AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Super Worm Moon 2021: ಇಂದು ಮತ್ತು ನಾಳೆ ರಾತ್ರಿ ಪ್ರಕಾಶಮಾನ, ಪೂರ್ಣಪ್ರಮಾಣದ ಚಂದ್ರನನ್ನು ನೋಡಲು ತಪ್ಪಿಸಿಕೊಳ್ಳಬೇಡಿ

ವಸಂತ ಮಾಸದ ಆಗಮನವಾಗಿದೆ. ಇದೇ ಸಮಯದಲ್ಲಿ ಚಂದ್ರ ಸಂಪೂರ್ಣ ಸ್ವರೂಪ ದರ್ಶನವಾಗುತ್ತಿದೆ. ಅಲ್ಲದೇ ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿಯೂ ಚಂದ್ರ ಗೋಚರಿಸಲಿದ್ದಾನೆ. ಹೀಗಾಗಿ ಚಂದ್ರ ದರ್ಶನ ಮಾಡುವ ಅನುಭವ ಮುದ ನೀಡುವುದಂತೂ ಖಚಿತ .

Super Worm Moon 2021: ಇಂದು ಮತ್ತು ನಾಳೆ ರಾತ್ರಿ ಪ್ರಕಾಶಮಾನ, ಪೂರ್ಣಪ್ರಮಾಣದ ಚಂದ್ರನನ್ನು ನೋಡಲು ತಪ್ಪಿಸಿಕೊಳ್ಳಬೇಡಿ
ಸಾಂದರ್ಭಿಕ ಚಿತ್ರ
guruganesh bhat
| Edited By: |

Updated on: Mar 28, 2021 | 9:48 PM

Share

ಬಾಹ್ಯಾಕಾಶದಲ್ಲಿ ಮಹತ್ವದ ವಿದ್ಯಮಾನವೊಂದನ್ನು ವೀಕ್ಷಿಸಲು ಇನ್ನೊಂದು ದಿನಗಳ ಅವಕಾಶ ಮಾತ್ರವಷ್ಟೇ ಇದೆ. ನಿನ್ನೆ (ಮಾರ್ಚ್ 27) ಯಿಂದ ಚಂದ್ರ ಅತ್ಯಂತ ಪ್ರಕಾಶಮಾನವಾಗಿಯೂ, ಪೂರ್ಣಪ್ರಮಾಣದಲ್ಲಿಯೂ ಕಾಣಿಸುತ್ತಾನೆ. ಸುಂದರ ಚಂದ್ರ ಈ ಸ್ವರೂಪವನ್ನು ಇಂದು ಮತ್ತು ನಾಳೆ ರಾತ್ರಿ, ಹೆಚ್ಚೆಂದರೆ ಬುಧವಾರದ ಬೆಳಗು ಜಾವದವರೆಗೆ (ಮಾರ್ಚ್ 28, 29ರ ರಾತ್ರಿ ಮತ್ತು ಮಾರ್ಚ್ 30ರ ಬೆಳಗಿನ ಜಾವ) ಮಾತ್ರ ವೀಕ್ಷಿಸಬಹುದಾಗಿದೆ. ಈ ಕುರಿತು ನಾಸಾ ತನ್ನ ವೆಬ್​ಸೈಟ್​ನಲ್ಲಿ ಬರೆದುಕೊಂಡಿದೆ.

ಪೂರ್ವ ಆಕಾಶದಲ್ಲಿ ಭಾನುವಾರ ರಾತ್ರಿ ಚಂದ್ರನು ತನ್ನ ಪೂರ್ಣ ಮತ್ತು ಪ್ರಕಾಶಮಾನವಾಗಿರುತ್ತಾನೆ, ಶನಿವಾರ ಬೆಳಿಗ್ಗೆಯಿಂದ ಸೋಮವಾರ ರಾತ್ರಿಯವರೆಗೆ ಮಂಗಳವಾರ ಮುಂಜಾನೆ ಸುಮಾರು ಮೂರು ದಿನಗಳವರೆಗೆ ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ಅಲ್ಲದೇ ಉತ್ತರ ಭಾರತದ ಹಲವೆಡೆ ಈ ಸಮಯದಲ್ಲಿ ಹೋಳಿ ಹಬ್ಬದ ಚಂದ್ರ ಎಂದು ಕರೆಯುವ ಪದ್ಧತಿಯೂ ಜನಸಾಮಾನ್ಯರಲ್ಲಿದೆ.

ಸಹಜವಾಗಿ ಈ ಚಂದಿರನೂ ಒಂದು ಬಗೆಯ ಸೂಪರ್ ಮೂನ್ ಆಗಿದ್ದಾನೆ. ಈ ಸಮಯದಲ್ಲಿ ಚಂದಿರನ ಪ್ರಕಾಶಮಾನ ಶೇ 30ರಷ್ಟು ಹೆಚ್ಚಿರುತ್ತದೆ. ಅಲ್ಲದೇ ಗಾತ್ರದಲ್ಲೂ ಶೇ 12ರಷ್ಟು ಹೆಚ್ಚು ದೊಡ್ಡದಾಗಿ ಚಂದ್ರ ಕಾಣಿಸುತ್ತಾನೆ.

ವಸಂತ ಮಾಸದ ಆಗಮನವಾಗಿದೆ. ಇದೇ ಸಮಯದಲ್ಲಿ ಚಂದ್ರ ಸಂಪೂರ್ಣ ಸ್ವರೂಪ ದರ್ಶನವಾಗುತ್ತಿದೆ. ಅಲ್ಲದೇ ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿಯೂ ಚಂದ್ರ ಗೋಚರಿಸಲಿದ್ದಾನೆ. ಹೀಗಾಗಿ ಚಂದ್ರ ದರ್ಶನ ಮಾಡುವ ಅನುಭವ ಮುದ ನೀಡುವುದಂತೂ ಖಚಿತ .

ಇದನ್ನೂ ಓದಿ: ‘ಚಂದ್ರಲೋಕಕ್ಕೆ ಪ್ರವಾಸ.. ಮನೆಗೊಂದು ಸಣ್ಣ ಹೆಲಿಕಾಪ್ಟರ್​’ -ತಮಿಳುನಾಡಿನ ಅಭ್ಯರ್ಥಿಯ ಚುನಾವಣಾ ಪ್ರಣಾಳಿಕೆಗಳಿವು ; ಇದರಲ್ಲಿದೆ ಒಂದು ​ಟ್ವಿಸ್ಟ್

ಹತ್ತರೀ ಸಾಧನಕೇರಿ ಬಸ್: ಸೂರ್ಯ ಮುಳುಗುವ ಮುನ್ನ ಓಡೋಡಿ ಬರುವ ಜನ, ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ…

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?