AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ

Panda playing in the snow : ನಾನೂ ಪಾಂಡಾ ಆಗಿ ಹುಟ್ಟಬಾರದಿತ್ತೇ? ಈಗಲೇ ಅಲ್ಲಿಗೆ ಬಂದುಬಿಡಬೇಕು ಎನ್ನಿಸುತ್ತಿದೆ ಎಂದು ನೆಟ್ಟಿಗರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. 31.5 ಮಿಲಿಯನ್ ಜನಕ್ಕಿದು ಇಷ್ಟವಾಗಿದೆ ಎಂದಮೇಲೆ...

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ
ಹಿಮದಾಟದಲ್ಲಿ ಪಾಂಡಾ
TV9 Web
| Edited By: |

Updated on:Nov 28, 2022 | 1:41 PM

Share

Viral Video : ನಡೆಯುತ್ತಲೇ ಧೊಪ್ಪನೆ ಬೀಳುತ್ತ ಉರುಳಾಡುತ್ತ ಹತ್ತಿಯುಂಡೆಯಂತೆ ಮುದ್ದುಮುದ್ದಾಗಿ ಚಲಿಸುವ ಪಾಂಡಾಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈಗ ವೈರಲ್ ಆಗಿರುವ ಈ ವಿಡಿಯೋ ಹಳೆಯದೇ. ಆದರೆ ಮತ್ತೆ ಮತ್ತೆ ನೋಡಬೇಕು ಎನ್ನಿಸುವಷ್ಟು ಮುದ್ದಾಗಿದೆ ಇದರಲ್ಲಿರುವ ಪಾಂಡಾ. ಹಿಮದಲ್ಲಿ ಬೀಳುತ್ತ ಏಳುತ್ತ ಜಾರುತ್ತ ತನ್ನನ್ನೇ ತಾ ಮರೆತುಹೋಗಿದೆ. ಇದನ್ನು ನೋಡುತ್ತಿರುವ ನೀವು ನಿಮ್ಮನ್ನೇ ಕ್ಷಣ ಮರೆಯಲೂಬಹುದು.

They can’t survive in the wild.. pic.twitter.com/t84RceWxhJ

ಈ ಮನಮೋಹಕ ದೃಶ್ಯ ನೆಟ್ಟಿಗರನ್ನು ಮನವನ್ನು ತಣಿಸುತ್ತಿದೆ. 2016ರಲ್ಲಿ ಸ್ಮಿತ್​ಸೋನಿಯನ್​ನ ರಾಷ್ಟ್ರೀಯ ಮೃಗಾಲಯ ಮತ್ತು ಸಂರಕ್ಷಣಾ ಜೀವಶಾಸ್ತ್ರ ಸಂಸ್ಥೆಯು ಈ ವಿಡಿಯೋ ಅನ್ನು ಟ್ವೀಟ್ ಮಾಡಿತ್ತು. ಇದೀಗ @buitengebieden ಮರುಟ್ವೀಟ್ ಮಾಡಿದೆ. ಈತನಕ ಈ ವಿಡಿಯೋ ಅನ್ನು 31.5 ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಗಟ್ಟಲೆ ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ನಾನು ಈಗಲೇ ಈ ಪಾಂಡಾವನ್ನು ತಬ್ಬಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ ಒಬ್ಬರು. ಬಹಳ ಮಜಾ ಪ್ರಾಣಿಗಳು ಇವು. ಈಗಲೇ ಅವುಗಳೊಂದಿಗೆ ಹೋಗಿ ಕುಪ್ಪಳಿಸಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ನಾನೂ ಪಾಂಡಾ ಆಗಿಯೇ ಹುಟ್ಟಬೇಕಿತ್ತು, ಆಗ ಹೀಗೆ ಆನಂದದಿಂದ ವಿಹರಿಸಬಹುದಿತ್ತು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡುತ್ತಿರುವ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ಆಗುತ್ತಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 1:40 pm, Mon, 28 November 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್