AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಗೆದ್ದರೆ ವಿಮಾನ ನಿಲ್ದಾಣ, ಮಹಿಳೆಯರಿಗೆ ಮೇಕಪ್ ಕಿಟ್, ವೈಫೈ ಉಚಿತ​’

Sarpanch Manifesto : ನಾನಂತೂ ಈ ಹಳ್ಳಿಗೆ ಶಿಫ್ಟ್​ ಆಗ್ತೀನಿ ಎನ್ನುತ್ತಿದ್ದಾರೆ ಐಎಫ್​ಎಸ್​ ಅಧಿಕಾರಿ ಅರುಣ್​ ಗೋಥ್ರಾ. ಈಗಲೇ ಶಿಫ್ಟ್ ಆಗಿಬಿಡೋಣ, ತಡವಾದರೆ ವೀಸಾ ಬೇಕಾಗಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ನೀವೂ ಶಿಫ್ಟ್ ಆಗುತ್ತೀರೋ ಹೇಗೆ?

‘ನಾನು ಗೆದ್ದರೆ ವಿಮಾನ ನಿಲ್ದಾಣ, ಮಹಿಳೆಯರಿಗೆ ಮೇಕಪ್ ಕಿಟ್, ವೈಫೈ ಉಚಿತ​’
ಇವರೇ ಆ ಅಭ್ಯರ್ಥಿ!
TV9 Web
| Updated By: ಶ್ರೀದೇವಿ ಕಳಸದ|

Updated on:Oct 11, 2022 | 5:09 PM

Share

Trending : ‘ನಾನು ಈ ಚುನಾವಣೆಯಲ್ಲಿ ಗೆದ್ದು ಬಂದರೆ, ಈ ಗ್ರಾಮಕ್ಕೆ ಮೂರು ವಿಮಾನ ನಿಲ್ದಾಣಗಳು, ಹೆಣ್ಣುಮಕ್ಕಳಿಗೆ ಉಚಿತ ಮೇಕಪ್​ ಕಿಟ್, ಪ್ರತೀ ಕುಟುಂಬಕ್ಕೆ ಉಚಿತ ಬೈಕು, ವೈಫೈ, ಪೆಟ್ರೋಲ್​ ಬೆಲೆಯಲ್ಲಿ ಪ್ರತೀ ಲೀಟರ್​ಗೆ ರೂ.20 ಇಳಿಕೆ, ಜಿಎಸ್​ಟಿ ರದ್ದು ಇಷ್ಟೆಲ್ಲ ಸೌಕರ್ಯಗಳನ್ನು ಕಲ್ಪಿಸುತ್ತೇನೆ’ ಹರಿಯಾಣಾದ ಸಿರ್ಸಾದ್​ ಗ್ರಾಮದ ಸರ್ಪಂಚ್ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ಚುನಾವಣೆ ಪ್ರಣಾಳಿಕೆ ಇದು. ಐಪಿಎಸ್​ ಅಧಿಕಾರಿ ಅರುಣ್ ಬೋಥ್ರಾ ಈ ಕರಪತ್ರವನ್ನು ಟ್ವೀಟ್ ಮಾಡುತ್ತಿದ್ದಂತೆ ಇದೀಗ ವೈರಲ್ ಆಗುತ್ತಿದೆ. ‘ನಾನು ಈ ಗ್ರಾಮಕ್ಕೆ ಶಿಫ್ಟ್​ ಅಗುತ್ತಿದ್ದೇನೆ’ ಎಂಬ ವ್ಯಂಗ್ಯದ ಒಕ್ಕಣೆ ಬರೆದಿದ್ದಾರೆ ಅರುಣ್.

ಸರ್ಪಂಚ್ ಚುನಾವಣೆಗೆ ಸ್ಪರ್ಧಿಸಿ, ಚುನಾವಣೆಯ ಈ ಅದ್ಭುತ ಪ್ರಣಾಳಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದವರು ಜೈಕರಣ್​ ಲಾಥ್ವಾಲ್​ ಎಂಬುವವರು. ನೆಟ್ಟಿಗರು ಈ ಪ್ರಣಾಳಿಕೆ ಪಟ್ಟಿಯನ್ನು ಹಂಚಿಕೊಂಡು ವಿಧವಿಧದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಗ್ರಾಮಕ್ಕೆ ಶಾಶ್ವತವಾಗಿ ಶಿಫ್ಟ್​ ಆಗಬೇಕೆ, ಬೇಡವೆ? ಎಂಬ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದೇನೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಾನೂ ಈ ಹಳ್ಳಿಗೆ ಶಿಫ್ಟ್​ ಆಗಬೇಕು, ದಯವಿಟ್ಟು ಹಳ್ಳಿಯ ಹೆಸರು ಹೇಳಿ’ ಎಂದಿದ್ದಾರೆ ಮತ್ತೊಬ್ಬರು. ‘ಅರುಣ್ ಬೋಥ್ರಾ ಅವರೊಂದಿಗೆ ನಾನು ಈ ಹಳ್ಳಿಗೆ ಶಿಫ್ಟ್​ ಆಗುತ್ತಿದ್ದೇನೆ’ ಎಂದು ಮಗದೊಬ್ಬರು ತಮಾಷೆ ಮಾಡಿದ್ದಾರೆ. ‘ಆಮೇಲಾದರೆ ವೀಸಾ ಬೇಕಾಗಬಹುದು. ಈಗಲೇ ಶಿಫ್ಟ್​ ಆಗುವುದು ಒಳ್ಳೆಯದು ನಡೆಯಿರಿ’ ಎಂದು ಇನ್ನೂ ಒಬ್ಬರು ಹಾಸ್ಯ ಮಾಡಿದ್ದಾರೆ.

ನೀವೇನಂತೀರಿ? ಇಷ್ಟೆಲ್ಲ ಉಚಿತವಾಗಿ ಸಿಗುವಾಗ ಈ ಹಳ್ಳಿಗೆ ಶಿಫ್ಟ್ ಆಗುವುದು ಒಳಿತಲ್ಲವೆ? ಅದರಲ್ಲೂ ಒಂದು ಹಳ್ಳಿಗೆ ಮೂರು ವಿಮಾನ ನಿಲ್ದಾಣಗಳು! ನಡೆಯಿರಿ ಮತ್ತೆ…

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:56 pm, Tue, 11 October 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?