ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ

Online Fraud : ಆನ್​ಲೈನ್ ಶಾಪಿಂಗ್​ನಿಂದ ಸಮಯ ಉಳಿಯಿತು, ಶ್ರಮ ಉಳಿಯಿತು ನಿಜ. ಆದರೆ ಜೊತೆಜೊತೆಗೆ ಆಗಾಗ ಇಂಥ ಯಡವಟ್ಟುಗಳೂ ಸಂಭವಿಸುತ್ತವಲ್ಲ. ಇದಕ್ಕೇನು ಹೇಳುತ್ತೀರಿ?

ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ
ಸಾಂದರ್ಭಿಕ ಚಿತ್ರ
Follow us
| Updated By: ಶ್ರೀದೇವಿ ಕಳಸದ

Updated on:Nov 18, 2022 | 6:27 PM

Viral Video : ಡ್ರೋಣ್​ ಆರ್ಡರ್ ಮಾಡಿದವರಿಗೆ ಆಲೂಗಡ್ಡೆ ಸಿಕ್ಕಿದ್ದು, ಮೊಬೈಲ್ ಆರ್ಡರ್ ಮಾಡಿದವರಿಗೆ ಸೋಪ್​ ಸಿಕ್ಕಿದ್ದು ಹೀಗೆ ಅನೇಕ ವಿಡಿಯೋಗಳನ್ನು ನೋಡಿದ ನೆನಪು ನಿಮಗಿರಬಹುದು. ಇದೀಗ ಮಹಿಳೆಯೊಬ್ಬರು ಆನ್​​ಲೈನ್​ನಲ್ಲಿ ಜೀನ್ಸ್​ ಪ್ಯಾಂಟ್​ ಆರ್ಡರ್ ಮಾಡಿದ್ದಾರೆ. ಆದರೆ ಇವರಿಗೆ ಸಿಕ್ಕಿದ್ದು ಈರುಳ್ಳಿ! ನೆಟ್ಟಿಗರು ಆನ್​ಲೈನ್ ಶಾಪಿಂಗ್​ ಬಗ್ಗೆ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆನ್​ಲೈನ್​ನಲ್ಲಿ ಬ್ರಿಟಿಷ್​ ಸೆಕೆಂಡ್​ ಹ್ಯಾಂಡ್​ ಫ್ಯಾಷನ್​ ಸೈಟ್​ ಡೆಪಾಪ್​​ನಲ್ಲಿ ಜೀನ್ಸ್​ ಆರ್ಡರ್ ಮಾಡಿದ್ದಾಳೆ. ಜೀನ್ಸ್​ನ ಕನಸು ಕಾಣುತ್ತ ಕುಳಿತವಳಿಗೆ ಕೈಗೆ ಬಂದು ತಲುಪಿದ್ದು ಈರುಳ್ಳಿ. ಹೀಗಾದಾಗ ಆಕೆ ವಿಚಲಿತಗೊಂಡು ಕಸ್ಟಮರ್ ಕೇರ್​ಗೆ ಸಂಪರ್ಕಿಸಿದ್ದಾಳೆ. ಆದರೆ ಅತ್ತಕಡೆಯಿಂದ ವ್ಯಕ್ತಿ ಕೂಡ ಈಕೆಯಂತೆಯೇ ಗೊಂದಲವನ್ನು ಅನುಭವಿಸಿದ್ಧಾರೆ. ಇದು ಹೀಗಾಗಲು ಹೇಗೆ ಸಾಧ್ಯ ಎಂದು ಮಹಿಳೆ, ನನಗೂ ಅದೇ ಅರ್ಥವಾಗುತ್ತಿಲ್ಲ ಎಂದು ಕಸ್ಟಮರ್ ಕೇರ್​ ಎಕ್ಸಿಕ್ಯೂಟಿವ್ ತಿಳಿಸಿದ್ದಾರೆ. ಈ ಚಾಟ್​ ಸ್ಕ್ರೀನ್ ಶಾಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಈ ವೆಬ್​ಸೈಟ್​ ಮಹಿಳೆಗೆ ಕ್ಷಮೆ ಕೇಳಿದೆ.

ಸ್ತ್ರೀರೋಗ ತಜ್ಞೆಯ ಸೋಗಿನಲ್ಲಿ 38 ಮಹಿಳೆಯರನ್ನು ಫೇಸ್​ಬುಕ್​ ಮೂಲಕ ವಂಚಿಸಿದ ಪುರುಷಪುಂಗವ

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಪೋಸ್ಟ್​ 23,000 ಜನರನ್ನು ಸೆಳೆದಿದೆ. ಬಹಳ ಜನರು, ತಮಾಷೆಯಾಗಿದೆ ಇದೆಲ್ಲ. ಯಾಕೆ ಜನರು ಇಂಥದೆಲ್ಲದಕ್ಕೆ ಆಸೆ ಪಡುತ್ತಾರೋ ಎಂದಿದ್ದಾರೆ. ಈರುಳ್ಳಿ! ಬಹಳ ಸಮಯೋಚಿತವಾಗಿದೆ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಂದಿದ್ದಾರೆ ಹಲವರು.

ಆನ್​ಲೈನ್​ ಶಾಪಿಂಗ್​ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ ನಿಜ. ಆದರೆ ಎಲ್ಲ ಸಮಯದಲ್ಲಿಯೂ ಇದು ಗ್ರಾಹಕಸ್ನೇಹಿಯಾಗಿ ವರ್ತಿಸುತ್ತದೆ ಎಂದು ಹೇಳಲಾಗದು. ಆಗಾಗ ಇಂಥ ಘಟನೆಗಳೇ ಇದಕ್ಕೆ ಸಾಕ್ಷಿ. ಇದು ಒತ್ತಡವನ್ನುಂಟು ಮಾಡುವುದಲ್ಲದೆ ಮತ್ತೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಮಯವನ್ನೂ ಬೇಡುತ್ತದೆ.

ಏನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:26 pm, Fri, 18 November 22

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ