AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಬುಲೆನ್ಸ್​​ಗೆ ದಾರಿ ಬಿಡದೆ ದುಷ್ಕೃತ್ಯ ಮೆರೆದ ಕಾರು ಚಾಲಕ ! ವಿಡಿಯೋ ವೈರಲ್​​

ಕಾರು ಚಾಲಕ ಆಂಬುಲೆನ್ಸ್​ ಬರುತ್ತಿದ್ದರೂ ಅದಕ್ಕೆ ದಾರಿ ಮಾಡಿಕೊಡದೆ ಆಂಬ್ಯುಲೆನ್ಸ್​​ ಮುಂದೆ ಹೋಗದಂತೆ ಅದಕ್ಕೆ ಅಡ್ಡಲಾಗಿ ಕಾರು ಚಲಾಯಿಸಿದ್ದಾನೆ.  

ಆಂಬುಲೆನ್ಸ್​​ಗೆ ದಾರಿ ಬಿಡದೆ ದುಷ್ಕೃತ್ಯ ಮೆರೆದ ಕಾರು ಚಾಲಕ ! ವಿಡಿಯೋ ವೈರಲ್​​
ವೈರಲ್​​ ವಿಡಿಯೋImage Credit source: Cartoq
TV9 Web
| Edited By: |

Updated on:Jun 30, 2022 | 12:49 PM

Share

ಕೇರಳ: ಆಂಬ್ಯುಲೆನ್ಸ್ (Ambulance) ಅಥವಾ ಇತರ ತುರ್ತು ಸೇವಾ (Emergency) ವಾಹನಗಳಿಗೆ  ದಾರಿ ಮಾಡಿಕೊಡುವುದು ನಮ್ಮ ಕರ್ತವ್ಯ ಮತ್ತು ನಮ್ಮ ದೇಶದಲ್ಲಿ ಇದು ಕಾನೂನಾಗಿಯೂ ಮಾರ್ಪಟ್ಟಿದೆ. ಆಂಬ್ಯುಲೆನ್ಸ್ ಅಥವಾ ಇತರ ತುರ್ತು ಸೇವಾ ವಾಹನಗಳಿಗೆ ದಾರಿ ಮಾಡಿಕೊಡದಿದ್ದರೆ ದಂಡ ವಿಧಿಸಬೇಕಾಗುತ್ತದೆ. ಆದರೆ ಸದ್ಯ ವೈರಲ್​ ಆದ ವಿಡಿಯೋದಲ್ಲಿ ಕಾರು (Car) ಚಾಲಕ (Driver) ಆಂಬುಲೆನ್ಸ್​ ಬರುತ್ತಿದ್ದರೂ ಅದಕ್ಕೆ ದಾರಿ ಮಾಡಿಕೊಡದೆ ಆಂಬ್ಯುಲೆನ್ಸ್​​ ಮುಂದೆ ಹೋಗದಂತೆ ಅಡ್ಡಲಾಗಿ ಕಾರು ಚಲಾಯಿಸಿದ್ದಾನೆ.

ಇದನ್ನು ಓದಿ: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!

ಘಟನೆ ನಡೆದಿದ್ದು ಕೇರಳದಲ್ಲಿ. ಕೇರಳದ ಹೆದ್ದಾರಿಯೊಂದರಲ್ಲಿ ವಿಪರೀತ ಮಳೆಯ ನಡುವೆ ವೇಗವಾಗಿ ಆಂಬ್ಯುಲೆನ್ಸ್​​ ಹೋಗುವಾಗ ಅದರ ಮುಂದೆ ಹೋಗುತ್ತಿದ್ದ ಟೊಯೊಟಾ ಎಟಿಯೋಸ್ ಸೆಡಾನ್ ಕಾರು ಆಂಬ್ಯುಲೆನ್ಸ್​​ಗೆ ದಾರಿ ಮಾಡಿಕೊಡದೇ, ಆಂಬ್ಯುಲೆನ್ಸ್​​ ಜೊತೆ ಪೈಪೋಟಿಗೆ ಇಳಿದಿದೆ. ಆಂಬ್ಯುಲೆನ್ಸ್​​ ಚಾಲಕ ಎಷ್ಟೇ ಹಾರ್ನ್​​ ಹಾಕಿದರೂ, ಹಾರ್ನ್​​ ಕೇಳಿಸಿದರು ಕೇಳಿಸದಂತೆ ವಿಪರೀತ ವೇಗದಲ್ಲಿ ಮುಂದೆ ಸಾಗಿದ್ದಾನೆ.  ಇದನ್ನು  ಆಂಬ್ಯುಲೆನ್ಸ್ ಲೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿಡಿಯೋದಲ್ಲಿ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಒದ್ದೆಯಾಗಿದೆ. ಈ ಮಧ್ಯೆ ಆಂಬ್ಯುಲೆನ್ಸ್​​ ಬರುತ್ತಿದ್ದಂತೆ ಉಳಿದ ವಾಹನಗಳು ಆಂಬ್ಯುಲೆನ್ಸ್​​ಗೆ ದಾರಿ ಮಾಡಿಕೊಟ್ಟಿವೆ ಆದರೆ ಈ ಕಾರು ಚಾಲಕ ಮಾತ್ರ ದಾರಿ ಮಾಡಿಕೊಟ್ಟಿಲ್ಲ.

ಹೀಗೆ ಕಾರು ವೇಗವಾಗಿ ಮುಂದೆ ಹೋಗುತ್ತಿದ್ದಂತೆ ಚಾಲಕನು ಮುಂಭಾಗದಲ್ಲಿ ಟ್ರಕ್​​​ನ್ನು ಕಂಡಿದ್ದಾನೆ. ನಂತರ ಕಾರು ಚಾಲಕ ಟ್ರಕ್​​ನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ, ಅವನು ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡನು ಮತ್ತು ಕಾರು ಸ್ಕಿಡ್ ಆಗಿ ರಸ್ತೆಯ ಮಧ್ಯಭಾಗದಲ್ಲಿರುವ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.

Published On - 8:30 pm, Wed, 29 June 22

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ