AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸ್ವೀಡನ್​ನ ಬೀದಿಗಳಲ್ಲಿರುವ ಸಿಗರೇಟ್​ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ

ಸೂಕ್ಷ್ಮ ದೃಷ್ಟಿಯುಳ್ಳ ಕಾಗೆಗಳನ್ನು ನಗರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಿಗರೇಟ್​ಗಳನ್ನು ಹೆಕ್ಕಿ ತೆಗೆದು ಮಾಲಿನ್ಯವನ್ನು ತಡೆಯಲು ಸ್ವೀಡನ್​ನ ಸ್ಟಾರ್ಟ್​ ಅಪ್​ ಕಂಪನಿಯೊಂದು ಕಾಗೆಗಳಿಗೆ ತರಬೇತಿ ನೀಡಲು ಮುಂದಾಗಿದೆ.

Viral News: ಸ್ವೀಡನ್​ನ ಬೀದಿಗಳಲ್ಲಿರುವ ಸಿಗರೇಟ್​ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ
ಕಾಗೆ (ಪ್ರಾತಿನಿಧಿಕ ಚಿತ್ರ)
TV9 Web
| Updated By: Pavitra Bhat Jigalemane|

Updated on: Feb 04, 2022 | 3:45 PM

Share

ನಗರಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸ್ವೀಡನ್​ನಲ್ಲಿ (Sweden) ಕಾಗೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೌದು ಸೂಕ್ಷ್ಮ ದೃಷ್ಟಿಯುಳ್ಳ ಕಾಗೆಗಳನ್ನು ನಗರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಿಗರೇಟ್​ಗಳನ್ನು ಹೆಕ್ಕಿ ತೆಗೆದು ಮಾಲಿನ್ಯವನ್ನು ತಡೆಯಲು ಸ್ವೀಡನ್​ನ ಸ್ಟಾರ್ಟ್​ ಅಪ್​ ಕಂಪನಿಯೊಂದು (Start Up Company) ಕಾಗೆಗಳಿಗೆ (Crows) ತರಬೇತಿ ನೀಡಲು ಮುಂದಾಗಿದೆ. ಸದ್ಯ ಈ ಸುದ್ದಿ ಜಗತ್ತಿನಾದ್ಯಂತ ವೈರಲ್​ ಆಗಿದೆ. ಕಾಗೆಗಳು ಹೆಕ್ಕಿ ತಂದ ಸಿಗರೇಟ್​ಗಳನ್ನು ಹಾಕಲು ಮಷಿನ್​ ಒಂದನ್ನು ಇಡಲಾಗುತ್ತದೆ ಎಂದು ವರದಿಯಾಗಿದೆ. 

ಫಸ್ಟ್​ ಪೋಸ್ಟ್​ ಸುದ್ದಿ ಸಂಸ್ಥೆ ಈ ಕುರಿತು ವರದಿ ಮಾಡಿದೆ. ಸ್ವೀಡನ್​ನಲ್ಲಿ ಎಲ್ಲೆಂದರಲ್ಲಿ ಬಿಸಾಡಿದ ಸಿಗರೇಟ್​ ಚುರುಗಳು ಬಹುದೊಡ್ಡ ಸಮಸ್ಯೆಯಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಮಣ್ಣಿನ ಮಾಲಿನ್ಯವನ್ನು ಹೆಚ್ಚು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ವೀಡನ್​ನ ಸ್ಟಾರ್ಟ್​ ಅಪ್​ ಕಂಪನಿ ಕಾಗೆಗಳಿಗೆ ಸಿಗರೇಟ್​ ಚೂರುಗಳನ್ನು ಹೆಕ್ಕಿ ತರುವ ಕೆಲಸ ನೀಡುತ್ತಿದೆ. ಪ್ರತೀ ಬಾರಿ ಕಸವನ್ನು ತಂದು ಮಷಿನ್​ನೊಳಗೆ ಹಾಕುವಾಗಲೂ  ಕಾಗೆಗಳು ಆಹಾರವನ್ನು ಪಡೆಯುತ್ತವಂತೆ.

ಕೋರ್ವಿಡ್​ ಕ್ಲೀನಿಂಗ್​ ಎನ್ನುವ ಹೆಸರಿನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಸ್ವೀಡನ್​ನಲ್ಲಿ ಸಿಗರೇಟ್​ ಬಟ್​​ಗಳನ್ನು ಸಂಗ್ರಹಿಸಲು ಪ್ರತೀ ಸಿಗರೇಟ್​ ಬಡ್​ ಪತ್ತೆಗೆ 16 ರೂ ವೆಚ್ಚವಾಗುತ್ತದೆ. ಕಾಗೆಗಳನ್ನು ಈ ಕೆಲಸಕ್ಕೆ ಬಳಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ ಗುಂಥರ್​ ಅನ್ಸೇನ್​.  ಕಾಗೆಗಳ ಬುದ್ಧಿವಂತಿಕೆ ಬಗ್ಗೆ ಮಾತನಾಡುವ ಗುಂಥರ್​, ಕಾಗೆಗಳಿಗೆ ಕಲಿಸುವುದು ಸುಲಭ, 7 ರಿಂದ 10 ವರ್ಷದ ಮಕ್ಕಳಲ್ಲಿ ಕಂಡುಬರುವ ಕಲಿಕೆಯಲ್ಲಿನ ಚುರುಕುತನ ಕಾಗೆಗಳಲ್ಲಿ ಕಂಡುಬರುತ್ತದೆ. ಹೀಗಾಗಿ ನಗರ ಸ್ವಚ್ಛತೆಗೆ ಕಾಗೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಸ್ವೀಡನ್​ನಲ್ಲಿ ದಿನದಿಂದ ದಿನಕ್ಕೆ ಸಿಗರೇಟ್​ ಬಿಟ್​ಗಳು ಬೀದಿಯಲ್ಲಿ ಬೀಳುತ್ತಿರುವ ಪ್ರಮಾಣ ಏರಿಕೆಯಾಗುತ್ತಿದೆ. ಸಿಗರೇಟ್​ ದೇಹಕ್ಕೆ ಎಷ್ಟು ಮಾರಕವೋ ಅದರಲ್ಲಿನ ಪ್ಲಾಸ್ಟಿಕ್​ ಪರಿಸರಕ್ಕೂ ಅಷ್ಟೇ ಹಾನಿಕಾರಕ. ಸ್ವೀಡನ್​ನಲ್ಲಿ ಪ್ರತೀ ವರ್ಷ 1 ಬಿಲಿಯನ್​ ಸಿಗರೇಟ್​ ಬಡ್​ಗಳು ದೇಶದ ಶೇ. 62ರಷ್ಟು ಭಾಗದಲ್ಲಿ ಕಾಣಸಿಗುತ್ತವೆ. ಇದರ ತಡೆಗೆ ಈಗ ಕಾಗೆಗಳ ಮೂಲಕ ಪರಿಹಾರ ನೀಡಲು ಸ್ಟಾರ್ಟ್​ ಅಪ್​ ಸಂಸ್ಥೆ ಮುಂದಾಗಿದೆ.

ಇದನ್ನೂ ಓದಿ:

ಮೆಟಾವರ್ಸ್​ ಪ್ರವೇಶಿಸಿದ ಕೆಲವೇ ಹೊತ್ತಲ್ಲಿ ಗ್ಯಾಂಗ್​ ರೇಪ್​​ಗೆ ಒಳಗಾದೆ; ಬ್ರಿಟಿಷ್​ ಮಹಿಳೆಯಿಂದ ಗಂಭೀರ ಆರೋಪ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್