ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್​ನೊಂದಿಗೆ ಹನುಮಾನ್​ ಚಾಲೀಸಾ ಪಠಣ

Hanuman Chalisa : ಮನಸಿನ ನೆಮ್ಮದಿಗಾಗಿ ಯಾರೂ ಏನನ್ನೂ ಅವರಿಷ್ಟದಂತೆ ಭಜಿಸಬಹುದು. ಈ ವಿದೇಶಿಗರು ಪಾಶ್ಚಾತ್ಯ ಶೈಲಿಯಲ್ಲಿ ಹನುಮಾನ್​ ಚಾಲೀಸಾ ಪಠಿಸಿದ್ದಾರೆ. ನೆಟ್ಟಿಗರು ಇವರ ತನ್ಮಯತೆಯನ್ನು ಕೊಂಡಾಡುತ್ತಿದ್ದಾರೆ.

ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್​ನೊಂದಿಗೆ ಹನುಮಾನ್​ ಚಾಲೀಸಾ ಪಠಣ
Foreigners Chant Hanuman Chalisa With Guitar At Varanasi Temple
Follow us
| Updated By: ಶ್ರೀದೇವಿ ಕಳಸದ

Updated on:Oct 13, 2022 | 11:49 AM

Viral Video : ವಿದೇಶಿಯರು ಭಾರತದ ವಿವಿಧ ಸಂಸ್ಕೃತಿಗೆ ಮರುಳಾಗುವುದು ಹೊಸತೇನಲ್ಲ. ಇಲ್ಲಿಯ ಸಂಗೀತ ಕಲೆ ಸಂಸ್ಕೃತಿಯ ಶ್ರೀಮಂತಿಕೆ ಅವರನ್ನು ಅಗಾಧವಾಗಿ ಆಕರ್ಷಿಸಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿ ಕಲಾವಿದರು ವಾರಣಾಸಿಯ ದೇವಸ್ಥಾನವೊಂದರಲ್ಲಿ ಕುಳಿತು ಪಾಶ್ಚಿಮಾತ್ಯ ಶೈಲಿಯಲ್ಲಿ ಹನುಮಾನ್​ ಚಾಲೀಸಾ ಪಠಿಸುತ್ತಿದ್ದಾರೆ. ಪಠಣೆಗೆ ಪೂರಕವಾಗಿ ಗಿಟಾರ್, ವಯೋಲಿನ್​ ಮತ್ತು ತಾಳವಾದ್ಯದ ಒತ್ತಾಸೆ ಪಡೆದಿದ್ದಾರೆ. 1.7 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 3,000ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ. ‘The Lost Girl’ ಎಂಬ ಟ್ವಿಟರ್​ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. 12,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.

ಶಕ್ತಿಗೆ ಧೈರ್ಯಕ್ಕೆ ರೂಪಕವಾದ ಹನುಮಂತ ಎಲ್ಲ ಸಂಕಟಗಳನ್ನು ನಿವಾರಿಸುತ್ತಾನೆ, ಸಮಸ್ಯೆಗಳಿಂದ ಪಾರುಮಾಡುತ್ತಾನೆ ಎನ್ನುವ ಪರಂಪರಾಗತ ನಂಬಿಕೆಯಡಿ ಜನರು ಹನುಮಾನ್​ ಚಾಲೀಸಾ ಪಠಿಸುತ್ತಾರೆ. ಅವರವರಿಗೆ ಬೇಕಾದ ಲಯದಲ್ಲಿ, ಸ್ವರಸಂಯೋಜನೆಯಲ್ಲಿ ಅಳವಡಿಸಿಕೊಂಡು ಹಾಡುವುದರಲ್ಲಿ ತನ್ಮಯರಾಗುತ್ತಾರೆ.

ಮನಸ್ಸನ್ನು ಏಕಾಗ್ರಸ್ಥಿತಿಗೆ ತಂದುಕೊಳ್ಳಲು ಇಂಥ ಆರಾಧನೆಗಳಲ್ಲಿ ಮುಳುಗಿಹೋಗುವುದು ಅನೇಕರಿಗೆ ಸಮಾಧಾನ ಕೊಡುತ್ತದೆ. ಯಾರು ಯಾವ ದೇಶದಿಂದಲೇ ಬಂದಿರಲಿ, ಯಾವ ಹಿನ್ನೆಲೆಯಿಂದಲೇ ಕೂಡಿರಲಿ, ಯಾವ ಧರ್ಮ, ಜಾತಿ, ಮತ ಪಂಥದವರೇ ಆಗಿರಲಿ ದೇವರು ಒಬ್ಬನೇ, ನಾಮ ಹಲವು ಅಲ್ಲವೆ? ಒಟ್ಟಿನಲ್ಲಿ ಶಾಂತಿ, ಸಮಾಧಾನ ಮುಖ್ಯ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:47 am, Thu, 13 October 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್