AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಗು ಅಳುತ್ತಿಲ್ಲ, ಪಾಠ ಮಾಡುತ್ತಿದೆ! ಈ ವಿಡಿಯೋ ಒಮ್ಮೆ ಮಾತ್ರ ನೋಡಿ

A little boy's unmatched energy : ಮಾರಾಯಾ ಗ್ಯಾರಂಟೀ ರಾಜಕಾರಣಿಯೇ ಆಗುತ್ತಿ. ಇಲ್ಲ ಇವ ಟಿವಿ ಆ್ಯಂಕರ್ ಆಗುತ್ತಾನೆ. ಖಂಡಿತ ಫುಟ್ಬಾಲ್​ ಕೋಚ್​ ಆಗ್ತಾನೆ; ನೆಟ್ಟಿಗರು ಈ ಹುಡುಗನ ಅಗಾಧ ಕಂಠಸಿರಿಯನ್ನು ಹೀಗೆಲ್ಲ ಬಣ್ಣಿಸುತ್ತಿದ್ದಾರೆ.

ಈ ಮಗು ಅಳುತ್ತಿಲ್ಲ, ಪಾಠ ಮಾಡುತ್ತಿದೆ! ಈ ವಿಡಿಯೋ ಒಮ್ಮೆ ಮಾತ್ರ ನೋಡಿ
This video of a little boy's unmatched energy while teaching his classmates
TV9 Web
| Edited By: |

Updated on:Oct 20, 2022 | 6:33 PM

Share

Viral Video : ಬೆಳಗ್ಗೆ ಯಾಕಾದರೂ ಆಗತ್ತೋ? ಈ ಚಳಿ ಮಳೆಯಲ್ಲಿ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಕಳಿಸುವುದು ಹೇಗೋ ಎಂತೋ… ಹೀಗಂತ ನೀವು ಮಣಮಣಿಸುತ್ತ ಕುಳಿತಿದ್ದರೆ ದಯವಿಟ್ಟು ಈ ವಿಡಿಯೋ ನೋಡಿ. ನಿಮ್ಮಲ್ಲಿರೋ ಬೇಸರವೆಲ್ಲ ಕಾಲುಕೀಳುತ್ತದೆ. ಹಾಗಿದೆ ಈ ವಿಡಿಯೋ ಟಾನಿಕ್​! ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಹುಡುಗನಿಗೆ ಕೋಪವೂ ಬಂದಿಲ್ಲ ಹಾಗೇ ಅಳು, ಹಟ ಇನ್ನೇನೂ. ತನ್ನ ಸಹಪಾಠಿಗಳಿಗೆ ಈ ಪರಿ ಉತ್ಸಾಹದಲ್ಲಿ ಪಾಠ ಮಾಡುತ್ತಿದ್ದಾನೆ. ಒಂದೊಂದು ಶಬ್ದವನ್ನು ಹೇಳುವಾಗಲೂ ಅವನ ಗಂಟಲಿನ ನರಗಳು ಉಬ್ಬುವುದನ್ನು ಗಮನಿಸಿ. ಆಗತ್ತಾ ನಿಮಗೆ ಹೀಗೆ ಪಾಠ ಮಾಡಲು? ಆಗಲ್ಲ ತಾನೆ? ಕಲೀರಿ ಹಾಗಿದ್ದರೆ ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ರೀಟ್ವೀಟ್ ಮಾಡಿದ ನೆಟ್ಟಿಗರು, ಈತ ಖಂಡಿತ ಟಿವಿ ಆ್ಯಂಕರ್ ಆಗುತ್ತಾನೆ ಎನ್ನುತ್ತಿದ್ದಾರೆ.ಇಲ್ಲ ಇವ ಫುಟ್ಬಾಲ್​ ತರಬೇತುದಾರ ಆದರೂ ಆದನೇ ಎನ್ನುತ್ತಿದ್ದಾರೆ ಕೆಲವರು. ಇಲ್ಲ ರಾಜಕಾರಣಿಯಾಗಲು ಇವ ಸೂಕ್ತ ಎನ್ನುತ್ತಿದ್ದಾರೆ ಇನ್ನೂ ಹಲವರು. ಇದೆಲ್ಲವೂ ಟಿವಿ ಆ್ಯಂಕರ್​ಗಳ ಪ್ರಭಾವವೇ ಎನ್ನುತ್ತಿದ್ದಾರೆ ಒಬ್ಬರು. ಬೇಡ ಮಾರಾಯಾ ನೀ ಹೀಗೆಲ್ಲ ಕಿರುಚುವುದನ್ನು ಕಲಿಯಬೇಡ ನಮ್ಮ ರಾಜಕಾರಣಿಗಳು, ಟಿವಿ ಆ್ಯಂಕರ್​​ಗಳು ಈಗಾಗಲೇ ಇದ್ದಾರೆ. ನೀನೂ ಈ ಸಾಲಿಗೆ ಸೇರಬೇಡ ಎನ್ನುತ್ತಿದ್ದಾರೆ ಮತ್ತೊಬ್ಬರು. ಈಗಾಗಲೇ ಈ ವಿಡಿಯೋ 1.5 ಮಿಲಿಯನ್​ ವೀಕ್ಷಕರನ್ನು ತಲುಪಿದೆ.

ಏನೇ ಹೇಳಿ ಆ ಹುಡುಗನ ತನ್ಮಯತೆ, ಉತ್ಸಾಹ ಮಾತ್ರ ಅಗಾಧ. ಅವನಲ್ಲಿರುವ ಶಕ್ತಿಯನ್ನು ಸಾಣೆ ಹಿಡಿಯುವಂಥ ಶಿಕ್ಷಕರು ಸಿಗುತ್ತಾ ಹೋದರೆ ಸಾಕು.

ನಿಮಗೇನೆನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:23 pm, Thu, 20 October 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ