಿ ಅತಿವೇಗದಲ್ಲಿ ಸೈಕಲ್​ ಮೇಲೆ ಸ್ಟಂಟ್ ಮಾಡಿಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ನೋಡಿದ ಯಾರಿಗೂ ಅಲಾ ಅಜ್ಜನೇ! ಎನ್ನಿಸದೇ ಇರಲು. ನೀವೀಗ ಚಳಿಯಲ್ಲಿ ಮುದುರಿಕೊಂಡು ಕಾಫಿಗಾಗಿ ಧ್ಯಾನಿಸುತ್ತ ಕುಳಿತಿರಬಹುದು. ಆದರೆ ಈ ಅಜ್ಜನ ವಿಡಿಯೋ ನೋಡುತ್ತಿದ್ದಂತೆ ಸೈಕಲ್ ಏರಬೇಕೆಂದು ಮನಸ್ಸಾದರೂ ಆದೀತು.

ಮಳೆಯಲ್ಲಿ ಓಡಾಡುವುದೇ ಕಷ್ಟವೆಂದು ಮುದುರಿ ಕುಳಿತುಕೊಳ್ಳುವ ಜನ ನಾವು. ಅದರಲ್ಲೂ ಸೈಕಲ್​ ಮೇಲೆ! ಆದರೆ ಈ ಅಜ್ಜನ ಉತ್ಸಾಹ ನೋಡಿ, ತನ್ನಪಾಡಿಗೆ ತಾ ಹೇಗೆ ಗಾಳಿಯಲ್ಲಿ ತೇಲುತ್ತಿದ್ದಾನೆಂದು. ಈ ವಯಸ್ಸಿನಲ್ಲಿಯೇ ಇಷ್ಟೊಂದು ಸಾಹಸ ಇನ್ನು ವಯಸ್ಸಿದ್ದಾಗ ಏನೆಲ್ಲ ಸಾಹಸ ಮಾಡಿರಬಹುದು ಎನ್ನುವ ಅನುಮಾನ ಏಳದೆ ಇರುತ್ತದೆಯೇ?

ಹೀಗೆ ಸೈಕಲ್​ ಮೇಲೆ ಮೈಮರೆತು ಹೋಗುತ್ತಿರುವಾಗ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ. ಯಾವ ಊರು ಏನು ಹೆಸರು ಏನೊಂದೂ ಗೊತ್ತಿಲ್ಲ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 85,000 ಜನ ನೋಡಿದ್ದಾರೆ. ಇವನೇ ನಿಜವಾದ ಶ್ರೀಮಂತ, ಏಕೆಂದರೆ ಇಷ್ಟೊಂದು ಆಯಸ್ಸು, ಆರೋಗ್ಯವನ್ನು ಪಡೆದುಕೊಂಡು ಉತ್ಸಾಹವನ್ನೂ ಉಳಿಸಿಕೊಂಡಿದ್ದಾನೆ ಎಂದಿದ್ದಾರೆ ಒಬ್ಬರು. ಜೀವನವನ್ನು ಹೀಗೆ ಸಂತೋಷದಿಂದ ಅನುಭವಿಸಬೇಕು ಎಂದಿದ್ದಾರೆ ಇನ್ನೊಬ್ಬರು. ಅಳುವುದಕ್ಕೆ, ಕೊರಗುವುದಕ್ಕೆ ಸಮಯವಿಲ್ಲ ಎನ್ನುವ ಹಾಗೆ ಹೀಗೆ ಬದುಕನ್ನು ಎದುರುಗೊಳ್ಳಬೇಕು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ