AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ

Panda playing in the snow : ನಾನೂ ಪಾಂಡಾ ಆಗಿ ಹುಟ್ಟಬಾರದಿತ್ತೇ? ಈಗಲೇ ಅಲ್ಲಿಗೆ ಬಂದುಬಿಡಬೇಕು ಎನ್ನಿಸುತ್ತಿದೆ ಎಂದು ನೆಟ್ಟಿಗರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. 31.5 ಮಿಲಿಯನ್ ಜನಕ್ಕಿದು ಇಷ್ಟವಾಗಿದೆ ಎಂದಮೇಲೆ...

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ
ಹಿಮದಾಟದಲ್ಲಿ ಪಾಂಡಾ
TV9 Web
| Edited By: |

Updated on:Nov 28, 2022 | 1:41 PM

Share

Viral Video : ನಡೆಯುತ್ತಲೇ ಧೊಪ್ಪನೆ ಬೀಳುತ್ತ ಉರುಳಾಡುತ್ತ ಹತ್ತಿಯುಂಡೆಯಂತೆ ಮುದ್ದುಮುದ್ದಾಗಿ ಚಲಿಸುವ ಪಾಂಡಾಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈಗ ವೈರಲ್ ಆಗಿರುವ ಈ ವಿಡಿಯೋ ಹಳೆಯದೇ. ಆದರೆ ಮತ್ತೆ ಮತ್ತೆ ನೋಡಬೇಕು ಎನ್ನಿಸುವಷ್ಟು ಮುದ್ದಾಗಿದೆ ಇದರಲ್ಲಿರುವ ಪಾಂಡಾ. ಹಿಮದಲ್ಲಿ ಬೀಳುತ್ತ ಏಳುತ್ತ ಜಾರುತ್ತ ತನ್ನನ್ನೇ ತಾ ಮರೆತುಹೋಗಿದೆ. ಇದನ್ನು ನೋಡುತ್ತಿರುವ ನೀವು ನಿಮ್ಮನ್ನೇ ಕ್ಷಣ ಮರೆಯಲೂಬಹುದು.

They can’t survive in the wild.. pic.twitter.com/t84RceWxhJ

ಈ ಮನಮೋಹಕ ದೃಶ್ಯ ನೆಟ್ಟಿಗರನ್ನು ಮನವನ್ನು ತಣಿಸುತ್ತಿದೆ. 2016ರಲ್ಲಿ ಸ್ಮಿತ್​ಸೋನಿಯನ್​ನ ರಾಷ್ಟ್ರೀಯ ಮೃಗಾಲಯ ಮತ್ತು ಸಂರಕ್ಷಣಾ ಜೀವಶಾಸ್ತ್ರ ಸಂಸ್ಥೆಯು ಈ ವಿಡಿಯೋ ಅನ್ನು ಟ್ವೀಟ್ ಮಾಡಿತ್ತು. ಇದೀಗ @buitengebieden ಮರುಟ್ವೀಟ್ ಮಾಡಿದೆ. ಈತನಕ ಈ ವಿಡಿಯೋ ಅನ್ನು 31.5 ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಗಟ್ಟಲೆ ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ನಾನು ಈಗಲೇ ಈ ಪಾಂಡಾವನ್ನು ತಬ್ಬಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ ಒಬ್ಬರು. ಬಹಳ ಮಜಾ ಪ್ರಾಣಿಗಳು ಇವು. ಈಗಲೇ ಅವುಗಳೊಂದಿಗೆ ಹೋಗಿ ಕುಪ್ಪಳಿಸಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ನಾನೂ ಪಾಂಡಾ ಆಗಿಯೇ ಹುಟ್ಟಬೇಕಿತ್ತು, ಆಗ ಹೀಗೆ ಆನಂದದಿಂದ ವಿಹರಿಸಬಹುದಿತ್ತು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡುತ್ತಿರುವ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ಆಗುತ್ತಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 1:40 pm, Mon, 28 November 22

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ