Viral: ವಿಷಪೂರಿತ ಹಾವನ್ನು ತೋರಿಸಿ ರೈಲಿನಲ್ಲಿದ್ದ ಪ್ರಯಾಣಿಕರಿಂದ ಹಣ ಪೀಕಿದ ಆಸಾಮಿ; ವಿಡಿಯೋ ವೈರಲ್‌

ರೈಲಿನಲ್ಲಿ ಕಳ್ಳತನ ನಡೆಯುವಂತಹ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಿರುತ್ತವೆ. ಆದ್ರೆ ಇಲ್ಲೊಂದು ರೈಲಿನಲ್ಲಿ ವಿಚಿತ್ರ ಘಟನೆ ನಡೆದಿದ್ದು, ದರೋಡೆಕೋರನೊಬ್ಬ ತನ್ನ ಬಳಿಯಿದ್ದ ವಿಷಪೂರಿತ ಹಾವನ್ನು ಪ್ರಯಾಣಿಕರಿಗೆ ತೋರಿಸಿ ಭಯಪಡಿಸುವ ಮೂಲಹ ಹಣವನ್ನು ಪೀಕಿದ್ದಾನೆ. ಜನರಲ್‌ ಕೋಚ್‌ ರೈಲು ಪ್ರಯಾಣದಲ್ಲಾದ ಈ ಭಯಾನಕ ಅನುಭವವನ್ನು ಯುವಕನೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ರೈಲಿನಲ್ಲಿ ಪ್ರಯಾಣಿಸುವ ಒಂಥರಾ ಖುಷಿ, ಒಂಥರಾ ಕುತೂಹಲ. ಟ್ರೈನ್‌ನಲ್ಲಿ ಅಗ್ಗದ ಬೆಲೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸುವ ಆನಂದವೇ ಬೇರೆ. ಅದರಲ್ಲೂ ವಿಶೇಷವಾಗಿ ಜನರಲ್‌ ಕೋಚ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತರಹೇವಾರಿ ಅನುಭವಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಕೆಲವೊಂದು ಅನುಭವಗಳು ಸುಂದರವಾಗಿದ್ದರೆ, ಕೆಲವೊಂದು ಅನುಭವಗಳು ಬೆಚ್ಚಿ ಬೀಳಿಸುವಂತಿರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಜನರಲ್‌ ಕೋಚ್‌ ಪ್ರಯಾಣದಲ್ಲಿ ತನಗಾದ ಅನುಭವವನ್ನು ಹಂಚಿಕೊಂಡಿದ್ದು, ದರೋಡೆಕೋರನೊಬ್ಬ ತನ್ನ ಬಳಿಯಿದ್ದ ವಿಷಪೂರಿತ ಹಾವನ್ನು ಪ್ರಯಾಣಿಕರಿಗೆ ತೋರಿಸಿ ಭಯಪಡಿಸುವ ಮೂಲಕ ಹಣವನ್ನು ಪೀಕುತ್ತಿದ್ದ ದೃಶ್ಯ ನೋಡಿ ನನಗೆ ತುಂಬಾನೇ ಭಯವಾಯಿತು ಎಂದು ಹೇಳಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ರೈಲಿನ ಜನರಲ್‌ ಕೋಚ್‌ನಲ್ಲಿ ಬಂದು ಕುಳಿತ ದರೋಡೆಕೋರನೊಬ್ಬ ತನ್ನ ಬಳಿಯಿದ್ದ ವಿಷಕಾರಿ ಹಾವನ್ನು ತೋರಿಸಿ ಪ್ರಯಾಣಿಕರಿಗೆ ಹೆದರಿಸಿ ಅವರಿಂದ ಹಣವನ್ನು ಪೀಕಿದ್ದಾನೆ. ಉತ್ತರ ಭಾರತದ ರೈಲಿನಲ್ಲಿ ಪ್ರಯಾಣಿಸುವಾಗ ತನಗಾದ ಈ ಭಯಾನಕ ಅನುಭವವನ್ನು ಕೇರಳದ ಅಶ್ವಿನ್‌ ಎಸ್.‌ (travel_with_bon) ಎಂಬಾತ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ವೈರಲ್‌ ವಿಡಿಯೋದಲ್ಲಿ ಉತ್ತರ ಭಾರತದ ರೈಲಿನ ಜನರಲ್‌ ಕೋಚ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತನಗಾದ ಭಯಾನಕ ಅನುಭವವನ್ನು ಹೇಳಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಜನರಲ್‌ ಕೋಚ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಬಳಿಯಿದ್ದ ಹಾವನ್ನು ತೋರಿಸಿ ಭಯಪಡಿಸಿ ಪ್ರಯಾಣಿಕರಿಂದ ಹಣ ಪೀಕಿದ್ದಾನೆ.

ಇದನ್ನೂ ಓದಿ: ನಡು ಬೀದಿಯಲ್ಲಿಯೇ ಡ್ರೆಸ್‌ ಚೇಂಚ್‌ ಮಾಡಿ ಸ್ಟೈಲಿಶ್‌ ಆಗಿ ರೆಡಿಯಾದ ಯುವತಿ; ವಿಡಿಯೋ ವೈರಲ್‌

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿದ್ರೆ ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಕೈಯಲ್ಲೊಂದು ಪೆಪ್ಪರ್‌ ಸ್ಪ್ರೇ ಹಿಡಿದುಕೊಂಡು ಹೋಗ್ಬೇಕು ಅನ್ನಿಸುತ್ತದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us