AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಒಂದು ಕೈಲಿ ಗನ್, ಮತ್ತೊಂದು ಕೈಲಿ ಐಸ್​ಕ್ರೀಮ್; ಕಾಬೂಲ್​ನಲ್ಲಿರುವ ತಾಲಿಬಾನ್ ಉಗ್ರರ ಫೋಟೋ ವೈರಲ್

ಕಾಬೂಲ್​ನ ಮನೋರಂಜಾನ ಪಾರ್ಕ್​ನಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದೇ ಎಂಜಾಯ್ ಮಾಡುತ್ತಿರುವ ದೃಶ್ಯಗಳೂ ಸಹ ವೈರಲ್ ಆಗಿತ್ತು. ಇದೀಗ ಉಗ್ರರು ಐಸ್​ಕ್ರೀಮ್​​ ತಿನ್ನುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.

Viral Photo: ಒಂದು ಕೈಲಿ ಗನ್, ಮತ್ತೊಂದು ಕೈಲಿ ಐಸ್​ಕ್ರೀಮ್; ಕಾಬೂಲ್​ನಲ್ಲಿರುವ ತಾಲಿಬಾನ್ ಉಗ್ರರ ಫೋಟೋ ವೈರಲ್
ಒಂದು ಕೈಲಿ ಗನ್, ಮತ್ತೊಂದು ಕೈಲಿ ಐಸ್​ಕ್ರೀಮ್
TV9 Web
| Edited By: |

Updated on: Aug 20, 2021 | 11:22 AM

Share

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಫ್ಘಾನಿ ಸಂಸತ್ತನ್ನು ಪ್ರವೇಶಿಸಿ ಎಲ್ಲೆಂದರಲ್ಲಿ ಕುಳಿತು ಮೊಬೈಲ್ ನೋಡುತ್ತಿರುವ ದೃಶ್ಯಗಳಿಂದ ಹಿಡಿದು, ಕಾಬೂಲ್​ನ ಮನೋರಂಜನಾ ಪಾರ್ಕ್​ನಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದೇ ಎಂಜಾಯ್ ಮಾಡುತ್ತಿರುವ ದೃಶ್ಯಗಳೂ ಸಹ ವೈರಲ್ ಆಗಿತ್ತು. ಇದೀಗ ಉಗ್ರರು ಐಸ್​ಕ್ರೀಮ್​​ ತಿನ್ನುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಆದರೂ ಸಹ ಶಸ್ತ್ರಾಸ್ತ್ರಗಳನ್ನು ಬಿಡುತ್ತಿಲ್ಲ. ಒಂದು ಕೈಲಿ ಗನ್​, ಮತ್ತೊಂದು ಕೈಲಿ ಐಸ್​ಕ್ರೀಮ್​ ಕೋನ್​ ಹಿಡಿದಿರುವ ಫೋಟೋ ವೈರಲ್​ ಆಗಿದೆ.

ದೃಶ್ಯ ಕಾಬೂಲ್​ನ ಐಸ್​ಕ್ರೀಮ್​ ಪಾರ್ಲರ್ ಎದುರು ನಿಂತಿರುವ ಚಿತ್ರ. ಈ ದೃಶ್ಯವನ್ನು ಟೋಲೋ ನ್ಯೂಸ್ ಜರ್ನಲಿಸ್ಟ್ ಅಬ್ದುಲ್ಲಾಹ್ ಒಮೆರಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಬೂಲ್​​ ಮನರಂಜನಾ ಪಾರ್ಕ್​​ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್​ಮೆಂಟ್​; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ ತಾಲಿಬಾನ್​ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್​ನ ಮನರಂಜನಾ ಪಾರ್ಕ್​ವೊಂದರಲ್ಲಿ ಎಲೆಕ್ಟ್ರಿಕ್​ ಬಂಪರ್​ ಕಾರ್​ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ, ಇನ್ನೊಂದು ಪ್ರತ್ಯೇಕ ವಿಡಿಯೋದಲ್ಲಿ ಆಟದ ಕುದುರೆಗಳನ್ನೇರಿ ಎಂಜಾಯ್​ ಮಾಡುತ್ತಿದ್ದಾರೆ. ಮತ್ತೊಂದಷ್ಟು ಉಗ್ರರು ಸುತ್ತಲೂ ನಿಂತು ನೋಡುತ್ತಿದ್ದಾರೆ. ಉಗ್ರರ ಕೈವಶವಾದ ತಾಲಿಬಾನ್​​ನಿಂದ ಪರಾರಿಯಾಗಲು ಸಾವಿರಾರು ಜನರು ಯುಎಸ್​ ಮಿಲಿಟರಿ ವಿಮಾನವನ್ನು ಬೇಕಾಬಿಟ್ಟಿ ಹತ್ತಿ, ನೂಕುನುಗ್ಗಲು ಉಂಟಾದ ವಿಡಿಯೋಗಳು ವೈರಲ್​ ಆಗಿದ್ದವು.

ಇದನ್ನು ಓದಿ: Video: ಕಾಬೂಲ್​​ ಮನರಂಜನಾ ಪಾರ್ಕ್​​ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್​ಮೆಂಟ್​; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ

Video: ಶಸ್ತ್ರಾಸ್ತ್ರ ಸಹಿತವಾಗಿಯೇ ಸಂಸತ್ತು ಪ್ರವೇಶಿಸಿ, ಎಲ್ಲೆಂದರಲ್ಲಿ ಕುಳಿತ ತಾಲಿಬಾನ್​ ಉಗ್ರರು; ಅಧ್ಯಕ್ಷರ ಭವನದಲ್ಲೂ ಕಾರುಬಾರು

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ