AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ

Baby Elephant : ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಯನ್ನು ಯಾಕೆ ನೆಟ್ಟಿಗರು ಶ್ಲಾಘಿಸಿರಬಹುದು? ವಿಡಿಯೋ ನೋಡಿ.

Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ
ಮಲಗಿದ ಮರಿಯಾನೆಗೆ ಛತ್ರಿ ಹಿಡಿದು ನೆರಳು ನೀಡಿದ ಅರಣ್ಯ ಸಿಬ್ಬಂದಿ
TV9 Web
| Updated By: ಶ್ರೀದೇವಿ ಕಳಸದ|

Updated on:Sep 08, 2022 | 4:22 PM

Share

Viral Video : ಪುಟ್ಟ ಮರಿಯಾನೆ ಅಮ್ಮನಿಂದ ತಪ್ಪಿಸಿಕೊಂಡಿದೆ. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಗೆ ಆದಷ್ಟು ಬೇಗ ಮರಿ-ಅಮ್ಮನನ್ನು ಒಂದುಗೂಡಿಸುವ ತವಕ. ಈ ಪ್ರಯತ್ನದಲ್ಲಿ ಮರಿ ನಡೆದು ನಡೆದು ಸುಸ್ತಾಗಿ ಒಂದೆಡೆ ಮಲಗಿದೆ. ಬಿಸಿಲು ಬೇರೆ ಜೋರು. ಆಗ ಸಿಬ್ಬಂದಿಯೊಬ್ಬರಿಗೆ ಛತ್ರಿ ಹಿಡಿದು ಅದಕ್ಕೆ ನೆರಳು ಕಲ್ಪಿಸಬೇಕು ಎನ್ನಿಸಿದೆ. ಈ ದೃಶ್ಯವನ್ನು ಸೆರೆಹಿಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್​ನಲ್ಲಿ ಇದನ್ನು ಪೋಸ್ಟ್ ಮಾಡಿ, ಸಿಬ್ಬಂದಿಯ ಕಾಳಜಿ, ಸಹಾನುಭೂತಿ ಮತ್ತು ಆಲೋಚನಾ ವಿಧಾನದ ಸಾರ್ಥಕತೆಯನ್ನು ಶ್ಲಾಘಿಸಿದ್ದಾರೆ. ಈತನಕ ಈ ವೀಡಿಯೊ ಸುಮಾರು 58,000 ವೀಕ್ಷಕರನ್ನು ತಲುಪಿದೆ. 3,200 ಕ್ಕೂ ಜನ ಇಷ್ಟಪಟ್ಟಿದ್ದಾರೆ.

ಈ ಮುದ್ದುಆನೆಯು ತನ್ನ ತಾಯಿಯನ್ನು ಸೇರುವ ವಿಡಿಯೋ ನಿಮ್ಮ ಬಳಿ ಇದ್ದರೆ ದಯವಿಟ್ಟು ಪೋಸ್ಟ್​ ಮಾಡಿ, ನೋಡಲು ಖುಷಿ ಎನ್ನಿಸುತ್ತದೆ ಎಂದು ಟ್ವಿಟರ್ ಖಾತೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದಕ್ಕೇ ಈ ಪುಟ್ಟ ಗಜರಾಜ ಯಾವುದೇ ಭಯವಿಲ್ಲದೆ ಹಿಂಬಾಲಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನು ಮಲಗಿದಾಗ ನನಗೂ ಇಂಥದೇ ಕಾಳಜಿ ನಿರೀಕ್ಷಿಸುತ್ತೇನೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಅದ್ಭುತ ವರ್ತನೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.

ಕರ್ತವ್ಯವನ್ನು ಯಾರೂ ಮಾಡುತ್ತಾರೆ. ಆದರೆ ಹೀಗೆ ಯೋಚಿಸಿ ಅಂತಃಕರಣದಿಂದ ನಡೆದುಕೊಳ್ಳುವವರು? ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Thu, 8 September 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!