AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜನ ಸೈಕಲ್ ಸ್ಟಂಟ್; ವಯಸ್ಸು ಅನ್ನೋದು ಕೇವಲ ಅಂಕಿಯಷ್ಟೇ!

Cycle Stunts : ಅಜ್ಜಾ, ನೀನೇ ನಿಜವಾದ ಶ್ರೀಮಂತ. ಆರೋಗ್ಯ ಆಯಸ್ಸು, ಸಂತೋಷ ಮತ್ತು ಉತ್ಸಾಹದೊಂದಿಗೆ ನಿನ್ನ ಪಾಡಿಗೆ ನೀ ಸಾಹಸವನ್ನೂ ಮಾಡುತ್ತಿದ್ದೀ ಎಂದು ಬೆನ್ನು ತಟ್ಟುತ್ತಿದ್ದಾರೆ ನೆಟ್ಟಿಗರು.

ಅಜ್ಜನ ಸೈಕಲ್ ಸ್ಟಂಟ್; ವಯಸ್ಸು ಅನ್ನೋದು ಕೇವಲ ಅಂಕಿಯಷ್ಟೇ!
ಸೈಕಲ್ ಸ್ಟಂಟ್​ನಲ್ಲಿ ಈ ಅಜ್ಜ
TV9 Web
| Updated By: ಶ್ರೀದೇವಿ ಕಳಸದ|

Updated on: Dec 01, 2022 | 3:24 PM

Share

Viral Video : ಕಲಿಕೆಗೆ ಯಾವ ವಯಸ್ಸು? ಆದರೆ ಸಾಹಸಕ್ಕೆ!? ಅದಕ್ಕೂ ಇಲ್ಲ ಅನ್ನುತ್ತಿದ್ದಾನೆ ಈ ಅಜ್ಜ. ಹೀಗೆ ಈ ಮೋಡಮುಸುಕಿದ ವಾತಾವರಣದಲ್ಲಿ ಜಿಬುರು ಮಳೆಯಲ್ಲಿ ಈ ಅಜ್ಜ ಮುಖ್ಯರಸ್ತೆಯಲ್ಲಿ ಅತಿವೇಗದಲ್ಲಿ ಸೈಕಲ್​ ಮೇಲೆ ಸ್ಟಂಟ್ ಮಾಡಿಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ನೋಡಿದ ಯಾರಿಗೂ ಅಲಾ ಅಜ್ಜನೇ! ಎನ್ನಿಸದೇ ಇರಲು. ನೀವೀಗ ಚಳಿಯಲ್ಲಿ ಮುದುರಿಕೊಂಡು ಕಾಫಿಗಾಗಿ ಧ್ಯಾನಿಸುತ್ತ ಕುಳಿತಿರಬಹುದು. ಆದರೆ ಈ ಅಜ್ಜನ ವಿಡಿಯೋ ನೋಡುತ್ತಿದ್ದಂತೆ ಸೈಕಲ್ ಏರಬೇಕೆಂದು ಮನಸ್ಸಾದರೂ ಆದೀತು.

ಮಳೆಯಲ್ಲಿ ಓಡಾಡುವುದೇ ಕಷ್ಟವೆಂದು ಮುದುರಿ ಕುಳಿತುಕೊಳ್ಳುವ ಜನ ನಾವು. ಅದರಲ್ಲೂ ಸೈಕಲ್​ ಮೇಲೆ! ಆದರೆ ಈ ಅಜ್ಜನ ಉತ್ಸಾಹ ನೋಡಿ, ತನ್ನಪಾಡಿಗೆ ತಾ ಹೇಗೆ ಗಾಳಿಯಲ್ಲಿ ತೇಲುತ್ತಿದ್ದಾನೆಂದು. ಈ ವಯಸ್ಸಿನಲ್ಲಿಯೇ ಇಷ್ಟೊಂದು ಸಾಹಸ ಇನ್ನು ವಯಸ್ಸಿದ್ದಾಗ ಏನೆಲ್ಲ ಸಾಹಸ ಮಾಡಿರಬಹುದು ಎನ್ನುವ ಅನುಮಾನ ಏಳದೆ ಇರುತ್ತದೆಯೇ?

ಹೀಗೆ ಸೈಕಲ್​ ಮೇಲೆ ಮೈಮರೆತು ಹೋಗುತ್ತಿರುವಾಗ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ. ಯಾವ ಊರು ಏನು ಹೆಸರು ಏನೊಂದೂ ಗೊತ್ತಿಲ್ಲ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 85,000 ಜನ ನೋಡಿದ್ದಾರೆ. ಇವನೇ ನಿಜವಾದ ಶ್ರೀಮಂತ, ಏಕೆಂದರೆ ಇಷ್ಟೊಂದು ಆಯಸ್ಸು, ಆರೋಗ್ಯವನ್ನು ಪಡೆದುಕೊಂಡು ಉತ್ಸಾಹವನ್ನೂ ಉಳಿಸಿಕೊಂಡಿದ್ದಾನೆ ಎಂದಿದ್ದಾರೆ ಒಬ್ಬರು. ಜೀವನವನ್ನು ಹೀಗೆ ಸಂತೋಷದಿಂದ ಅನುಭವಿಸಬೇಕು ಎಂದಿದ್ದಾರೆ ಇನ್ನೊಬ್ಬರು. ಅಳುವುದಕ್ಕೆ, ಕೊರಗುವುದಕ್ಕೆ ಸಮಯವಿಲ್ಲ ಎನ್ನುವ ಹಾಗೆ ಹೀಗೆ ಬದುಕನ್ನು ಎದುರುಗೊಳ್ಳಬೇಕು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ