AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ

Baby Elephant : ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಯನ್ನು ಯಾಕೆ ನೆಟ್ಟಿಗರು ಶ್ಲಾಘಿಸಿರಬಹುದು? ವಿಡಿಯೋ ನೋಡಿ.

Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ
ಮಲಗಿದ ಮರಿಯಾನೆಗೆ ಛತ್ರಿ ಹಿಡಿದು ನೆರಳು ನೀಡಿದ ಅರಣ್ಯ ಸಿಬ್ಬಂದಿ
TV9 Web
| Edited By: |

Updated on:Sep 08, 2022 | 4:22 PM

Share

Viral Video : ಪುಟ್ಟ ಮರಿಯಾನೆ ಅಮ್ಮನಿಂದ ತಪ್ಪಿಸಿಕೊಂಡಿದೆ. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಗೆ ಆದಷ್ಟು ಬೇಗ ಮರಿ-ಅಮ್ಮನನ್ನು ಒಂದುಗೂಡಿಸುವ ತವಕ. ಈ ಪ್ರಯತ್ನದಲ್ಲಿ ಮರಿ ನಡೆದು ನಡೆದು ಸುಸ್ತಾಗಿ ಒಂದೆಡೆ ಮಲಗಿದೆ. ಬಿಸಿಲು ಬೇರೆ ಜೋರು. ಆಗ ಸಿಬ್ಬಂದಿಯೊಬ್ಬರಿಗೆ ಛತ್ರಿ ಹಿಡಿದು ಅದಕ್ಕೆ ನೆರಳು ಕಲ್ಪಿಸಬೇಕು ಎನ್ನಿಸಿದೆ. ಈ ದೃಶ್ಯವನ್ನು ಸೆರೆಹಿಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್​ನಲ್ಲಿ ಇದನ್ನು ಪೋಸ್ಟ್ ಮಾಡಿ, ಸಿಬ್ಬಂದಿಯ ಕಾಳಜಿ, ಸಹಾನುಭೂತಿ ಮತ್ತು ಆಲೋಚನಾ ವಿಧಾನದ ಸಾರ್ಥಕತೆಯನ್ನು ಶ್ಲಾಘಿಸಿದ್ದಾರೆ. ಈತನಕ ಈ ವೀಡಿಯೊ ಸುಮಾರು 58,000 ವೀಕ್ಷಕರನ್ನು ತಲುಪಿದೆ. 3,200 ಕ್ಕೂ ಜನ ಇಷ್ಟಪಟ್ಟಿದ್ದಾರೆ.

ಈ ಮುದ್ದುಆನೆಯು ತನ್ನ ತಾಯಿಯನ್ನು ಸೇರುವ ವಿಡಿಯೋ ನಿಮ್ಮ ಬಳಿ ಇದ್ದರೆ ದಯವಿಟ್ಟು ಪೋಸ್ಟ್​ ಮಾಡಿ, ನೋಡಲು ಖುಷಿ ಎನ್ನಿಸುತ್ತದೆ ಎಂದು ಟ್ವಿಟರ್ ಖಾತೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದಕ್ಕೇ ಈ ಪುಟ್ಟ ಗಜರಾಜ ಯಾವುದೇ ಭಯವಿಲ್ಲದೆ ಹಿಂಬಾಲಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನು ಮಲಗಿದಾಗ ನನಗೂ ಇಂಥದೇ ಕಾಳಜಿ ನಿರೀಕ್ಷಿಸುತ್ತೇನೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಅದ್ಭುತ ವರ್ತನೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.

ಕರ್ತವ್ಯವನ್ನು ಯಾರೂ ಮಾಡುತ್ತಾರೆ. ಆದರೆ ಹೀಗೆ ಯೋಚಿಸಿ ಅಂತಃಕರಣದಿಂದ ನಡೆದುಕೊಳ್ಳುವವರು? ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Thu, 8 September 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?