ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ

ಸ್ನೇಹಿತರೇ.. ಸ್ಪೈಕ್​ರನ್ನು ನಾನು ಹೇಗೆ ಭೇಟಿಯಾದೆ ಎಂದು ನಿಮ್ಮ ತಿಳಿದಿದೆಯೇ? ಎಂದು ಸಚಿನ್ ತಮ್ಮ ವಿಡಿಯೋ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ
ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ
Follow us
| Updated By: shruti hegde

Updated on: Aug 01, 2021 | 10:36 AM

ಕ್ರಿಕೇಟಿಗ ಸಚಿನ್ ಅವರು ಹೊಸ ಫ್ರೆಂಡ್ರನ್ನು ಪರಿಚಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಚಿನ್ ಅವರು (Sachin Tendulkar)  ಸ್ಪೈಕ್​ರನ್ನು ಪರಿಚಯಿಸಿದ್ದಾರೆ. ಸ್ಪೈಕ್ ಎಂಬ ಹೆಸರಿನ ಪುಟ್ಟ ನಾಯಿ ಮರಿಯೊಂದಿಗೆ ಕಳೆದ ಕ್ಷಣಗಳನ್ನು ಸಚಿನ್ ಪೋಸ್ಟ್ ಮಾಡಿದ್ದಾರೆ. ಸಚಿನ್ ಅಭಿಮಾನಿಗಳು ವಿಡಿಯೋ(Video Viral) ಇಷ್ಟಪಟ್ಟಿದ್ದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

ಸ್ನೇಹಿತರೇ.. ಸ್ಪೈಕ್​ರನ್ನು ನಾನು ಹೇಗೆ ಭೇಟಿಯಾದೆ ಎಂದು ನಿಮ್ಮ ತಿಳಿದಿದೆಯೇ? ಎಂದು ಸಚಿನ್ ತಮ್ಮ ವಿಡಿಯೋ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಫಾರ್ಮ್​​ಹೌಸ್​ನ ಕೆಲವು ಮಕ್ಕಳು ಮಾರುಕಟ್ಟೆಗೆ ಹೋದಾಗ ಈ ಪುಟ್ಟ ನಾಯಿ ಮರಿಯನ್ನು ನೋಡಿದ್ದಾರೆ. ತಾಯಿ ಇಲ್ಲದೆ ಅನಾಥವಾಗಿದ್ದ ನಾಯಿ ಮರಿ ನೋಡಿದ ಮಕ್ಕಳು ಫಾರ್ಮ್​​ಹೌಸ್​ಗೆ ಕರೆತಂದಿದ್ದಾರೆ ಎಂದು ಸಚಿನ್ ಹೇಳಿದ್ದಾರೆ.

ನಾಯಿ ಮರಿಯನ್ನು ನೋಡಿದ ತಕ್ಷಣ ನನಗೆ ಇಷ್ಟವಾಯಿತು. ನಮ್ಮ ತೋಟದ ಮನೆಯಲ್ಲಿಯೇ ಸಾಕೋಣ ಎಂದು ನಾನು ಹೇಳಿದೆ. ಈ ನಾಯಿಮರಿ ಯಾವುದೇ ಬೇರೆ ಜಾತಿಯ ತಳಿಯಲ್ಲ. ಪಕ್ಕಾ ಭಾರತೀಯ ದೇಸಿ ತಳಿ ಎಂದು ಹೇಳಿದ್ದಾರೆ.

ಸ್ಪೈಕ್ ತುಂಬಾ ಮುದ್ದಾಗಿದೆ ಮತ್ತು ಸುಂದರವಾಗಿ ಬೆಳೆಯುತ್ತಿದೆ. ಸ್ಪೈಕ್​ಗೆ ಬೇಕಾದದ್ದು ಆಶ್ರಯ, ಪ್ರೀತಿ ಮತ್ತು ಕಾಳಜಿ ಅಷ್ಟೆ ಎಂದು ಅವರು ಹೇಳಿದ್ದಾರೆ.

ಸ್ಪೈಕ್ ನಮ್ಮ ಹೃಯವನ್ನು ಗೆದ್ದಿದೆ. ನಮ್ಮ ಈ ಜೀವನದಲ್ಲಿ ಖುಷಿ ತಂದಿದೆ ಎಂದು ಸಚಿನ್ ಹೇಳಿದ್ದಾರೆ. ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ ಸ್ಪೈಕ್ ಎಲ್ಲೆಡೆ ಓಡಾಡುತ್ತಿರುವುದನ್ನು ನೋಡಬಹುದು. ಜನರೊಂದಿಗೆ ಹೆಚ್ಚು ಸಮಯ ಕಳೆಯತ್ತಿರುವುದನ್ನು ಗಮನಿಸಬಹುದು.

ಸಚಿನ್ ಹಂಚಿಕೊಂಡ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

2011ರಲ್ಲಿ ವಿಶ್ವಕಪ್​ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್​ ತೆಂಡೂಲ್ಕರ್

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್