AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ : ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ, ನೋಡಿ ವಿಡಿಯೋ

Odisha : ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿ ರಮ್ಯವಾದದ್ದು ಘಟಿಸುತ್ತಾ ಇರುತ್ತದೆ. ಒಮ್ಮೆ ಎಲ್ಲ ಜಂಜಡಗಳನ್ನು ಬಿಟ್ಟು ಆಗಾಗ ಇಂಥ ಪ್ರದೇಶಗಳಲ್ಲಿ ಕಳೆದುಹೋಗುತ್ತಿರಬೇಕು. ಏನಂತೀರಿ?

ಒಡಿಶಾ : ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ, ನೋಡಿ ವಿಡಿಯೋ
Migratory birds in Odisha
TV9 Web
| Updated By: ಶ್ರೀದೇವಿ ಕಳಸದ|

Updated on:Nov 18, 2022 | 5:27 PM

Share

Viral Video : ಪ್ರಕೃತಿ ಮತ್ತು ಜೀವವೈವಿಧ್ಯ ಎಂದಿಗೂ ಮುಗಿಯದಂಥ ಅನೇಕ ಅಚ್ಚರಿಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಒಡಿಶಾದಲ್ಲಿ ವಲಸೆ ಹಕ್ಕಿಗಳ ಸುಸಮಯ ಶುರುವಾಗಿದೆ. ಚಿಲಿಕಾ ಸರೋವರದಲ್ಲಿ ಈಗ ಈ ಹಕ್ಕಿಗಳ ಕಲರವ ನೋಡಬಹುದಾಗಿದೆ. ಐಎಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ.

ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ. 16 ಸೆಕೆಂಡುಗಳ ಈ ದೃಶ್ಯ ನಿಮ್ಮನ್ನು ಅನುಪಮ ಜಗತ್ತಿಗೆ ಕರೆದೊಯ್ಯುತ್ತಿದೆ. ಹಕ್ಕಿಗಳಿಗೆ ಈ  ಚಿಲಿಕಾ ಸ್ವರ್ಗವೇ ಸರಿ. ಸಂತಾನೋತ್ಪತ್ತಿಗೆ ಸೂಕ್ತವಾದ ಜಾಗವನ್ನು ಹುಡುಕಿಕೊಂಡು ಅದಕ್ಕೆ ಬೇಕಾದ ತಯಾರಿಯಲ್ಲಿ ಮುಳುಗಿವೆ ಈ ಹಕ್ಕಿಗಳು. ಪ್ರಶಾಂತವಾದ ಜಾಗ, ಗೂಡು ಕಟ್ಟಲು ಎಲೆ, ನಾರುಗಳ ಸಂಗ್ರಹಣೆ ಹೀಗೆ ಭವಿಷ್ಯದ ಕೆಲಸಗಳಲ್ಲಿ ತನ್ಮಯವಾಗಿವೆ. ಇವುಗಳು ಹೀಗೆ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಚೆಂದ.

7,750ಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಬಹಳ ಅದ್ಭುತವಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಎಲ್ಲ ಜಂಜಡಗಳ ಮಧ್ಯೆ ಹೀಗೆ ಪಕ್ಷಿಗಳನ್ನು ನೋಡುತ್ತಾ ಕಳೆದುಹೋಗಬೇಕು ಎನ್ನಿಸುತ್ತದೆ ಎಂದಿದ್ದಾರೆ ಹಲವರು. ಈಗಲೇ ಈ ಸರೋವರಕ್ಕೆ ಭೇಟಿ ನೀಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಕೆಲವರು.

ನಿಮಗೂ ಇಲ್ಲಿಗೆ ಬೇಟಿ ಕೊಡಬೇಕು ಎನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:27 pm, Fri, 18 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ