Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೊರಿಡಾದಲ್ಲಿ ಅಳಿಲನ್ನು ರಕ್ಷಿಸಿದಾತನನ್ನು ಹೀರೋ ಎಂದ ನೆಟ್ಟಿಗರು

Hurricane : ಇಯಾನ್ ಚಂಡಮಾರುತದ ಅಸ್ತವ್ಯಸ್ತತೆಯ ಮಧ್ಯೆಯೇ ಈ ವ್ಯಕ್ತಿಗೆ ಸಂಕಷ್ಟದಲ್ಲಿದ್ದ ಅಳಿಲೊಂದು ಕಂಡಿದೆ. ಅದನ್ನು ರಕ್ಷಿಸಿದ್ದಕ್ಕೆ ಪ್ರತೀದಿನವೂ ಈತನ ಮನೆಗೆ ಬಂದು ಕೃತಜ್ಞತಾ ಭಾವ ತೋರುತ್ತಿದೆ.

ಫ್ಲೊರಿಡಾದಲ್ಲಿ ಅಳಿಲನ್ನು ರಕ್ಷಿಸಿದಾತನನ್ನು ಹೀರೋ ಎಂದ ನೆಟ್ಟಿಗರು
Man saves squirrel during hurricane Ian
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 12, 2022 | 6:29 PM

Viral : ಫ್ಲೊರಿಡಾದಲ್ಲಿ ಅಪ್ಪಳಿಸಿರುವ ಇಯಾನ್ ಚಂಡಮಾರುತದ ಅಟ್ಟಹಾಸದ ಕಥೆಗಳನ್ನು ಕೇಳುತ್ತಿದ್ದೀರಿ ನೋಡುತ್ತಿದ್ದೀರಿ. ನೂರಾರು ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರಸ್ತೆ ಮನೆಗಳು ನಾಶವಾಗುತ್ತಿವೆ. ಇನ್ನು ಪ್ರಾಣಿ ಪಕ್ಷಿಗಳ ಕಥೆಯಂತೂ ಹೇಳತೀರದು. ಈ ಎಲ್ಲದರ ಮಧ್ಯೆಯೇ ವ್ಯಕ್ತಿಯೊಬ್ಬ ಅಳಿಲನ್ನು ರಕ್ಷಿಸಿದ ವಿಡಿಯೋ ವೈರಲ್ ಆಗುತ್ತಿದೆ. ನಿಂತ ಮಳೆನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವ ಈ ವ್ಯಕ್ತಿಯ ಕಾಲನ್ನು ಏರಲು ಪ್ರಯತ್ನಿಸಿದೆ ಈ ಅಳಿಲು. ಅದು ವಾಪಾಸ್​ ನೀರಿನೊಳಗೆ ಬೀಳದಂತೆ ಹುಷಾರಾಗಿ ಅದರೊಂದಿಗೆ ಚಲಿಸಿದ್ದಾನೆ ಈತ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Caris (@caris.captures)

ಇದನ್ನು ಹೀಗೆ ಜೋಪಾನವಾಗಿ ಮನೆಗೆ ಕರೆದುಕೊಂಡು ಬಂದು ಅದಕ್ಕೆ ತಿಂಡಿತಿನಿಸನ್ನು ಕೊಟ್ಟಿದ್ದಾನೆ. ಮತ್ತದಕ್ಕೆ ಸ್ಕ್ರ್ಯಾಂಬಲ್ಸ್​ ಎಂದು ಹೆಸರಿಟ್ಟಿದ್ದಾನೆ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿದ ನೆಟ್ಟಿಗರು ಈತನಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಕರುಣಾಮಯಿ ಎಂದು ಹೊಗಳುತ್ತಿದ್ದಾರೆ. ದಿನವೂ ಸ್ಕ್ರ್ಯಾಂಬಲ್ಸ್​ ಚಟುವಟಿಕೆಗಳ ಬಗ್ಗೆ ಅಪ್​ಡೇಟ್​ಗಾಗಿ ಈತನ ಖಾತೆಗೆ ಭೇಟಿ ಕೊಡುತ್ತಿದ್ದಾರೆ ಜನರು.

View this post on Instagram

A post shared by Caris (@caris.captures)

ಇದನ್ನು ಪೋಷಿಸಿ ಹೊರಬಿಟ್ಟರೂ ತನ್ನ ಪ್ರಾಣ ಉಳಿಸಿದ ಸ್ನೇಹಿತನ ಮನೆಗೆ ದಿನವೂ ಭೇಟಿಕೊಟ್ಟು ಹೋಗುತ್ತಿದೆ ಈ ಅಳಿಲು. ಕೃತಜ್ಞತೆ ಎನ್ನುವುದು ಪ್ರಾಣಿಯಲ್ಲಿಯೂ ಮನೋಗತವಾಗಿದೆ.

ಜೀವ ಜೀವವೇ ಅಲ್ಲವೆ? ಮನುಷ್ಯರಾದರೇನು ಪ್ರಾಣಿಯಾದರೇನು? ಸಂಕಷ್ಟದಲ್ಲಿರುವವರನ್ನು ರಕ್ಷಿಸುವುದೇ ಮನುಷ್ಯ ಧರ್ಮ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:16 pm, Wed, 12 October 22

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ