AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಎಸ್​ಸಿ ಪರೀಕ್ಷೆ ಸಿದ್ಧತೆ ನಡೆಸಿರುವ ಮಗಳಿಗೆ ಸಹಾಯ ಮಾಡಲು ಆಟೋದಲ್ಲಿ ಅಧ್ಯಯನ ಮಾಡುತ್ತಿರುವ ಉಬರ್ ಡ್ರೈವರ್

UPSC : ‘ಈ ಯೂಟ್ಯೂಬ್​ ಚಾನೆಲ್​ನಲ್ಲಿ ಅರ್ಥಶಾಸ್ತ್ರ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳುತ್ತಾರೆ. ಪ್ರತೀ ದಿನ ಮಗಳು ಲೈಬ್ರರಿಯಿಂದ ಬಂದ ಮೇಲೆ ನಾವು ಈ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ.’ ರಾಕೇಶ್, ಉಬರ್ ಡ್ರೈವರ್, ಬೆಂಗಳೂರು.

ಯುಪಿಎಸ್​ಸಿ ಪರೀಕ್ಷೆ ಸಿದ್ಧತೆ ನಡೆಸಿರುವ ಮಗಳಿಗೆ ಸಹಾಯ ಮಾಡಲು ಆಟೋದಲ್ಲಿ ಅಧ್ಯಯನ ಮಾಡುತ್ತಿರುವ ಉಬರ್ ಡ್ರೈವರ್
Uber driver studies in auto to help daughter prepare for UPSC
TV9 Web
| Updated By: ಶ್ರೀದೇವಿ ಕಳಸದ|

Updated on:Oct 12, 2022 | 4:43 PM

Share

Viral : ಹಂತಹಂತವಾಗಿ ತಮ್ಮ ಮಕ್ಕಳು ಗುರಿಯನ್ನು ತಲುಪಲು ಪೋಷಕರ ಸಹಾಯ, ಪ್ರಯತ್ನ ಬಹಳ ಮುಖ್ಯ. ದುಡಿಯುವ ವರ್ಗದ ಪೋಷಕರು ಈ ವಿಷಯವಾಗಿ ಬಹಳೇ ಕಷ್ಟಪಡಬೇಕು. ಎಲ್ಲರಿಗೂ ಇರುವುದು ಇಪ್ಪತ್ನಾಲ್ಕು ತಾಸು ಗಂಟೆಯಾದರೂ ಅಷ್ಟರಲ್ಲೇ ಸಂಸಾರ ಮತ್ತು ಉದ್ಯೋಗದ ಜವಾಬ್ದಾರಿಗಳನ್ನು ಪೂರೈಸಬೇಕು, ಮಕ್ಕಳನ್ನು ಅವರವರ ಕನಸು ಗುರಿಯೆಡೆಗೆ ಕರೆದೊಯ್ಯಬೇಕು. ಈಗ ಲಿಂಕ್​ಡಿನ್​ ಮೂಲಕ ವೈರಲ್ ಆಗುತ್ತಿರುವ ಈ ಪೋಸ್ಟ್​ ಗಮನಿಸಿ. ಉಬರ್ ಆಟೋ ಡ್ರೈವರ್ ಒಬ್ಬರು, ಆಟೋದಲ್ಲಿ ಕುಳಿತು ಮೊಬೈಲಿನಲ್ಲಿ ಏನನ್ನೋ ಕೇಳಿಸಿಕೊಳ್ಳುತ್ತಿದ್ದಾರೆ. ಹಾಗಂತ ಇವರು ಯಾವುದೋ ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ. ಯುಪಿಎಸ್​ಸಿ ಪರೀಕ್ಷೆ ಬರೆಯಬೇಕಿರುವ ತಮ್ಮ ಮಗಳಿಗೆ ಸಹಾಯ ಮಾಡಲು ಇವರು ಹೀಗೆ ಸಿಕ್ಕ ಸಣ್ಣಪುಟ್ಟ ಸಮಯದಲ್ಲಿ ತಾವೂ ಅಧ್ಯಯನದಲ್ಲಿ ತೊಡಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ.

ಜೆಪಿ ಮೋರ್ಗನ್ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್​ನ ವಿಶ್ಲೇಷಕ ಅಭಿಜೀತ್ ಮುಥಾ ಲಿಂಕ್ಡಿನ್​ನ ತಮ್ಮ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅಭಿಜೀತ್​ ಬೆಂಗಳೂರಿನಲ್ಲಿ ಉಬರ್​ ಆಟೋ ಏರಿಕುಳಿತುಕೊಳ್ಳುತ್ತಿದ್ದಂತೆ, ಯೂಟ್ಯೂಬ್​ ನೋಡುತ್ತಿದ್ದ ಡ್ರೈವರ್ ರಾಕೇಶ್ ಅದನ್ನು ಸ್ಥಗಿತಗೊಳಿಸಿ ನೇವಿಗೇಷನ್​ ವಿಂಡೋಗೆ ಶಿಫ್ಟ್ ಆದರು. ಸ್ವಲ್ಪ ಸಮಯದ ನಂತರ ಮರಳಿ ಯುಟ್ಯೂಬ್ ಆನ್ ಮಾಡಿದರು. ಇದೆಲ್ಲವನ್ನೂ ಗಮನಿಸುತ್ತಿದ್ದ ಅಭಿಜೀತ್ ಈ ವಿಷಯವಾಗಿ ರಾಕೇಶ್​ ಅವರನ್ನು ಕೇಳಿದಾಗ, ‘ಅಣ್ಣಾ, ಈ ಚಾನೆಲ್​ನಲ್ಲಿ​ ಅರ್ಥಶಾಸ್ತ್ರ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳುತ್ತಾರೆ’ ಎಂದರು.

ಆಗ ಅಭಿಜೀತ್​, ‘ಯಾವುದಾದರೂ ಪರೀಕ್ಷೆಗೆ ಕಟ್ಟಿದ್ದೀರಾ?’ ಎಂದಾಗ, ‘ನಾನಲ್ಲ ನನ್ನ ಮಗಳು ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಪ್ರತೀ ದಿನ ಲೈಬ್ರರಿಯಿಂದ ಬಂದಮೇಲೆ ನಾವು ಸ್ವಲ್ಪ ಹೊತ್ತು ಚರ್ಚೆ ಮಾಡುತ್ತೇವೆ. ಅದಕ್ಕಾಗಿ ನಾನೂ ಕೂಡ ಸಮಯ ಸಿಕ್ಕಾಗೆಲ್ಲ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ರಾಕೇಶ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೂರು ದಿನಗಳ ಹಿಂದೆ ಲಿಂಕ್ಡಿನ್​ನಲ್ಲಿ ಈ ಪೋಸ್ಟ್​ ಹಂಚಿಕೊಂಡ ನಂತರ ಈತನಕ 1.3 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು, 1,600ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 1,800 ಮರುಹಂಚಿಕೆಗಳು ಲಭ್ಯವಾಗಿವೆ. ನೆಟ್ಟಿಗರು ಉಬರ್ ಡ್ರೈವರ್​ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವರು ಡ್ರೈವರ್​ ಮತ್ತು ಪ್ರಯಾಣಿಕರ ಕಾಳಜಿ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅಭಿಜೀತ್, ‘ಅವರು ಆಟೋ ಚಾಲನೆ ಮಾಡುತ್ತ ಈ ವಿಡಿಯೋ ನೋಡುವುದಿಲ್ಲ. ಸಿಗ್ನಲ್​ನಲ್ಲಿ ಮಾತ್ರ ವಿಡಿಯೋ ಕಡೆ ಕಣ್ಣು ಹಾಯಿಸುತ್ತಾರೆ’ ಎಂದು ಸಮಜಾಯಿಷಿ ನೀಡಿದ್ದಾರೆ.

ಅದ್ಭುತ! ನಿಮ್ಮ ಮಕ್ಕಳು ಯುಪಿಎಸ್​ಸಿ ತಯಾರಿ ನಡೆಸದಿದ್ದರೂ ಇಂಥ ವಾತಾವರಣ ಎಲ್ಲ ಮನೆಗಳಲ್ಲೂ ಇರಬೇಕು. ಇಂಥ ಸಂಗತಿಗಳು ಜನರ ದೃಷ್ಟಿಕೋನವನ್ನು ಬದಲಾಯಿಸುತ್ತವೆ ಎಂದಿದ್ದಾರೆ ನೆಟ್ಟಿಗರು.

ನೀವೇನಂತೀರಿ? ಪ್ರಯತ್ನವಿದ್ದರೆ ಫಲ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:29 pm, Wed, 12 October 22

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ