AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?

Apple Pencil : ಮುಂಬೈನಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಆಕಾಂಕ್ಷಾ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯ ಬೀಚ್​ಗೆ ವಿಹಾರಕ್ಕೆ ಹೋಗುತ್ತಾರೆ. ಆಗ ಅಕಸ್ಮಾತ್ ಆಗಿ ಅವರ ಆ್ಯಪಲ್​ ಪೆನ್ಸಿಲ್​ ಕಳೆದುಹೋಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಳ್ಳುತ್ತಾರೆ. ನೆಟ್ಟಿಗರು ಈ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಆದರೆ ಅಚಾನಕ್ ಆಗಿ ಕಳೆದುಹೋದ ವಸ್ತು ಆಕಾಂಕ್ಷಾಗೆ ಸಿಗುತ್ತದೆ. ಅದು ಹೇಗೆ?

Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?
ಕಳೆದುಹೋದ ಆ್ಯಪಲ್​ ಪೆನ್ಸಿಲ್​ ಮರಳಿ ದೊರೆತಾಗ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Oct 25, 2023 | 11:32 AM

Share

Mumbai: ಅನೇಕ ಸಲ ನಮ್ಮ ವಸ್ತುಗಳು ಕಳೆದುಹೋಗುತ್ತವೆ. ಅದರಲ್ಲೂ ನೆಚ್ಚಿನ ಮತ್ತು ದುಬಾರಿ ವಸ್ತುಗಳು ಕಳೆದಾಗಲಂತೂ ಆಗುವ ಸಂಕಟ ಹೇಳತೀರದು. ಆದರೆ ಅಕಸ್ಮಾತ್​ ಆ ವಸ್ತುಗಳು ನಮಗೆ ಸಿಕ್ಕರೆ? ಆ ಖುಷಿಯನ್ನು ಹಂಚಿಕೊಳ್ಳದೇ ಇರಲಾಗದು. ಇದೀಗ ವೈರಲ್ ಆಗಿರುವ ಈ ಪೋಸ್ಟ್​ ನೋಡಿ. ಮಹಿಳೆಯೊಬ್ಬರು ಕಳೆದುಹೋದ ಆ್ಯಪಲ್​ ಪೆನ್ಸಿಲ್​ (Apple Pencil) ತಮ್ಮನ್ನು ತಲುಪಿದ್ದು ಹೇಗೆ ಎಂದು ಹಂಚಿಕೊಂಡಿದ್ದಾರೆ. Xನಲ್ಲಿ ಪೋಸ್ಟ್ ಮಾಡಲಾದ ಈ ಪೋಸ್ಟ್​ ಅನ್ನು ಈತನಕ 2 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮುಂಬೈನಲ್ಲಿ ಇಂಟಿರೀಯರ್ ಡಿಸೈನರ್ ಆಗಿರುವ ಆಕಾಂಕ್ಷಾ ದುಗಾಡ್ ತನ್ನ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯಲ್ಲಿ ಆರೋವಿಲ್ಲೆ ಬೀಚಿನಲ್ಲಿ ವಿಹರಿಸುತ್ತಿದ್ದ ವೇಳೆ ಆ್ಯಪಲ್ ಪೆನ್ಸಿಲ್ ಕಳೆದುಕೊಂಡರು. ಈ ಬಗ್ಗೆ ಬೇಸರವನ್ನು Xನಲ್ಲಿ ತೋಡಿಕೊಂಡರು. ನಂತರ ನಿರಾಸೆಯಿಂದ ಪ್ರವಾಸವನ್ನೂ ಮುಂದುವರಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡ ಆಕಾಂಕ್ಷಾ

THIS IS UNREAL!!! pic.twitter.com/uf3oJgHhbQ

ಪ್ರವಾಸ ಮುಗಿಸಿ ಮುಂಬೈಗೆ ವಾಪಾಸಾದ ನಂತರ ಆಕಾಂಕ್ಷಾಳ ಹಾಸ್ಟೆಲ್​ಗೆ ಪಾಂಡಿಚೇರಿಯಲ್ಲಿ ಭೇಟಿಯಾಗಿದ್ದ ರಕ್ಷಿತ್​ ಎಂಬ ವ್ಯಕ್ತಿಯಿಂದ ಎನ್ವಲಪ್​ ಬಂದಿತು. ಅದನ್ನು ಅಚ್ಚರಿಯಂದ ತೆರೆದು ನೋಡಿದಾಗ ಅದರಲ್ಲಿ ಅಪ್ಸರಾ ಪೆನ್ಸಿಲ್‌ಗಳ ಬಾಕ್ಸ್ ಇತ್ತು. ಇದೇನು ಹುಡುಗಾಟವೇ ಎಂಬಂತೆ ಅನುಮಾನದಿಂದ ಆ ಬಾಕ್ಸ್ ತೆರೆದರು. ಅಪ್ಸರಾ ಪೆನ್ಸಿಲ್​ನಲ್ಲಿ ಕಳೆದುಹೋದ ಆ್ಯಪಲ್​ ಪೆನ್ಸಿಲ್​ ಇತ್ತು!

ಇದನ್ನೂ ಓದಿ : Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?

ಇದನ್ನು ನಂಬಲಾಗುತ್ತಿಲ್ಲ, ಜಗತ್ತಿನಲ್ಲಿ ದಯೆ ಇನ್ನೂ ಇದೆ ಎಂದು ಅಚ್ಚರಿಯಿಂದ ಪೋಸ್ಟ್ ಹಾಕಿದ್ದಾರೆ ಆಕಾಂಕ್ಷಾ. ಈ ಪ್ರಕರಣವನ್ನು ಕೆಲವರು ತಮಾಷೆಯಾಗಿ ನೋಡಿದ್ದಾರೆ. ನಾನಿನ್ನು ರಕ್ಷಿತ್​ ಎಂಬ ಹೆಸರಿನ ಹುಡುಗರೊಂದಿಗೆ ಡೇಟಿಂಗ್ ಶುರು ಮಾಡಬೇಕು ಎಂದಿದ್ದಾರೆ ಒಬ್ಬರು. ನೀವು ಹುಡುಗಿಯ ಬದಲಾಗಿ ಹುಡುಗನಾಗಿದ್ದರೆ ಖಂಡಿತ ನಿಮಗೆ ಅಪ್ಸರಾ ಪೆನ್ಸಿಲ್​ ಕೂಡ ಸಿಗುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಮನುಷ್ಯರು ಮನುಷ್ಯರಾಗಿಯೇ ವರ್ತಿಸುತ್ತಾರೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:31 am, Wed, 25 October 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!