Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?

Apple Pencil : ಮುಂಬೈನಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಆಕಾಂಕ್ಷಾ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯ ಬೀಚ್​ಗೆ ವಿಹಾರಕ್ಕೆ ಹೋಗುತ್ತಾರೆ. ಆಗ ಅಕಸ್ಮಾತ್ ಆಗಿ ಅವರ ಆ್ಯಪಲ್​ ಪೆನ್ಸಿಲ್​ ಕಳೆದುಹೋಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಳ್ಳುತ್ತಾರೆ. ನೆಟ್ಟಿಗರು ಈ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಆದರೆ ಅಚಾನಕ್ ಆಗಿ ಕಳೆದುಹೋದ ವಸ್ತು ಆಕಾಂಕ್ಷಾಗೆ ಸಿಗುತ್ತದೆ. ಅದು ಹೇಗೆ?

Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?
ಕಳೆದುಹೋದ ಆ್ಯಪಲ್​ ಪೆನ್ಸಿಲ್​ ಮರಳಿ ದೊರೆತಾಗ
Follow us
|

Updated on:Oct 25, 2023 | 11:32 AM

Mumbai: ಅನೇಕ ಸಲ ನಮ್ಮ ವಸ್ತುಗಳು ಕಳೆದುಹೋಗುತ್ತವೆ. ಅದರಲ್ಲೂ ನೆಚ್ಚಿನ ಮತ್ತು ದುಬಾರಿ ವಸ್ತುಗಳು ಕಳೆದಾಗಲಂತೂ ಆಗುವ ಸಂಕಟ ಹೇಳತೀರದು. ಆದರೆ ಅಕಸ್ಮಾತ್​ ಆ ವಸ್ತುಗಳು ನಮಗೆ ಸಿಕ್ಕರೆ? ಆ ಖುಷಿಯನ್ನು ಹಂಚಿಕೊಳ್ಳದೇ ಇರಲಾಗದು. ಇದೀಗ ವೈರಲ್ ಆಗಿರುವ ಈ ಪೋಸ್ಟ್​ ನೋಡಿ. ಮಹಿಳೆಯೊಬ್ಬರು ಕಳೆದುಹೋದ ಆ್ಯಪಲ್​ ಪೆನ್ಸಿಲ್​ (Apple Pencil) ತಮ್ಮನ್ನು ತಲುಪಿದ್ದು ಹೇಗೆ ಎಂದು ಹಂಚಿಕೊಂಡಿದ್ದಾರೆ. Xನಲ್ಲಿ ಪೋಸ್ಟ್ ಮಾಡಲಾದ ಈ ಪೋಸ್ಟ್​ ಅನ್ನು ಈತನಕ 2 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮುಂಬೈನಲ್ಲಿ ಇಂಟಿರೀಯರ್ ಡಿಸೈನರ್ ಆಗಿರುವ ಆಕಾಂಕ್ಷಾ ದುಗಾಡ್ ತನ್ನ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯಲ್ಲಿ ಆರೋವಿಲ್ಲೆ ಬೀಚಿನಲ್ಲಿ ವಿಹರಿಸುತ್ತಿದ್ದ ವೇಳೆ ಆ್ಯಪಲ್ ಪೆನ್ಸಿಲ್ ಕಳೆದುಕೊಂಡರು. ಈ ಬಗ್ಗೆ ಬೇಸರವನ್ನು Xನಲ್ಲಿ ತೋಡಿಕೊಂಡರು. ನಂತರ ನಿರಾಸೆಯಿಂದ ಪ್ರವಾಸವನ್ನೂ ಮುಂದುವರಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡ ಆಕಾಂಕ್ಷಾ

THIS IS UNREAL!!! pic.twitter.com/uf3oJgHhbQ

ಪ್ರವಾಸ ಮುಗಿಸಿ ಮುಂಬೈಗೆ ವಾಪಾಸಾದ ನಂತರ ಆಕಾಂಕ್ಷಾಳ ಹಾಸ್ಟೆಲ್​ಗೆ ಪಾಂಡಿಚೇರಿಯಲ್ಲಿ ಭೇಟಿಯಾಗಿದ್ದ ರಕ್ಷಿತ್​ ಎಂಬ ವ್ಯಕ್ತಿಯಿಂದ ಎನ್ವಲಪ್​ ಬಂದಿತು. ಅದನ್ನು ಅಚ್ಚರಿಯಂದ ತೆರೆದು ನೋಡಿದಾಗ ಅದರಲ್ಲಿ ಅಪ್ಸರಾ ಪೆನ್ಸಿಲ್‌ಗಳ ಬಾಕ್ಸ್ ಇತ್ತು. ಇದೇನು ಹುಡುಗಾಟವೇ ಎಂಬಂತೆ ಅನುಮಾನದಿಂದ ಆ ಬಾಕ್ಸ್ ತೆರೆದರು. ಅಪ್ಸರಾ ಪೆನ್ಸಿಲ್​ನಲ್ಲಿ ಕಳೆದುಹೋದ ಆ್ಯಪಲ್​ ಪೆನ್ಸಿಲ್​ ಇತ್ತು!

ಇದನ್ನೂ ಓದಿ : Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?

ಇದನ್ನು ನಂಬಲಾಗುತ್ತಿಲ್ಲ, ಜಗತ್ತಿನಲ್ಲಿ ದಯೆ ಇನ್ನೂ ಇದೆ ಎಂದು ಅಚ್ಚರಿಯಿಂದ ಪೋಸ್ಟ್ ಹಾಕಿದ್ದಾರೆ ಆಕಾಂಕ್ಷಾ. ಈ ಪ್ರಕರಣವನ್ನು ಕೆಲವರು ತಮಾಷೆಯಾಗಿ ನೋಡಿದ್ದಾರೆ. ನಾನಿನ್ನು ರಕ್ಷಿತ್​ ಎಂಬ ಹೆಸರಿನ ಹುಡುಗರೊಂದಿಗೆ ಡೇಟಿಂಗ್ ಶುರು ಮಾಡಬೇಕು ಎಂದಿದ್ದಾರೆ ಒಬ್ಬರು. ನೀವು ಹುಡುಗಿಯ ಬದಲಾಗಿ ಹುಡುಗನಾಗಿದ್ದರೆ ಖಂಡಿತ ನಿಮಗೆ ಅಪ್ಸರಾ ಪೆನ್ಸಿಲ್​ ಕೂಡ ಸಿಗುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಮನುಷ್ಯರು ಮನುಷ್ಯರಾಗಿಯೇ ವರ್ತಿಸುತ್ತಾರೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:31 am, Wed, 25 October 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ