AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stripes On Road: ರಸ್ತೆ ಮೇಲೆ ಕಂಡುಬರುವ ವಿವಿಧ ಬಣ್ಣದ ಗೆರೆಗಳ ಅರ್ಥವೇನು?

ರಸ್ತೆ ಮೇಲೆ ಬಿಳಿ ಬಣ್ಣದ, ಹಳದಿ ಬಣ್ಣದ ಗೆರೆಗಳನ್ನು ನೀವು ಗಮನಿಸಿರಬಹುದು. ಈ ರೀತಿ ಗರೆಗಳನ್ನು ಹಾಕಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ಈ ರೀತಿಯ ಗೆರೆಗಳು ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Stripes On Road: ರಸ್ತೆ ಮೇಲೆ ಕಂಡುಬರುವ ವಿವಿಧ ಬಣ್ಣದ ಗೆರೆಗಳ ಅರ್ಥವೇನು?
ಅಕ್ಷತಾ ವರ್ಕಾಡಿ
|

Updated on: Oct 28, 2024 | 6:41 PM

Share

ರಸ್ತೆ ಮೇಲೆ ಬಿಳಿ ಬಣ್ಣದ, ಹಳದಿ ಬಣ್ಣದ ಗೆರೆಗಳನ್ನು ನೀವು ಗಮನಿಸಿರಬಹುದು. ಕೆಲವೊಂದು ಭಾಗಗಳಲ್ಲಿ ಉದ್ದನೆಯ ಗೆರೆಗಳಿದ್ದರೆ, ಕೆಲವು ಭಾಗಗಳಲ್ಲಿ ಚಿಕ್ಕ ಚಿಕ್ಕ ಅಥವಾ ಎರಡೆರಡು ಗೆರೆಗಳನ್ನು ನೀವು ನೋಡಿರುತ್ತೀರಿ. ಈ ರೀತಿ ಗರೆಗಳನ್ನು ಹಾಕಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ ಈ ರೀತೀಯ ಗೆರೆಗಳು ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮಧ್ಯಭಾಗದಲ್ಲಿ ಸಣ್ಣಗೆರೆ:

ಮೊದಲನೆಯದಾಗಿ, ರಸ್ತೆಯಲ್ಲಿ ಕಂಡುಬರುವ ಈ ಸಣ್ಣ ರೇಖೆಗಳು, ಏನು ಸೂಚಿಸುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ. ವಾಸ್ತವವಾಗಿ, ಈ ರೇಖೆಗಳು ಎಡದಲ್ಲಿ ಹೋಗುವ ವಾಹನ ಸವಾರರು ಬಲಭಾಗದಿಂದ ಮುಂದಿರುವ ವಾಹನಗಳನ್ನು ಎಚ್ಚರಿಕೆಯಿಂದ ಹಿಂದಿಕ್ಕಬಹುದು ಎಂಬ ಅರ್ಥವನ್ನು ಸೂಚಿಸುತ್ತದೆ.

ಬಿಳಿಬಣ್ಣದ ಉದ್ದನೆಯ ಗೆರೆಗಳು:

ರಸ್ತೆಯ ಮಧ್ಯದಲ್ಲಿ ಕಂಡುಬರುವ ಉದ್ದನೆಯ ರೇಖೆ ಅಂದರೆ ನಡುವೆ ಅಂತರವಿಲ್ಲದೇ ನೇರವಾಗಿದ್ದರೆ ಅದು ಏನು ಸೂಚಿಸುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ. ವಾಸ್ತವವಾಗಿ, ರಸ್ತೆಯ ಮಧ್ಯದಲ್ಲಿ ಅಂತರವಿಲ್ಲದೆ ಉದ್ದವಾದ ಬಿಳಿ ಗೆರೆ ಇದ್ದರೆ, ಮುಂದಿನ ವಾಹನವನ್ನು ಓವರ್ ಟೇಕ್ ಮಾಡಬಾರದು, ನಿಧಾನವಾಗಿ ಚಲಿಸಿ ಎಂಬ ಅರ್ಥವನ್ನು ನೀಡುತ್ತದೆ.

ಇದನ್ನೂ ಓದಿ: ಹಸು ಸಾಕಲು ಕಾರ್‌ ಶೆಡ್ಡನ್ನು ಕೌ ಶೆಡ್‌ ಆಗಿ ಪರಿವರ್ತಿಸಿದ ಮೈಸೂರಿನ ಕುಟುಂಬ; ಇಲ್ಲಿದೆ ನೋಡಿ ವಿಡಿಯೋ

ಉದ್ದನೆಯ ಎರಡು ಗೆರೆಗಳು:

ರಸ್ತೆಯ ನಡುವೆ ಯಾವುದೇ ಅಂತರವಿರದೇ ಉದ್ದನೆಯ ಎರಡು ಗೆರೆಗಳಿದ್ದರೆ ಯು-ಟರ್ನ್ ಅಥವಾ ಲೇನ್ ಬದಲಾವಣೆ ಮಾಡುವಂತಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ. ಇದಲ್ಲದೇ ಓವರ್​ ಟೇಕ್​​ ಮಾಡುವಂತಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಸರ್, ಈ ಬಸ್ ದುಬೈಗೆ ಹೋಗುತ್ತಾ?
ಸರ್, ಈ ಬಸ್ ದುಬೈಗೆ ಹೋಗುತ್ತಾ?
ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಇಂಜಿನಿಯರ್!
ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಇಂಜಿನಿಯರ್!