ಲಿವ್​-ಇನ್ ಸಂಗಾತಿಗಳಿರುವ ಬೆಡ್​ರೂಮಿನ ಕಿಟಕಿಯಲ್ಲಿ ಇಣುಕಿ ನೋಡಿ, ಪತ್ರವಿಟ್ಟು ಹೋದ ಅಪರಿಚಿತ

ಲಿವ್ ಇನ್ ಸಂಗಾತಿಗಳಿರುವ ಕೋಣೆಯಲ್ಲಿ ಇಣುಕಿ ನೋಡಿದ ವ್ಯಕ್ತಿಯೊಬ್ಬ ಕಿಟಕಿಯಲ್ಲಿ ಒಂದು ಪತ್ರವಿಟ್ಟು ಓಡಿ ಹೋಗಿರುವ ಘಟನೆ ನಡೆದಿದೆ. ಒಂದು ದಿನ ರಾತ್ರಿ ಅವರು ಗಾಢ ನಿದ್ರೆಯಲ್ಲಿರುವ ಸಮಯದಲ್ಲಿ ಪೇಪರ್ ಹರಿದಂಥಾ ಶಬ್ದ ಕೇಳಿ ಇಬ್ಬರೂ ಬೆಚ್ಚಿಬಿದ್ದಿದ್ದರು. ಕೂಡಲೇ ಕಿಟಕಿ ಕಡೆ ನೋಡಿದಾಗ ಅಲ್ಲೊಬ್ಬ ವ್ಯಕ್ತಿಇಣುಕಿ ನೋಡಿ ಕಿಟಕಿ ಬಳಿ ಒಂದು ಪತ್ರವಿಟ್ಟು ಓಡಿ ಹೋಗಿದ್ದಾನೆ.

ಲಿವ್​-ಇನ್ ಸಂಗಾತಿಗಳಿರುವ ಬೆಡ್​ರೂಮಿನ  ಕಿಟಕಿಯಲ್ಲಿ ಇಣುಕಿ ನೋಡಿ, ಪತ್ರವಿಟ್ಟು ಹೋದ ಅಪರಿಚಿತ
ಲಿವ್ ಇನ್​ ಸಂಬಂಧ-ಸಾಂದರ್ಭಿಕ ಚಿತ್ರ
Image Credit source: B&B Associates

Updated on: Apr 15, 2025 | 12:22 PM

ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ಸಂಬಂಧ(Live in Relationship) ದಲ್ಲಿರುವುದು ನಗರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗೆಯೇ 20 ವರ್ಷದ ಯುವತಿ ಹಾಗೂ 22 ವರ್ಷದ ಯುವಕ ಕೂಡ ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು, ಒಂದೇ ಮನೆಯಲ್ಲಿದ್ದರು. ಒಂದು ದಿನ ರಾತ್ರಿ ಅವರು ಗಾಢ ನಿದ್ರೆಯಲ್ಲಿರುವ ಸಮಯದಲ್ಲಿ ಪೇಪರ್ ಹರಿದಂಥಾ ಶಬ್ದ ಕೇಳಿ ಇಬ್ಬರೂ ಬೆಚ್ಚಿಬಿದ್ದಿದ್ದರು. ಕೂಡಲೇ ಕಿಟಕಿ ಕಡೆ ನೋಡಿದಾಗ ಅಲ್ಲೊಬ್ಬ ವ್ಯಕ್ತಿಇಣುಕಿ ನೋಡಿ ಕಿಟಕಿ ಬಳಿ ಒಂದು ಪತ್ರವಿಟ್ಟು ಓಡಿ ಹೋಗಿದ್ದಾನೆ.

ಈ ಕುರಿತು ರೆಡ್​ಇಟ್​ನಲ್ಲಿ ಯುವತಿ ಮಾಹಿತಿ ಹಂಚಿಕೊಂಡಿದ್ದಾಳೆ. ಆದರೆ ಆ ಪತ್ರದಲ್ಲಿ ಕೇವಲ ಮೊಬೈಲ್ ನಂಬರ್ ಮಾತ್ರವಿತ್ತು. ಆ ನಂಬರ್​ಕೆ ಕರೆ ಮಾಡಿ ಎಂದು ಹೇಳಿರಬಹುದು ಎಂದು ಆಕೆ ಹೇಳಿದ್ದಾರೆ. ಈ ಕುರಿತು ಮನೆಯ ಮಾಲೀಕರಿಗೆ ಇಬ್ಬರು ಮಾಹಿತಿ ನೀಡಿದ್ದರು. ಬಳಿಕ ಆ ನಂಬರ್​ಗೆ ಯಾವುದೇ ಕಾರಣಕ್ಕೂ ಕಾಲ್ ಮಾಡಬಾರದು ಎನ್ನುವ ನಿರ್ಧಾರ ಮಾಡಿದ್ದರು. ಬಳಿಕ ಅವರು ಸೆಪ್ಟೆಂಬರ್​ನಿಂದ ಅಪಾರ್ಟ್​ಮೆಂಟ್​ನ ಗ್ರೌಂಡ್​ ಫ್ಲೋರ್​ನಲ್ಲಿ ಉಳಿದುಕೊಳ್ಳಲು ಶುರು ಮಾಡಿದರು.

ಆ ವ್ಯಕ್ತಿ ಅದೇ ಅಪಾರ್ಟ್​ಮೆಂಟ್​ನ ಬೇರೆ ಯಾವುದೋ ಫ್ಲ್ಯಾಟ್​ನವನು ಆಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಾನ್ ಎಮರ್ಜೆನ್ಸಿ ಲೈನ್​ಗೆ ಮರುದಿನ ಕರೆ ಮಾಡಲಾಗಿತ್ತು, ಆದರೆ ಇದೇ ರೀತಿಯ ಘಟನೆ ಮರುಕಳಿಸದ ಕಾರಣ ಅಧಿಕಾರಿಗಳು ಹೋಗಿದ್ದಾರೆ.ಇದನ್ನು ಟೈಮ್ಸ್​ ನೌ ವರದಿ ಮಾಡಿದ್ದು, ಈ ಘಟನೆ ನಡೆದಿರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೆಟ್ಟಿಗರು ಮತ್ತೊಂದೆಡೆ ನೀವ್ಯಾಕೆ ಪೊಲೀಸರಿಗೆ ಕರೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ
ಅಕ್ರಮ ಸಂಬಂಧ ಮುಚ್ಚಿಟ್ಟುಕೊಳ್ಳಲು ಹುಟ್ಟಿದ ಕೂಸು ತಿಪ್ಪೆಗೆ: ಇಬ್ಬರ ಬಂಧನ
ಥೈಲ್ಯಾಂಡ್‌‌ನಲ್ಲಿ ಅರಳಿದ ಪ್ರೇಮಕಥೆ: ಮಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ!
ಪವಿತ್ರಾ ಗೌಡ ಜತೆ ಲಿವ್​ಇನ್ ರಿಲೇಷನ್​ಶಿಪ್​; ದರ್ಶನ್​ ಒಪ್ಪಿಕೊಂಡ ಸತ್ಯಗಳು
ಲಿವ್​-ಇನ್ ಸಂಬಂಧ ಅಪಾಯಕಾರಿ ಕಾಯಿಲೆಯಿದ್ದಂತೆ, ಕಠಿಣ ಕಾನೂನಿನ ಅಗತ್ಯವಿದೆ

ಮತ್ತಷ್ಟು ಓದಿ: 16 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರೆ ಮಹಿಳೆ ಅತ್ಯಾಚಾರ ಆರೋಪ ಹೊರಿಸುವಂತಿಲ್ಲ

ಆದರೆ ನೀವು ಪೊಲೀಸರಿಗೆ ಕರೆ ಮಾಡುವುದೇ ಸೂಕ್ತ, ಇಲ್ಲವಾದಲ್ಲಿ ಈ ರೀತಿಯ ಘಟನೆಗಳು ಮುಂದುವರೆಯುತ್ತವೆ. ಆ ನಂಬರ್​ಗೆ ಮಾತ್ರ ಕರೆ ಮಾಡಬೇಡಿ, ಮೇಲ್ ಬಾಕ್ಸ್, ಮನೆಯ ಬಾಗಿಲ ಬಳಿ ಅಥವಾ ಕಾರಿನ ಮೇಲೆ ಬರೆದರೆ ಅದನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.

ಆದರೆ ಯಾರೋ ಒಬ್ಬ ಬಂದು ನಿಮ್ಮ ಬೆಡ್​ರೂಮಿನ ಕಿಟಕಿಯಲ್ಲಿ ಪತ್ರವಿಟ್ಟಿದ್ದಾನೆಂದರೆ ಇದು ಸಾಮಾನ್ಯ ಸಂಗತಿಯಲ್ಲ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಸೆಕ್ಯೂರಿಟಿ ಕ್ಯಾಮರಾ ಅಳವಡಿಸುವಂತೆ ಓನರ್​ಗೆ ಹೇಳಿ, ನಿಮ್ಮ ಕಿಟಕಿಗಳನ್ನು ಸದಾ ಮುಚ್ಚಿಡಿ ಎಂದು ಸಲಹೆ ನೀಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us