AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಯ್ಯೋ ನಮ್ಮ ಪ್ರಿಯ ದೋಸೆಯೂ ‘ಜಂಕ್​ ಫುಡ್​’ ಆಗುತ್ತಿದೆಯೇ?’ ನೆಟ್ಟಿಗರ ಅಳಲು

Dosa : ಈ ದೋಸೆಯೊಳಗೆ ಒಂದಾದ ಮೇಲೊಂದು ಪದಾರ್ಥಗಳನ್ನು ಹಾಕುವುದನ್ನು ನೋಡಿಯೇ ಬಹುಶಃ ಜನ್ಮದಲ್ಲಿ ದೋಸೆ ಬಗ್ಗೆ ವೈರಾಗ್ಯ ತಾಳುತ್ತೀರೇನೋ ಎಂಬ ಭಯ ಉಂಟಾಗುತ್ತಿದೆ.

‘ಅಯ್ಯೋ ನಮ್ಮ ಪ್ರಿಯ ದೋಸೆಯೂ ‘ಜಂಕ್​ ಫುಡ್​’ ಆಗುತ್ತಿದೆಯೇ?’ ನೆಟ್ಟಿಗರ ಅಳಲು
Extravagant Dosa With Host Of Ingredients
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Oct 07, 2022 | 5:42 PM

Share

Viral Video : ದೋಸೆ ಎಂದರೆ ಮೂರು ಸುತ್ತು ಕಾವಲಿ ಮೇಲೆ ಹಿಟ್ಟು ಹುಯ್ದರೆ ಮುಗಿಯಿತು ಎನ್ನುವ ಕಾಲ ಇದಲ್ಲವೇ ಅಲ್ಲ. ಮಸಾಲೆ ದೋಸೆ, ಸೆಟ್​ ದೋಸೆ, ಮೆದು ದೋಸೆ, ತುಪ್ಪದ ದೋಸೆ, ರವಾ ದೋಸೆ, ಖಾಲೀ ದೋಸೆ ತಿಂದ ದಕ್ಷಿಣ ಭಾರತೀಯರಿಗೆ ಉತ್ತರ ಭಾರತದ ಮಂದಿ ಬೀದಿಬದಿ ಮಾಡುವ ಈ ದೋಸೆಯ ಬಗ್ಗೆ ತಕರಾರು ಇದ್ದೇ ಇದೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಈ ದೋಸೆಯೊಳಗೆ ಒಂದಾದ ಮೇಲೊಂದು ಪದಾರ್ಥಳು ಬೀಳುವುದನ್ನು ನೋಡುತ್ತ ನೋಡುತ್ತ ಬೇಸ್ತು ಬೀಳುವುದೊಂದು ಬಾಕಿ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇತ್ತೀಚಿಗೆ ಬೀದಿಬದಿಯ ಹೋಟೆಲ್ ವ್ಯಾಪಾರಿಯೊಬ್ಬರು ಅದ್ದೂರಿ ದೋಸೆ ನೋಡಿದಿರಲ್ಲ? ತವಾ ಮೇಲೆ ಹರಡಿದ ದೋಸೆ ಹಿಟ್ಟಿನ ಮೇಲೆ ಸರೀ ಬೆಣ್ಣೆ ಹಾಕುತ್ತಾರೆ. ಜೊತೆಗೆ ಗೋಡಂಬಿ ಮತ್ತು ಖಾರಪುಡಿ, ಟೊಮ್ಯಾಟೋ, ಕ್ಯಾಪ್ಸಿಕಂ, ಈರುಳ್ಳಿ, ಮೆಯಾನೇಸ್ ಸಾಸ್ ಇಲ್ಲಿಗೆ ದೋಸೆ ಮಾಡುವುದು ಮುಗಿಯಿತು ಎಂದು ನೀವು ಅಂದುಕೊಂಡರೆ ಖಂಡಿತಾ ತಪ್ಪು! ಇದೆಲ್ಲವನ್ನೂ ದೋಸೆಯ ಮೇಲೆ ತೀಡಿತೀಡಿ ಇಡಲಾಗುತ್ತದೆ. ಭರ್ತಿ ಚೀಝ್​ ತುರಿದು ಹರಡಲಾಗುತ್ತದೆ. ನಂತರ ಉರಿಯುತ್ತಿರುವ ಮಣ್ಣಿನ ಮಡಕೆ ತಂದು ಅದರಲ್ಲಿ ತ್ರಿಕೋನಾಕಾರದ ದೋಸೆಯನ್ನು ಸುತ್ತಿ ಇಡಲಾಗುತ್ತದೆ.

ಇದನ್ನು ನೋಡಿದ ಒಬ್ಬ ನೆಟ್ಟಿಗರಂತೂ, ‘ನಾನು ನೋಡಿದ ಅತ್ಯಂತ ಕೆಟ್ಟ ದೋಸಾ ಮಾಡುವ ವಿಧಾನ’ ಎನ್ನುತ್ತಿದ್ದಾರೆ. ‘ಇಷ್ಟೊಂದು ಚೀಝ್​, ಬೆಣ್ಣೆಯನ್ನು ತಿಂದವರ ಆರೋಗ್ಯ ಏನಾಗಬೇಕು?’ ಎಂದು ಮತ್ತೊಬ್ಬರು ತಕರಾರು ಎತ್ತಿದ್ದಾರೆ. ‘ಇದನ್ನು ನಾನಂತೂ ಜಂಕ್​ ದೋಸೆ ಎನ್ನುತ್ತೇನೆ’ ಎಂದಿದ್ದಾರೆ ಮಗದೊಬ್ಬರು. ‘ನನ್ನ ಪ್ರಿಯವಾದ ದೋಸೆ ಕೂಡ ಜಂಕ್​ ಫುಡ್ ಆಯಿತೇ?’ ಎಂದು ಬೇಸರಿಸಿಕೊಂಡಿದ್ದಾರೆ ಹಲವರು.

ನಿಮಗೆ ಈ ದೋಸೆ ಬೇಕೆನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:35 pm, Fri, 7 October 22

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ