Viral Video: ತನ್ನ ಜಡೆಯ ಮೂಲಕ 566 ಕಿಮೀ ದೂರದಿಂದ ರಾಮ ರಥ ಎಳೆದ ಬದ್ರಿ ಬಾಬಾ

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬದ್ರಿ ಪ್ರಸಾದ್ ವಿಶ್ವಕರ್ಮ ಅಲಿಯಾಸ್ ಬದ್ರಿ ಬಾಬಾ  ಅವರು ತಮ್ಮ ಪ್ರತಿಜ್ಞೆಯಂತೆ  ಜಡೆಗೂದಲಿನಿಂದ ರಾಮ ರಥವನ್ನು ಎಳೆದುಕೊಂಡು ಹೋಗುವ ಮೂಲಕ ಮಧ್ಯಪ್ರದೇಶದ  ದಾಮೋಹ್ ಜಿಲ್ಲೆಯಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಹೊರಟಿದ್ದಾರೆ.  

Viral Video: ತನ್ನ ಜಡೆಯ ಮೂಲಕ 566 ಕಿಮೀ ದೂರದಿಂದ ರಾಮ ರಥ ಎಳೆದ ಬದ್ರಿ ಬಾಬಾ
Edited By:

Updated on: Jan 19, 2024 | 6:28 PM

ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ.  ಈ ಒಂದು ಪುಣ್ಯಕಾರ್ಯದಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದಿನದಂದು ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ  ರಾಮಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆ ಮೂಲಕವೇ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವೆ ಎಂಬ ತಮ್ಮ ಸಂಕಲ್ಪದಂತೆ ಇದಾಗಲೇ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಅದೇ ರೀತಿ ಭಕ್ತಿಯ ಅಸಾಧಾರಣ ಪ್ರದರ್ಶನದಲ್ಲಿ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬದ್ರಿ ಪ್ರಸಾದ್ ವಿಶ್ವಕರ್ಮ ಅಲಿಯಾಸ್ ಬದ್ರಿ ಬಾಬಾ  ತಮ್ಮ ಪ್ರತಿಜ್ಞೆಯಂತೆ  ಜನವರಿ 11 ರಂದು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬಟಿಯಾಗಢದಿಂದ ತಮ್ಮ ಜಡೆಯ ಮೂಲಕ ರಾಮ  ರಥವನ್ನು ಎಳೆದುಕೊಂಡು ಹೋಗುವ ಮೂಲಕ  ಅಯೋಧ್ಯೆಗೆ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಗಾಜಿಪುರ, ರಾಧಾನಗರ, ಚೌಕ್  ಹುಸೇಂಗಜ್ ಮಾರ್ಗವಾಗಿ ಸುಮಾರು 566 ಕಿಮೀ ಗೂ ಹೆಚ್ಚು ದೂರವನ್ನು ಕ್ರಮಿಸಿ ಜನವರಿ 22 ರಂದು ಬದ್ರಿ ಬಾಬಾ ಅಯೋಧ್ಯೆಯನ್ನು ತಲುಪುವ ನಿರೀಕ್ಷೆಯಿದೆ.

1992ರಲ್ಲಿ ಬದ್ರಿ ಬಾಬಾ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ, ತನ್ನ ಜಡೆಯಲ್ಲಿಯೇ ರಥವನ್ನು ಎಳೆಯುತ್ತಾ, ಪಾದಯಾತ್ರೆಯ ಮೂಲಕವೇ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವೇ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು. ಇದೀಗ ತನ್ನ ಪ್ರತಿಜ್ಞೆಯಂತೆ ಬದ್ರಿ ಬಾಬಾ ಅವರು  ದಾಮೋಹ್ ಜಿಲ್ಲೆಯಿಂದ ಜಡೆಯ ಮೂಲಕ ರಾಮ  ರಥವನ್ನು ಎಳೆಯುತ್ತಾ, ಅಯೋಧ್ಯೆಗೆ ಪಾದಯಾತ್ರೆಯನ್ನು ಹೊರಟಿದ್ದಾರೆ.

ಸುದ್ದಿ ಸಂಸ್ಥೆ ANI ತನ್ನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜನವರಿ 22 ರಂದು ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಡೆಯಲ್ಲಿ ರಾಮ ರಥವನ್ನು ಎಳೆಯುತ್ತಾ, ದಾಮೋಹ್ ನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿರುವ ಬದ್ರಿ ಬಾಬಾ” ಎಂಬ ಶೀರ್ಷಿಕೆಯನ್ನು ಬರೆದಿಕೊಂಡಿದೆ.

ಇದನ್ನೂ ಓದಿ: ಮಾನವೀಯ ಮೌಲ್ಯವನ್ನು ಈ ದಂಪತಿಗಳನ್ನು ನೋಡಿ ನಾವು ಕಲಿಯಬೇಕು ನೋಡಿ

ವಿಡಿಯೋದಲ್ಲಿ ಕಾವಿ ಬಟ್ಟೆಯನ್ನು ತೊಟ್ಟಿರುವ ಬದ್ರಿ ಬಾಬಾ ಅವರು ತನ್ನ ಜಡೆಗೂದಲಿಗೆ ಹಗ್ಗವನ್ನು ಕಟ್ಟಿ ಅದರಲ್ಲಿ ರಾಮ ರಥವನ್ನು ಎಳೆಯುತ್ತಾ ಪುಣ್ಯ  ಭೂಮಿ ಅಯೋಧ್ಯೆಗೆ ಪಾದಯಾತ್ರೆ ಹೊರಟಿರುವುದನ್ನು ಕಾಣಬಹುದು.

Published On - 6:06 pm, Fri, 19 January 24

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us