ಕೆಸರಿನಲ್ಲಿ ಸಿಲುಕಿಕೊಂಡು ನರಳಾಡುತ್ತಿದ್ದ ಆನೆಯನ್ನು ರಕ್ಷಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ; ಇಲ್ಲಿದೆ ವೈರಲ್ ವಿಡಿಯೋ

25 ವರ್ಷದ ಆನೆಯು ಕೆಸರಿನಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದರಿಂದ ಆನೆಯನ್ನು ಸಂಕಷ್ಟದಿಂದ ಪಾರು ಮಾಡಲಾಗಿದೆ.

ಕೆಸರಿನಲ್ಲಿ ಸಿಲುಕಿಕೊಂಡು ನರಳಾಡುತ್ತಿದ್ದ ಆನೆಯನ್ನು ರಕ್ಷಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ; ಇಲ್ಲಿದೆ ವೈರಲ್ ವಿಡಿಯೋ
ಕೆಸರಿನಲ್ಲಿ ಸಿಲುಕಿಕೊಂಡಿರುವ ಆನೆ
Updated By: ಗಂಗಾಧರ​ ಬ. ಸಾಬೋಜಿ

Updated on: Mar 27, 2022 | 10:08 AM

ಅರಣ್ಯ ಪ್ರಾಣಿಗಳು ಎಷ್ಟೇ ಬಲಿಷ್ಟಾಗಿದ್ದರೂ ಕೆಲವೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಸೋಲುತ್ತವೆ. ಅವು ಕೆಲವೊಮ್ಮೆ ಅಸಹಾಯಕ ಪರಿಸ್ಥಿತಿಗಳಿಗೆ ಒಳಗಾಗುವುದು ಇದೆ. ಇತ್ತೀಚೆಗಷ್ಟೇ ತಮಿಳುನಾಡಿನ ನೀಲಗಿರಿಯ ಜೌಗು ಪ್ರದೇಶದ ಗುಡಲೂರು ಅರಣ್ಯದಲ್ಲಿ ಆನೆ (Elephant) ಯೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. 25 ವರ್ಷದ ಆನೆಯು ಕೆಸರಿನಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದರಿಂದ ಆನೆಯನ್ನು ಸಂಕಷ್ಟದಿಂದ ಪಾರು ಮಾಡಲಾಗಿದೆ. ತಮಿಳುನಾಡಿನ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಈ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕೆಸರಿನಲ್ಲಿ ಬಿದ್ದ ಆನೆಗೆ ಹಗ್ಗವನ್ನು ಎಸೆಯಲಾಗಿದ್ದು, ಆನೆಯೂ ಕೂಡ ಹಗ್ಗವನ್ನು ಹಿಡಿದುಕೊಂಡಿದೆ. ಇದರಿಂದ ಅರಣ್ಯ ರಕ್ಷಕರಿಗೆ ಸಹಾಯವಾಗಿದ್ದು, ಕೆಸರಿನಿಂದ ಆನೆಯನ್ನು ಮೇಲೆಳೆಯಲು ಸಹಾಯವಾಗಿದೆ. ಜೌಗು ಪ್ರದೇಶದಲ್ಲಿ ಆನೆಯನ್ನು ರಕ್ಷಿಸುವಾಗ ಪ್ರತಿಯೊಬ್ಬ  ರಕ್ಷಕರು ರಕ್ಷಣಾ ಕಾರ್ಯಾಚರಣೆಯನ್ನು ಸಂಘಟಿಸಲು ಪರಸ್ಪರ ಮಾತನಾಡುವುದನ್ನು ಕೇಳಬಹುದು.

ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಸುಪ್ರಿಯಾ ಸಾಹು, ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಮೂಲಕ ಗಮನಾರ್ಹವಾದ ಹೋರಾಟದ ಮನೋಭಾವವನ್ನು ತೋರಿಸಿದ ಆನೆಯನ್ನು ಶ್ಲಾಘಿಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಈಗಾಗಲೇ ಟ್ವಿಟರ್‌ನಲ್ಲಿ 16.1 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅರಣ್ಯ ಇಲಾಖೆಯ ಪ್ರಯತ್ನ ಮತ್ತು ಪ್ರಾಣಿಗಳ ಹೋರಾಟದ ಮನೋಭಾವವನ್ನು ವೀಕ್ಷಕರು ಶ್ಲಾಘಿಸುತ್ತಲೇ ಇದ್ದಾರೆ.

ಈ ಆನೆಯನ್ನು ಉಳಿಸಲು ಸಹಾಯ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅಭಿನಂದನೆಗಳು. ಪ್ರತಿಯೊಂದು ಆನೆಯ ಜೀವವೂ ನಮಗೆ ಬಹಳ ಮುಖ್ಯ. ದುರದೃಷ್ಟವಶಾತ್ ನಾವು ಅನೇಕ ಕಾರಣಗಳಿಗಾಗಿ ಅವುಗಳಲ್ಲಿ ಬಹಳಷ್ಟು ಕಳೆದುಕೊಳ್ಳುತ್ತಿದ್ದೇವೆ ಮತ್ತು ಅನೇಕರು ನಿರ್ದಯವಾಗಿ ಕೊಲ್ಲಲ್ಪಡುತ್ತಾರೆ. ಆನೆಗಳನ್ನು ಉಳಿಸಿ ಎಂದು ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಅರಣ್ಯ ಸಿಬ್ಬಂದಿಯ ಈ ಉದಾರ ಕಾರ್ಯವು ಮಾನವೀಯತೆಯ ಮೇಲಿನ ನಂಬಿಕೆಯನ್ನು ಬಲಪಡಿಸಿದೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ಅವರ ಪ್ರಯತ್ನಗಳನ್ನು ಶ್ಲಾಘಿಸಲು ಸುಪ್ರಿಯಾ ರಕ್ಷಣಾ ಕಾರ್ಯಾಚರಣೆಯ ಹಿಂದಿನ ತಂಡದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

‘ಜೇಮ್ಸ್​’ ಸಿನಿಮಾ ನೋಡಿ ಕಣ್ಣೀರು ಹಾಕಿದ ಗೀತಾ ಶಿವರಾಜ್​ಕುಮಾರ್​; ಇಲ್ಲಿದೆ ವಿಡಿಯೋ..