AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್​ಲ್ಲಿದೆ ಎಂದಿಗೂ ಬಳಸದ 10,000 ಬೆಡ್‌ರೂಮ್ ಉಳ್ಳ ಹೋಟೆಲ್​

ಜರ್ಮನಿಯ ಬಾಲ್ಟಿಕ್ ದ್ವೀಪದ ಬಿಳಿ ಮರಳಿನ ಕಡಲತೀರದಲ್ಲಿ 10,000 ಮಲಗುವ ಕೋಣೆ ಇರುವ ನಾಜಿ ಹೋಟೆಲ್ ವಿಶ್ವದ ಅತಿದೊಡ್ಡ ಹೋಟೆಲ್

ಜರ್ಮನ್​ಲ್ಲಿದೆ ಎಂದಿಗೂ ಬಳಸದ 10,000 ಬೆಡ್‌ರೂಮ್ ಉಳ್ಳ ಹೋಟೆಲ್​
ಜರ್ಮನಿಯಲ್ಲಿರುವ ಹೋಟೆಲ್​
TV9 Web
| Updated By: ವಿವೇಕ ಬಿರಾದಾರ|

Updated on: Oct 08, 2022 | 7:30 AM

Share

ವಿಚಿತ್ರ ಎನಿಸಿದರು ಇದು ಸತ್ಯ ಜರ್ಮನಿಯ ಬಾಲ್ಟಿಕ್ ದ್ವೀಪದ ಬಿಳಿ ಮರಳಿನ ಕಡಲತೀರದಲ್ಲಿ 10,000 ಮಲಗುವ ಕೋಣೆ ಇರುವ ನಾಜಿ ಹೋಟೆಲ್ ವಿಶ್ವದ ಅತಿದೊಡ್ಡ ಹೋಟೆಲ್ ಇದೆ. ಈ ಹೋಟೆಲ್​ನ್ನು ಎಂದಿಗೂ ಬಳಸಿಲ್ಲ. ಇದನ್ನು ನಿರ್ಮಿಸಿ ಸುಮಾರು 70 ವರ್ಷಗಳಾದರೂ ಇಲ್ಲಿಯವರೆಗು ಯಾರು ಇದನ್ನು ಬಳಸಿಲ್ಲ. ಈ ಹೋಟೆಲ್​ನ್ನು 1936 ಮತ್ತು 1939 ರ ನಡುವೆ ನಿರ್ಮಿಸಲಾಯಿತು.

ಜರ್ಮನ್ ಕೆಲಸಗಾರರಿಗೆ ವಿಶ್ರಾಂತಿ ಪಡೆಯಲು ಮತ್ತು ನಾಜಿ ಧರ್ಮ ಪ್ರಚಾರಕರು ವಿಶ್ರಾಂತಿ ಪಡೆಯಲು ಈ ಹೋಟೆಲ್​ನ್ನು ನಿರ್ಮಿಸಲಾಯಿತು. ಸ್ಥಳೀಯರು ಈ ಹೋಟೆಲ್​ನ್ನು ಕೊಲೋಸಸ್ ಎಂದು ಕರೆಯುತ್ತಾರೆ. ಈ ಹೋಟೆಲ್​ ಒಂದೇ ರೀತಿಯ ಎಂಟು ಕಟ್ಟಡಗಳನ್ನು ಒಳಗೊಂಡಿದೆ. ಇದು 4.5 ಕಿಮೀ ಉದ್ದವಿದೆ. ಕಡಲತೀರದಿಂದ ಸರಿಸುಮಾರು 150 ಮೀ. ದೂರವಿದೆ. ಇದನ್ನು ನಿರ್ಮಿಸಲು 9,000 ಕಾರ್ಮಿಕರು ಮೂರು ವರ್ಷ ಸಮಯ ತೆಗೆದುಕೊಂಡರು. ಈ ಹೋಟೆಲ್​ ಚಿತ್ರಮಂದಿರ, ಸಭಾಂಗಣಗಳು, ಈಜುಕೊಳಗಳನ್ನು ಹೊಂದಿದೆ.

5 ರಿಂದ 2.5 ಮೀ ವಿಸ್ತೀರ್ಣದ ಪ್ರತಿ ಕೊಠಡಿಯು ಎರಡು ಹಾಸಿಗೆಗಳು, ವಾರ್ಡ್ರೋಬ್ ಮತ್ತು ಸಿಂಕ್​ನ್ನು ಹೊಂದಿದೆ. ಪ್ರತಿ ಮಹಡಿಯಲ್ಲಿ ಸಾಮೂಹಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳು ಮತ್ತು ಬಾಲ್​ರೂಂಗಳು ಇವೆ. ಮಧ್ಯದಲ್ಲಿ, ಮಿಲಿಟರಿ ಆಸ್ಪತ್ರೆ ಇದೆ.

2011 ರಲ್ಲಿ, ಒಂದು ಬ್ಲಾಕ್​ನ್ನು 400 ಹಾಸಿಗೆಯ ಹಾಸ್ಟೆಲ್​ ಆ​ಗಿ ಪರಿವರ್ತಿಸಲಾಯಿತು. ಟೆನ್ನಿಸ್ ಕೋರ್ಟ್‌ಗಳು ಮತ್ತು ಈಜುಕೊಳ ಮತ್ತು ಸಣ್ಣ ಶಾಪಿಂಗ್ ಸೆಂಟರ್‌ಗಳನ್ನು ಒಳಗೊಂಡಿರುವ 300 ಹಾಸಿಗೆಗಳೊಂದಿಗೆ ಹೋಟೆಲ್​​ನ್ನು ಆಧುನಿಕ ರಜಾದಿನದ ರೆಸಾರ್ಟಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್