AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ

Baby Elephant : ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಯನ್ನು ಯಾಕೆ ನೆಟ್ಟಿಗರು ಶ್ಲಾಘಿಸಿರಬಹುದು? ವಿಡಿಯೋ ನೋಡಿ.

Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ
ಮಲಗಿದ ಮರಿಯಾನೆಗೆ ಛತ್ರಿ ಹಿಡಿದು ನೆರಳು ನೀಡಿದ ಅರಣ್ಯ ಸಿಬ್ಬಂದಿ
TV9 Web
| Edited By: ಶ್ರೀದೇವಿ ಕಳಸದ|

Updated on:Sep 08, 2022 | 4:22 PM

Share

Viral Video : ಪುಟ್ಟ ಮರಿಯಾನೆ ಅಮ್ಮನಿಂದ ತಪ್ಪಿಸಿಕೊಂಡಿದೆ. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಗೆ ಆದಷ್ಟು ಬೇಗ ಮರಿ-ಅಮ್ಮನನ್ನು ಒಂದುಗೂಡಿಸುವ ತವಕ. ಈ ಪ್ರಯತ್ನದಲ್ಲಿ ಮರಿ ನಡೆದು ನಡೆದು ಸುಸ್ತಾಗಿ ಒಂದೆಡೆ ಮಲಗಿದೆ. ಬಿಸಿಲು ಬೇರೆ ಜೋರು. ಆಗ ಸಿಬ್ಬಂದಿಯೊಬ್ಬರಿಗೆ ಛತ್ರಿ ಹಿಡಿದು ಅದಕ್ಕೆ ನೆರಳು ಕಲ್ಪಿಸಬೇಕು ಎನ್ನಿಸಿದೆ. ಈ ದೃಶ್ಯವನ್ನು ಸೆರೆಹಿಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್​ನಲ್ಲಿ ಇದನ್ನು ಪೋಸ್ಟ್ ಮಾಡಿ, ಸಿಬ್ಬಂದಿಯ ಕಾಳಜಿ, ಸಹಾನುಭೂತಿ ಮತ್ತು ಆಲೋಚನಾ ವಿಧಾನದ ಸಾರ್ಥಕತೆಯನ್ನು ಶ್ಲಾಘಿಸಿದ್ದಾರೆ. ಈತನಕ ಈ ವೀಡಿಯೊ ಸುಮಾರು 58,000 ವೀಕ್ಷಕರನ್ನು ತಲುಪಿದೆ. 3,200 ಕ್ಕೂ ಜನ ಇಷ್ಟಪಟ್ಟಿದ್ದಾರೆ.

ಈ ಮುದ್ದುಆನೆಯು ತನ್ನ ತಾಯಿಯನ್ನು ಸೇರುವ ವಿಡಿಯೋ ನಿಮ್ಮ ಬಳಿ ಇದ್ದರೆ ದಯವಿಟ್ಟು ಪೋಸ್ಟ್​ ಮಾಡಿ, ನೋಡಲು ಖುಷಿ ಎನ್ನಿಸುತ್ತದೆ ಎಂದು ಟ್ವಿಟರ್ ಖಾತೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದಕ್ಕೇ ಈ ಪುಟ್ಟ ಗಜರಾಜ ಯಾವುದೇ ಭಯವಿಲ್ಲದೆ ಹಿಂಬಾಲಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನು ಮಲಗಿದಾಗ ನನಗೂ ಇಂಥದೇ ಕಾಳಜಿ ನಿರೀಕ್ಷಿಸುತ್ತೇನೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಅದ್ಭುತ ವರ್ತನೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.

ಕರ್ತವ್ಯವನ್ನು ಯಾರೂ ಮಾಡುತ್ತಾರೆ. ಆದರೆ ಹೀಗೆ ಯೋಚಿಸಿ ಅಂತಃಕರಣದಿಂದ ನಡೆದುಕೊಳ್ಳುವವರು? ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Thu, 8 September 22

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ