AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ : ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ, ನೋಡಿ ವಿಡಿಯೋ

Odisha : ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿ ರಮ್ಯವಾದದ್ದು ಘಟಿಸುತ್ತಾ ಇರುತ್ತದೆ. ಒಮ್ಮೆ ಎಲ್ಲ ಜಂಜಡಗಳನ್ನು ಬಿಟ್ಟು ಆಗಾಗ ಇಂಥ ಪ್ರದೇಶಗಳಲ್ಲಿ ಕಳೆದುಹೋಗುತ್ತಿರಬೇಕು. ಏನಂತೀರಿ?

ಒಡಿಶಾ : ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ, ನೋಡಿ ವಿಡಿಯೋ
Migratory birds in Odisha
TV9 Web
| Edited By: |

Updated on:Nov 18, 2022 | 5:27 PM

Share

Viral Video : ಪ್ರಕೃತಿ ಮತ್ತು ಜೀವವೈವಿಧ್ಯ ಎಂದಿಗೂ ಮುಗಿಯದಂಥ ಅನೇಕ ಅಚ್ಚರಿಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಒಡಿಶಾದಲ್ಲಿ ವಲಸೆ ಹಕ್ಕಿಗಳ ಸುಸಮಯ ಶುರುವಾಗಿದೆ. ಚಿಲಿಕಾ ಸರೋವರದಲ್ಲಿ ಈಗ ಈ ಹಕ್ಕಿಗಳ ಕಲರವ ನೋಡಬಹುದಾಗಿದೆ. ಐಎಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ.

ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ. 16 ಸೆಕೆಂಡುಗಳ ಈ ದೃಶ್ಯ ನಿಮ್ಮನ್ನು ಅನುಪಮ ಜಗತ್ತಿಗೆ ಕರೆದೊಯ್ಯುತ್ತಿದೆ. ಹಕ್ಕಿಗಳಿಗೆ ಈ  ಚಿಲಿಕಾ ಸ್ವರ್ಗವೇ ಸರಿ. ಸಂತಾನೋತ್ಪತ್ತಿಗೆ ಸೂಕ್ತವಾದ ಜಾಗವನ್ನು ಹುಡುಕಿಕೊಂಡು ಅದಕ್ಕೆ ಬೇಕಾದ ತಯಾರಿಯಲ್ಲಿ ಮುಳುಗಿವೆ ಈ ಹಕ್ಕಿಗಳು. ಪ್ರಶಾಂತವಾದ ಜಾಗ, ಗೂಡು ಕಟ್ಟಲು ಎಲೆ, ನಾರುಗಳ ಸಂಗ್ರಹಣೆ ಹೀಗೆ ಭವಿಷ್ಯದ ಕೆಲಸಗಳಲ್ಲಿ ತನ್ಮಯವಾಗಿವೆ. ಇವುಗಳು ಹೀಗೆ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಚೆಂದ.

7,750ಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಬಹಳ ಅದ್ಭುತವಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಎಲ್ಲ ಜಂಜಡಗಳ ಮಧ್ಯೆ ಹೀಗೆ ಪಕ್ಷಿಗಳನ್ನು ನೋಡುತ್ತಾ ಕಳೆದುಹೋಗಬೇಕು ಎನ್ನಿಸುತ್ತದೆ ಎಂದಿದ್ದಾರೆ ಹಲವರು. ಈಗಲೇ ಈ ಸರೋವರಕ್ಕೆ ಭೇಟಿ ನೀಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಕೆಲವರು.

ನಿಮಗೂ ಇಲ್ಲಿಗೆ ಬೇಟಿ ಕೊಡಬೇಕು ಎನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:27 pm, Fri, 18 November 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್