AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾಗೋರ್​ರಿಂದ ಮೈಕೆಲ್​ ಜಾಕ್ಸನ್​ವರೆಗೆ ಖ್ಯಾತನಾಮರನ್ನು ಗುರುತಿಸುವ ಈ ಪುಟಾಣಿ

Wonder Kid : ಇವರು ಸಚಿನ್​ ತೆಂಡೂಲ್ಕರ್​, ಇವರು ಮಹಾತ್ಮಾ ಗಾಂಧೀ, ಇವರು ಮದರ್ ತೆರೇಸಾ, ಇವರು ನೆಲ್ಸನ್​ ಮಂಡೇಲಾ, ಇವರು ಥಾಮಸ್ ಅಲ್ವಾ ಎಡಿಸನ್​... ಪಟಪಟ ಅರಳು ಹುರಿದಂತೆ. ನೋಡಿ ಈ ಮಗುವಿನ ವಿಡಿಯೋ.

ಟ್ಯಾಗೋರ್​ರಿಂದ ಮೈಕೆಲ್​ ಜಾಕ್ಸನ್​ವರೆಗೆ ಖ್ಯಾತನಾಮರನ್ನು ಗುರುತಿಸುವ ಈ ಪುಟಾಣಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 28, 2022 | 3:47 PM

ವೈರಲ್ ವಿಡಿಯೋ : ಹಸಿಗೋಡೆಯಲ್ಲಿ ಹರಳು ಒಗೆದಂತೆ ಮಕ್ಕಳ ಮನಸ್ಸು, ಹೃದಯ. ಎಳವೆಯಲ್ಲಿ ಏನನ್ನು ಧಾರೆ ಎರೆಯುತ್ತೇವೋ ಅದನ್ನೇ ಸ್ವೀಕರಿಸುತ್ತದೆ ಮಗು. ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿರುವ ಚುರುಕಾದ ಹೆಣ್ಣುಮಗುವನ್ನು ಗಮನಿಸಿ. 60 ಸೆಕೆಂಡುಗಳ ಈ ವಿಡಿಯೋ ನಿಮ್ಮನ್ನು ಬೆರಗಾಗಿಸದೇ ಇರದು.  ಖ್ಯಾತನಾಮರ ಫೋಟೋ ತೋರಿಸುತ್ತಿದ್ದಂತೆ ಪಟಪಟನೆ ಹೇಗೆ ಉತ್ತರಿಸುತ್ತದೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಗುವಿನ ತಾಯಿ ಒಬ್ಬೊಬ್ಬರ ಫೋಟೋ ತೋರಿಸುತ್ತಿದ್ದಂತೆ ಪುಟಿಚೆಂಡಿನಂತೆ ಉತ್ತರಿಸುತ್ತಾ ಹೋಗುತ್ತದೆ. ನವೆಂಬರ್​ 27ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. 70,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಸುಮಾರು 700 ಜನ ರೀಟ್ವೀಟ್ ಮಾಡಿದ್ದಾರೆ.

ಈ ಮಗುವಿನ ವಿಡಿಯೋ ನೋಡಿದ ನೂರಾರು ಜನರು ಇದರ ಸ್ಮರಣಶಕ್ತಿಯನ್ನು, ಲವಲವಿಕೆಯನ್ನು ಕೊಂಡಾಡಿದ್ದಾರೆ. ಮಗುವನ್ನು ಈ ರೀತಿಯಲ್ಲಿ ಬೆಳೆಸುತ್ತಿರುವ ತಾಯಿಗೆ ಶರಣು ಎಂದಿದ್ದಾರೆ ಹಲವರು. ಈ ವಯಸ್ಸಿನಲ್ಲಿ ಮಕ್ಕಳು ಒಂದೆಡೆ ಕುಳಿತುಕೊಳ್ಳುವುದೇ ಕಷ್ಟ. ಆದರೆ ಇಂಥ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಪಾಠವೂ ಆಟವಾಗುತ್ತದೆ ಎಂದಿದ್ದಾರೆ ಕೆಲವರು. ಇನ್ನೂ ಕೆಲವರು ತಮ್ಮತಮ್ಮ ಮಕ್ಕಳ ವಿಡಿಯೋಗಳನ್ನು ಹಾಕಿ ಈ ಮಗುವಿನ ಜಾಣತನವನ್ನೂ ನೋಡಿ ಎಂದಿದ್ದಾರೆ.

ನಿಮ್ಮ ಮನೆಯ ಪುಟ್ಟ ಮಕ್ಕಳನ್ನು ಹೇಗೆ ಆಟದ ಮೂಲಕ ಪಾಠದಲ್ಲಿ ತೊಡಗಿಸುತ್ತಿದ್ದೀರಿ? ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:46 pm, Mon, 28 November 22

ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ