AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿದ್ದ ರೈಲು ಹತ್ತಲು ಮುಂದಾದ ಮಹಿಳೆ…ಆಮೇನಾಯ್ತು?

Trending Video: ಈ ವಿಡಿಯೋ ನೋಡಿದ ಬಳಿಕವಾದರೂ ಚಲಿಸುತ್ತಿರುವ ರೈಲು ಅಥವಾ ಬಸ್​ಗಳಲ್ಲಿ ಹತ್ತುವ ಪ್ರಯತ್ನ ಮಾಡದಿರಿ. ಬಸ್ ಅಥವಾ ರೈಲು ಹೋದರೆ ಪುನಃ ಬರಬಹುದು. ಆದರೆ ಜೀವ ಹೋದರೆ ಮರಳಿ ಬರಲ್ಲ ಎಂಬುದನ್ನು ಸದಾ ನೆನಪಿನ್ನಲ್ಲಿಡಿ.

Viral Video: ಚಲಿಸುತ್ತಿದ್ದ ರೈಲು ಹತ್ತಲು ಮುಂದಾದ ಮಹಿಳೆ...ಆಮೇನಾಯ್ತು?
viral video
TV9 Web
| Edited By: |

Updated on: Jul 31, 2021 | 8:09 PM

Share

ಅವಸರವೇ ಅಪಾಯಕ್ಕೆ ದಾರಿ ಎಂಬ ಮಾತಿದೆ, ಆದರೆ ಕೆಲವೊಂದು ಬಾರಿ ಅವಸರ ಮಾಡುವುದು ಕೂಡ ಅತ್ಯಗತ್ಯವಾಗಿರುತ್ತೆ. ಮುಖ್ಯವಾಗಿ ಬಸ್ ಅಥವಾ ಟ್ರೈನ್ ಮಿಸ್ ಆಗೋ ಟೈಮ್​ನಲ್ಲಿ ಎಷ್ಟು ಸಾಧ್ಯವೊ ಅಷ್ಟು ಅವಸರದಲ್ಲಿ ತಲುಪಬೇಕಾಗುತ್ತದೆ. ಆದರೆ ಈ ವೇಳೆ ಅಜಾಗರೂಕರಾದ್ರೆ ಅಪಾಯ ತಪ್ಪಿದಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಹೌದು, ಈ ಘಟನೆ ನಡೆದಿರುವುದು ತೆಲಂಗಾಣ ಸಿಕಂದಾಬಾದ್​ನ ರೈಲ್ವೆ ನಿಲ್ದಾಣದಲ್ಲಿ. ರೈಲಿನಲ್ಲಿ ಹೋಗಬೇಕಾದ ಮಹಿಳೆಗೆ ನಿಲ್ದಾಣಕ್ಕೆ ತಡವಾಗಿ ಬಂದಿದ್ದಾರೆ. ಪ್ಲಾಟ್​ಫಾರ್ಮ್​ಗೆ ತಲುಪುತ್ತಿದ್ದಂತೆ ರೈಲು ಕೂಡ ಹೊರಟಿದೆ. ಇನ್ನೇನು ಮಾಡೋದು ಎಂದು ಚಲಿಸುತ್ತಿದ್ದ ರೈಲಿಗೆ ಓಡಿ ಹೋಗಿ ಹತ್ತಲು ಪ್ರಯತ್ನಿಸಿದ್ದಾರೆ. ಸಮತೋಲನ ತಪ್ಪಿದ ಮಹಿಳೆಯು ಜಾರಿ ಬಿದ್ದಿದ್ದಾರೆ.

ಅತ್ತ ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ ಜಾರಿ ಬಿದ್ದ ಮಹಿಳೆಯ ಕಾಲುಗಳು ಪ್ಲಾಟ್​ಫಾರ್ಮ್ ಹಾಗೂ ರೈಲುಗಳ ನಡುವೆ ಸಿಲುಕಿಕೊಂಡಿತು. ಇದೇ ವೇಳೆ ಅಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೇಬಲ್ ತಕ್ಷಣ ಮಹಿಳೆಯನ್ನು ಪ್ಲಾಟ್‌ಫಾರ್ಮ್ ಮೇಲೆ ಎಳೆದು ಜೀವ ರಕ್ಷಿಸಿದರು. ಪೊಲೀಸ್ ಕಾನ್​​ಸ್ಟೇಬಲ್ ಅವರ ಸಮಯ ಪ್ರಜ್ಞೆಯಿಂದ ಮಹಿಳೆಯ ಜೀವ ಉಳಿಯಿತು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರ್​ಪಿಎಫ್ ಪೊಲೀಸ್​ ಕಾನ್​ಸ್ಟೇಬಲ್​ನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಈ ವಿಡಿಯೋ ನೋಡಿದ ಬಳಿಕವಾದರೂ ಚಲಿಸುತ್ತಿರುವ ರೈಲು ಅಥವಾ ಬಸ್​ಗಳಲ್ಲಿ ಹತ್ತುವ ಪ್ರಯತ್ನ ಮಾಡದಿರಿ. ಬಸ್ ಅಥವಾ ರೈಲು ಹೋದರೆ ಪುನಃ ಬರಬಹುದು. ಆದರೆ ಜೀವ ಹೋದರೆ ಮರಳಿ ಬರಲ್ಲ. ಜಾಗರೂಕರಾಗಿರಿ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

(Viral Video: RPF constable saves woman’s life at Secunderabad station)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್