AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ‘ನನ್ನ ಪ್ರೇಮಕಥೆಗೆ ಸಾಕ್ಷಿಯಾದ ಬೆಂಗಳೂರಿನ ಓ ಟ್ರಾಫಿಕ್ಕೇ ನಿನಗೆ ವಂದನೆ’

Bangalore Traffic : ಬೆಂಗಳೂರಿನ ಸೋನಿ ವರ್ಲ್ಡ್​ ಸಿಗ್ನಲ್ಲೇ ನನಗೆ ನನ್ನ ಹೆಂಡತಿಯನ್ನು ಹುಡುಕಿಕೊಟ್ಟಿದ್ದು ಎಂದು ತಮ್ಮ ಪ್ರೇಮಕಥೆ ಹೇಳುತ್ತ ಕೊನೆಗೊಂದು ಟ್ವಿಸ್ಟ್​ ಕೊಟ್ಟಿದ್ದಾರೆ. ಅದೇ ಈ ಪೋಸ್ಟ್​ ವೈರಲ್ ಆಗಲು ಕಾರಣವಾಗಿದೆ.

Trending : ‘ನನ್ನ ಪ್ರೇಮಕಥೆಗೆ ಸಾಕ್ಷಿಯಾದ ಬೆಂಗಳೂರಿನ ಓ ಟ್ರಾಫಿಕ್ಕೇ ನಿನಗೆ ವಂದನೆ’
ಬೆಂಗಳೂರಿನ ಟ್ರಾಫಿಕ್
TV9 Web
| Edited By: |

Updated on:Sep 20, 2022 | 5:30 PM

Share

Trending : ಬೆಂಗಳೂರಿನ ಟ್ರಾಫಿಕ್​ ಜಾಮ್​ಗೆ ಸುಸ್ತಾದವರು ಯಾರಿಲ್ಲ ಹೇಳಿ? ಆದರೆ ಇದೇ ಬೆಂಗಳೂರಿನ ಟ್ರಾಫಿಕ್​ ಜಾಮ್​ಗೆ ಧನ್ಯವಾದ ಹೇಳಿದ್ದಾರೆ ಒಬ್ಬ ವ್ಯಕ್ತಿ! ಅಂಥದ್ದೇನು ನಡೆದಿದೆ ಅಲ್ಲಿ? ರೆಡ್ಡಿಟ್ ಖಾತೆದಾರರಾದ ‘MaskedManiac92’ ಈ ಮಹಾನಗರದಲ್ಲಿ ಕಿಕ್ಕಿರದ ಟ್ರಾಫಿಕ್ಕಿನಲ್ಲಿ ತಮ್ಮ ಪ್ರೇಮಕಥೆ ಹೇಗೆ ಅರಳಿತು ಎಂಬುದನ್ನು ವಿವರಿಸಿದ್ದಾರೆ. ನಂತರ ಅದನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ವೈರಲ್ ಆಗಿದೆ. ಬೆಂಗಳೂರಿನ ಸೋನಿ ವರ್ಲ್ಡ್​ ಸಿಗ್ನಲ್ಲೇ ನನಗೆ ನನ್ನ ಹೆಂಡತಿಯನ್ನು ಹುಡುಕಿಕೊಟ್ಟಿದ್ದು ಎಂದು ಹೇಳುತ್ತ ತಮ್ಮ ಪ್ರೇಮಕಥೆಯನ್ನು ಬಿಚ್ಚಿಟ್ಟಿದ್ದಾರೆ. ಆದರೆ ಕೊನೆಗೊಂದು ಟ್ವಿಸ್ಟ್​ ಕೂಡ ನೀಡಿದ್ದಾರೆ!

ಅಪರಿಚಿತ ಹುಡುಗ ಅಪರಿಚಿತ ಹುಡುಗಿ ಒಂದು ದಿನ ಸೋನಿ ಸಿಗ್ನಲ್​ ಬಳಿ ಅಚಾನಕ್ಕಾಗಿ ಭೇಟಿಯಾಗುತ್ತಾರೆ. ಹೀಗೆ ಪದೇಪದೇ ಟ್ರಾಫಿಕ್ಕಿನಲ್ಲಿ ಸಿಗುತ್ತಿದ್ದಾಗ ಪರಸ್ಪರರ ಮುಗುಳ್ನಗು ವಿನಿಮಯವಾಗುತ್ತದೆ. ಕ್ರಮೇಣ ಪರಿಚಯಕ್ಕೆ ತಿರುಗುತ್ತದೆ. ಒಂದು ದಿನ ನಿರ್ಮಾಣ ಹಂತದಲ್ಲಿದ್ದ ಈಜಿಪುರ ಮೇಲ್​​ಸೇತುವೆಯಲ್ಲಿ ವಿಪರೀತ ಟ್ರಾಫಿಕ್ ಉಂಟಾಗುತ್ತದೆ. ಇಬ್ಬರಿಗೂ ವಿಪರೀತ ಹಸಿವು, ಕಿರಿಕಿರಿ. ಉಸಿರುಗಟ್ಟಿದಂತಾಗುತ್ತಿರುತ್ತದೆ. ಪರಸ್ಪರ ಮುಖಗಳನ್ನು ನೋಡಿಕೊಳ್ಳುತ್ತ ನಿಂತಿರುತ್ತಾರೆ. ಕೊನೆಗೆ ಬೇರೆ ಮಾರ್ಗವನ್ನು ಅನುಸರಿಸಿ ಇಲ್ಲಿಂದ ಪಾರಾಗಬೇಕೆಂದು ಹೊರಡುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ದಾರಿಮಧ್ಯೆ ಸಿಕ್ಕ ಹೋಟೆಲ್​ನಲ್ಲಿ ಊಟ ಮಾಡುತ್ತಾರೆ. ಮಾತು, ಭಾವನೆಗಳ ವಿನಿಮಯವಾಗುತ್ತದೆ. ಪರಸ್ಪರ ಆಕರ್ಷಣೆ ಬೆಳೆಯುತ್ತದೆ. ಮುಂದೇನು? ಹಾದಿ ಬದಲಿಸಿದ್ದು ಎಂಥ ಒಳ್ಳೆಯ ಕೆಲಸ ಅಲ್ಲವಾ? ಅಲ್ಲಿಂದ ಅವರಿಗೆ ತೆರೆದಿದ್ದು ಪ್ರೇಮಮಾರ್ಗ! ಐದು ವರ್ಷಗಳತನಕ ಈ ಟ್ರಾಫಿಕ್​ನಲ್ಲಿಯೇ ಡೇಟಿಂಗ್​ ಮಾಡಿ, ಡ್ಯೂಯೆಟ್​ ಹಾಡಿ ಉಲ್ಲಸಿತಗೊಂಡು ಕೊನೆಗೆ ಮದುವೆಯನ್ನೂ ಆಗುತ್ತಾರೆ. ಹಾಗಿದ್ದರೆ ಟ್ವಿಸ್ಟ್ ಏನು?

‘ಇದೇ ಟ್ರಾಫಿಕ್ಕಿನಲ್ಲಿ ಸಿಕ್ಕ ನನ್ನ ಹುಡುಗಿಯೊಂದಿಗೆ ನಾನು ಮೂರು ವರ್ಷ ಡೇಟಿಂಗ್ ಮಾಡಿದೆ. ಎರಡು ವರ್ಷಗಳ ಹಿಂದೆ ಮದುವೆಯನ್ನೂ ಆದೆ. ಆದರೆ ಈ ಫ್ಲೈ ಓವರ್ ಮಾತ್ರ ಇನ್ನೂ ಹೀಗೇ ಅರ್ಧಕ್ಕೇ ನಿಂತಿದೆ’ ಇದೇ ಆ ದೊಡ್ಡ ಬಗೆಯರಿಯಲಾರದ ಸಮಸ್ಯೆ!

ರೆಡ್ಡಿಟ್ ಖಾತೆದಾರರು ಈ ವಿಷಯವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಾಗಿನಿಂದ ಸಾವಿರಾರು ನೆಟ್ಟಿಗರು ನಗೆಗಡಲಿನಲ್ಲಿ ತೇಲಲಾರಂಭಿಸಿದ್ದಾರೆ. ಟ್ರಾಫಿಕ್​ ಜೋಕ್​ಗಳನ್ನು ಹರಿಬಿಡಲಾರಂಭಿಸಿದ್ದಾರೆ. ಟೀಕಿಸಲೂ ಶುರುಮಾಡಿದ್ಧಾರೆ.

‘ನಾನು ನನ್ನ ಪದವಿ ಮುಗಿಸಿ ಇಂಟರ್ನ್​ಶಿಪ್​ ಅನ್ನು ಬೆಂಗಳೂರಿನ ಸೋನಿ ಸಿಗ್ನಲ್​ ಬಳಿಯ ಆಫೀಸೊಂದರಲ್ಲಿ ಮಾಡಿದೆ. ಅಲ್ಲಿಯೇ ಎರಡು ವರ್ಷ ಕೆಲಸ ಮಾಡಿದೆ. ನಂತರ ಬೆಂಗಳೂರನ್ನು ಬಿಟ್ಟು ಬೇರೆ ಊರು, ಕಂಪೆನಿಯಲ್ಲಿ ಕೆಲಸ ಮಾಡಿದೆ. ಆದರೂ ಈ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ’ ಎಂದು ಒಬ್ಬರ ವ್ಯಕ್ತಿ ಟೀಕಿಸಿದ್ದಾರೆ.

‘ಬೆಂಗಳೂರು ಟ್ರಾಫಿಕ್ ಒಂದು ವರ ಇದ್ದಂತೆ. ಆದರೆ ನೀವು ಇದನ್ನು ಅರ್ಥವನ್ನೇ ಮಾಡಿಕೊಳ್ಳುವುದಿಲ್ಲ’ ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, 2.5 ಕಿಮೀ ಉದ್ದದ ಈ ಮೇಲ್ಸೇತುವೆಯ ನಿರ್ಮಾಣ ಕಾರ್ಯ 2019 ನವೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಸೋನಿ ವರ್ಲ್ಡ್ ಜಂಕ್ಷನ್‌ನಿಂದ ಕೇಂದ್ರೀಯ ಸದನಕ್ಕೆ ಸಂಪರ್ಕ ಕಲ್ಪಿಸಬೇಕಿದ್ದ ಈ ಮೇಲ್​ಸೇತುವೆ ಪೂರ್ಣಗೊಳ್ಳದೆ ಕಸದಿಂದ ತುಂಬಿತುಳುಕುತ್ತಿರುವುದು ವಿಪರ್ಯಾಸ.

ಇನ್ನು ಮಕ್ಕಳಾಗುವುದರೊಳಗಾದರೂ ಈ ಸೇತುವೆ ಪೂರ್ಣಗೊಳ್ಳಬಹುದೆ?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:11 pm, Tue, 20 September 22

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ