Video: ಕಾಬೂಲ್​​ ಮನರಂಜನಾ ಪಾರ್ಕ್​​ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್​ಮೆಂಟ್​; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ

ತಾಲಿಬಾನ್​ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್​ನ ಮನರಂಜನಾ ಪಾರ್ಕ್​ವೊಂದರಲ್ಲಿ ಎಲೆಕ್ಟ್ರಿಕ್​ ಬಂಪರ್​ ಕಾರ್​ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು.

Video: ಕಾಬೂಲ್​​ ಮನರಂಜನಾ ಪಾರ್ಕ್​​ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್​ಮೆಂಟ್​; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ
ಅಮ್ಯೂಸ್​ಮೆಂಟ್​ ಪಾರ್ಕ್​​ನಲ್ಲಿ ತಾಲಿಬಾನ್​ ಉಗ್ರರ ಆಟ
Follow us
| Updated By: Digi Tech Desk

Updated on:Aug 17, 2021 | 2:37 PM

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದುಕೊಂಡಿರುವ ತಾಲಿಬಾನ್​ ಉಗ್ರರು ಇದೀಗ ಸಿಕ್ಕಾಪಟೆ ಎಂಜಾಯ್​ ಮಾಡುತ್ತಿದ್ದಾರೆ. ಆದರೆ ಎಲ್ಲೇ ಹೋಗಲಿ, ಏನೇ ಮಾಡಲಿ ಶಸ್ತ್ರಾಸ್ತ್ರಗಳನ್ನು ಮಾತ್ರ ಕೈ ಬಿಡುತ್ತಿಲ್ಲ. ಉಗ್ರರು ನಿನ್ನೆ ಅಫ್ಘಾನಿಸ್ತಾನದ ಸಂಸತ್ತನ್ನು ಪ್ರವೇಶಿಸಿ ಎಲ್ಲೆಂದರೆಲ್ಲ ಕುಳಿತು, ಮೊಬೈಲ್​ ನೋಡುತ್ತಿದ್ದ ಫೋಟೋ-ವಿಡಿಯೋಗಳು ವೈರಲ್​ ಆಗಿದ್ದವು. ಇದೀಗ ಅವರು ಫನ್ನಿಯಾಗಿ ಸಮಯ ಕಳೆಯುತ್ತಿರುವ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಉಗ್ರರ ಕ್ರೌರ್ಯಕ್ಕೆ ಅದೆಷ್ಟೋ ಜನರು ನಿರಾಶ್ರಿತರಾಗಿ ಒದ್ದಾಡುತ್ತಿದ್ದರೆ, ಇತ್ತ ಇವರು ಅಮ್ಯೂಸ್​ಮೆಂಟ್​ ಪಾರ್ಕ್​ಗಳಲ್ಲಿ ಮಕ್ಕಳಾಟ ಆಡುತ್ತ, ನಗುತ್ತ, ಕೇಕೆ ಹಾಕುತ್ತಿದ್ದಾರೆ.

ತಾಲಿಬಾನ್​ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್​ನ ಮನರಂಜನಾ ಪಾರ್ಕ್​ವೊಂದರಲ್ಲಿ ಎಲೆಕ್ಟ್ರಿಕ್​ ಬಂಪರ್​ ಕಾರ್​ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ, ಇನ್ನೊಂದು ಪ್ರತ್ಯೇಕ ವಿಡಿಯೋದಲ್ಲಿ ಆಟದ ಕುದುರೆಗಳನ್ನೇರಿ ಎಂಜಾಯ್​ ಮಾಡುತ್ತಿದ್ದಾರೆ. ಮತ್ತೊಂದಷ್ಟು ಉಗ್ರರು ಸುತ್ತಲೂ ನಿಂತು ನೋಡುತ್ತಿದ್ದಾರೆ. ಉಗ್ರರ ಕೈವಶವಾದ ತಾಲಿಬಾನ್​​ನಿಂದ ಪರಾರಿಯಾಗಿಲು ಸಾವಿರಾರು ಜನರು ಯುಎಸ್​ ಮಿಲಿಟರಿ ವಿಮಾನವನ್ನು ಬೇಕಾಬಿಟ್ಟಿ ಹತ್ತಿ, ನೂಕುನುಗ್ಗಲು ಉಂಟಾದ ವಿಡಿಯೋಗಳು ನಿನ್ನೆ ವೈರಲ್​ ಆಗಿದ್ದವು. ವಿಮಾನದ ರೆಕ್ಕೆಗಳ ಮೇಲೆ, ಎಂಜಿನ್​ ಎಲ್ಲೆಂದರೆಲ್ಲ ಹತ್ತುವುದನ್ನು ವಿಡಿಯೋದಲ್ಲಿ ನೋಡಬಹುದಿತ್ತು. ಒಂದೆಡೆ ದುಃಖ..ನೋವಿನ ವಿಡಿಯೋಗಳಾದರೆ, ಇನ್ನೊಂದೆಡೆ ಉಗ್ರರ ಖುಷಿ, ಅಬ್ಬರದ ನಗುವಿನ ವಿಡಿಯೋಗಳು. ಹೀಗೆ ಒಂದಕ್ಕೊಂದು ವ್ಯತಿರಿಕ್ತ ವಿಡಿಯೋಗಳನ್ನು ನೋಡಿದರೆ ಅಲ್ಲಿನ ಪರಿಸ್ಥಿಯ ಬಗ್ಗೆ ಸ್ಪಷ್ಟವಾದೊಂದು ಚಿತ್ರಣ ಸಿಗುತ್ತದೆ.

ಇದನ್ನೂ ಓದಿ: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

Late Night Eating: ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಎಚ್ಚರ ಇರಲಿ

Published On - 9:50 am, Tue, 17 August 21

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್