AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ

Panda playing in the snow : ನಾನೂ ಪಾಂಡಾ ಆಗಿ ಹುಟ್ಟಬಾರದಿತ್ತೇ? ಈಗಲೇ ಅಲ್ಲಿಗೆ ಬಂದುಬಿಡಬೇಕು ಎನ್ನಿಸುತ್ತಿದೆ ಎಂದು ನೆಟ್ಟಿಗರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. 31.5 ಮಿಲಿಯನ್ ಜನಕ್ಕಿದು ಇಷ್ಟವಾಗಿದೆ ಎಂದಮೇಲೆ...

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ
ಹಿಮದಾಟದಲ್ಲಿ ಪಾಂಡಾ
TV9 Web
| Edited By: ಶ್ರೀದೇವಿ ಕಳಸದ|

Updated on:Nov 28, 2022 | 1:41 PM

Share

Viral Video : ನಡೆಯುತ್ತಲೇ ಧೊಪ್ಪನೆ ಬೀಳುತ್ತ ಉರುಳಾಡುತ್ತ ಹತ್ತಿಯುಂಡೆಯಂತೆ ಮುದ್ದುಮುದ್ದಾಗಿ ಚಲಿಸುವ ಪಾಂಡಾಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈಗ ವೈರಲ್ ಆಗಿರುವ ಈ ವಿಡಿಯೋ ಹಳೆಯದೇ. ಆದರೆ ಮತ್ತೆ ಮತ್ತೆ ನೋಡಬೇಕು ಎನ್ನಿಸುವಷ್ಟು ಮುದ್ದಾಗಿದೆ ಇದರಲ್ಲಿರುವ ಪಾಂಡಾ. ಹಿಮದಲ್ಲಿ ಬೀಳುತ್ತ ಏಳುತ್ತ ಜಾರುತ್ತ ತನ್ನನ್ನೇ ತಾ ಮರೆತುಹೋಗಿದೆ. ಇದನ್ನು ನೋಡುತ್ತಿರುವ ನೀವು ನಿಮ್ಮನ್ನೇ ಕ್ಷಣ ಮರೆಯಲೂಬಹುದು.

They can’t survive in the wild.. pic.twitter.com/t84RceWxhJ

ಈ ಮನಮೋಹಕ ದೃಶ್ಯ ನೆಟ್ಟಿಗರನ್ನು ಮನವನ್ನು ತಣಿಸುತ್ತಿದೆ. 2016ರಲ್ಲಿ ಸ್ಮಿತ್​ಸೋನಿಯನ್​ನ ರಾಷ್ಟ್ರೀಯ ಮೃಗಾಲಯ ಮತ್ತು ಸಂರಕ್ಷಣಾ ಜೀವಶಾಸ್ತ್ರ ಸಂಸ್ಥೆಯು ಈ ವಿಡಿಯೋ ಅನ್ನು ಟ್ವೀಟ್ ಮಾಡಿತ್ತು. ಇದೀಗ @buitengebieden ಮರುಟ್ವೀಟ್ ಮಾಡಿದೆ. ಈತನಕ ಈ ವಿಡಿಯೋ ಅನ್ನು 31.5 ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಗಟ್ಟಲೆ ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ನಾನು ಈಗಲೇ ಈ ಪಾಂಡಾವನ್ನು ತಬ್ಬಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ ಒಬ್ಬರು. ಬಹಳ ಮಜಾ ಪ್ರಾಣಿಗಳು ಇವು. ಈಗಲೇ ಅವುಗಳೊಂದಿಗೆ ಹೋಗಿ ಕುಪ್ಪಳಿಸಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ನಾನೂ ಪಾಂಡಾ ಆಗಿಯೇ ಹುಟ್ಟಬೇಕಿತ್ತು, ಆಗ ಹೀಗೆ ಆನಂದದಿಂದ ವಿಹರಿಸಬಹುದಿತ್ತು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡುತ್ತಿರುವ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ಆಗುತ್ತಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 1:40 pm, Mon, 28 November 22

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​