AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮನೆಯ ಮೆಟ್ಟಿಲ ಕೆಳಗಿನ ಕತ್ತಲೆ ಕೋಣೆಯಲ್ಲಿ ಪತ್ತೆ!

ನ್ಯೂಯಾರ್ಕ್​ನಲ್ಲಿ ಪೈಸ್ಲೀ ಶುಲ್ಟಿಸ್ ಎಂಬ 6 ವರ್ಷದ ಬಾಲಕಿ 2019ರಲ್ಲಿ ನಾಪತ್ತೆಯಾಗಿದ್ದಳು. ಆ ಬಾಲಕಿ ಇನ್ನೂ ಬದುಕಿದ್ದಾಳೆ, ಆಕೆಯನ್ನು ನಿಗೂಢ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಸಿಕ್ಕ ನಂತರ ಆಕೆ ಎಲ್ಲಿದ್ದಾಳೆ ಎಂದು ಪತ್ತೆಹಚ್ಚಲು ಸಾಕಷ್ಟು ಹುಡುಕಾಟ ನಡೆಸಲಾಯಿತು.

3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮನೆಯ ಮೆಟ್ಟಿಲ ಕೆಳಗಿನ ಕತ್ತಲೆ ಕೋಣೆಯಲ್ಲಿ ಪತ್ತೆ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 17, 2022 | 5:43 PM

ನ್ಯೂಯಾರ್ಕ್: ಆ ಬಾಲಕಿ ಮನೆಯಿಂದ ನಾಪತ್ತೆಯಾಗಿ 3 ವರ್ಷವಾಗಿತ್ತು. ಆಕೆಗಾಗಿ ಪೊಲೀಸರು ಮತ್ತು ಮನೆಯವರು ಹುಡುಕಾಡದ ಜಾಗವೇ ಇಲ್ಲ. ಆದರೂ ಆಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆ ಬಾಲಕಿ ಸತ್ತಿದ್ದಾಳೋ, ಬದುಕಿದ್ದಾಳೋ ಎಂಬುದೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಮೂರು ವರ್ಷಗಳಿಂದನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಹಳ್ಳಿಯೊಂದರ ಮನೆಯ ಮೆಟ್ಟಿಲುಗಳ ಕೆಳಗೆ ಇದ್ದ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿದ್ದಾಳೆ. ನ್ಯೂಯಾರ್ಕ್‌ನಲ್ಲಿ (New York) ಈ ವಿಚಿತ್ರವಾದ ಘಟನೆ ನಡೆದಿದೆ ಎಂದು ಅಮೆರಿಕದ ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್​ನಲ್ಲಿ ಪೈಸ್ಲೀ ಶುಲ್ಟಿಸ್ ಎಂಬ ಬಾಲಕಿ 2019ರಲ್ಲಿ ನಾಪತ್ತೆಯಾಗಿದ್ದಳು. ಆಕೆ ತಮ್ಮ ಕೈತಪ್ಪಿ ಹೋಗುತ್ತಾಳೆ ಎಂದು ಆಕೆಯ ಅಪ್ಪ-ಅಮ್ಮನೇ ಆ ಬಾಲಕಿಯನ್ನು ಕಿಡ್ನಾಪ್ ಮಾಡಿ ಬಚ್ಚಿಟ್ಟಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆಕೆಯ ಪೋಷಕರು ಈ ಆರೋಪವನ್ನು ನಿರಾಕರಿಸಿದ್ದರು. ಆದರೆ, 3 ವರ್ಷಗಳ ಹಿಂದೆ ಆ ಬಾಲಕಿ ನಾಪತ್ತೆಯಾಗಿದ್ದ ಸ್ಥಳದಿಂದ 150 ಮೈಲುಗಳಷ್ಟು (240 ಕಿಮೀ) ದೂರದ “ರಹಸ್ಯ ಸ್ಥಳದಲ್ಲಿ” ಇದ್ದಾಳೆ ಎಂಬ ಸುಳಿವು ಪಡೆದ ಪೊಲೀಸರು ಆಕೆಯನ್ನು ಪತ್ತೆಹಚ್ಚಿದ್ದಾರೆ. ನ್ಯೂಯಾರ್ಕ್​ನ ಗ್ರಾಮೀಣ ಭಾಗದ ಸ್ಪೆನ್ಸರ್ ಎಂಬಲ್ಲಿದ್ದ ಮನೆಯ ಮೆಟ್ಟಿಲ ಕೆಳಗಿನ ನಿಗೂಢ ರೂಮಿನಲ್ಲಿ ಆಕೆಯನ್ನು ಬಚ್ಚಿಡಲಾಗಿತ್ತು.

ಆ ಬಾಲಕಿ ಇನ್ನೂ ಬದುಕಿದ್ದಾಳೆ, ಆಕೆಯನ್ನು ನಿಗೂಢ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಸಿಕ್ಕ ನಂತರ ಆಕೆ ಎಲ್ಲಿದ್ದಾಳೆ ಎಂದು ಪತ್ತೆಹಚ್ಚಲು ಸಾಕಷ್ಟು ಹುಡುಕಾಟ ನಡೆಸಲಾಯಿತು. ಆಕೆಯನ್ನು ಆಕೆಯ ಪೋಷಕರೇ ಮನೆಯೊಂದರ ಬೇಸ್​ಮೆಂಟ್​ಗೆ ಸಂಪರ್ಕ ಕಲ್ಪಿಸುತ್ತಿದ್ದ ಬೃಹತ್ ಮೆಟ್ಟಿಲುಗಳ ಕೆಳಗಿನ ಕತ್ತಲಿನ ಸ್ಟೋರ್ ರೂಮೊಂದರಲ್ಲಿ ಇರಿಸಿದ್ದರು.

‘ನಾವು ಆ ನೆಲಮಾಳಿಗೆಯ ದಾರಿಯ ಸ್ಟೆಪ್ ಬೋರ್ಡ್‌ಗಳನ್ನು ತೆಗೆದ ನಂತರ ಆ ಬಾಲಕಿ ಮತ್ತು ಆಕೆಯ ಅಪಹರಣಕಾರ ಕಿಂಬರ್ಲಿ ಕೂಪರ್ ಶುಲ್ಟಿಸ್ ಅಲ್ಲಿ ಅಡಗಿರುವುದು ಗೊತ್ತಾಯಿತು. ಆ ಬಾಲಕಿಯ ಅಪಹರಣಕಾರರು ಆಕೆಯನ್ನು ಇಷ್ಟು ದಿನ ಹೇಗೆ ಅಡಗಿಸಿಟ್ಟಿದ್ದರು ಎಂಬುದೇ ನಮಗೆ ಅಚ್ಚರಿಯ ಸಂಗತಿಯಾಗಿದೆ ‘ ಎಂದು ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ನಾವು ಆಗಾಗ ಆ ಬಾಲಕಿಯ ಬಗ್ಗೆ ವಿಚಾರಣೆ ಮಾಡಲು, ಕೆಲವು ವಿಚಾರಗಳನ್ನು ತಿಳಿಸಲು ಆ ಬಾಲಕಿಯ ಮನೆಗೆ ಹೋಗಿ ಬರುತ್ತಿದ್ದೆವು. ಆದರೆ, ನಮಗೆ ಆಕೆ ಅಲ್ಲಿಯೇ ಇದ್ದಾಳೆ ಎಂಬ ವಿಷಯ ಗೊತ್ತಾಗಲೇ ಇಲ್ಲ. ಎರಡೂವರೆ ವರ್ಷಗಳ ಕಾಲ ಆ ಬಾಲಕಿಯ ಪೋಷಕರು ಸುಳ್ಳು ಕತೆ ಹೇಳಿ ನಮ್ಮನ್ನು ನಂಬಿಸಿದ್ದರು. ಆಕೆಯ ಅಪ್ಪ-ಅಮ್ಮನ ಮೇಲೆ ನಮಗೆ ಅನುಮಾನ ಬಂದಾಗಲೂ ಅವರು ತಮ್ಮ ಮಗಳು ಎಲ್ಲಿದ್ದಾಳೆಂಬ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ನಮ್ಮೆದುರು ಕಣ್ಣೀರು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಪತ್ತೆಯಾಗಿರುವ ಬಾಲಕಿ ಆರೋಗ್ಯವಾಗಿದ್ದಾಳೆ. ಆಕೆಯನ್ನು ಆ ಕತ್ತಲೆ ಕೋಣೆಯಿಂದ ಹೊರಗೆ ಕರೆದುಕೊಂಡು ಬಂದ ನಂತರ ಖುಷಿಯಾದ ಆಕೆ ಪೊಲೀಸರ ಬಳಿ ತನಗೆ ಮೆಕ್‌ಡೊನಾಲ್ಡ್​​ನಿಂದ ಹ್ಯಾಪಿ ಮೀಲ್ ತರಿಸುವಂತೆ ಮನವಿ ಮಾಡಿದ್ದಾಳೆ. ಆಕೆಯ ಪೋಷಕರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!

Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್