AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್​ನೊಂದಿಗೆ ಹನುಮಾನ್​ ಚಾಲೀಸಾ ಪಠಣ

Hanuman Chalisa : ಮನಸಿನ ನೆಮ್ಮದಿಗಾಗಿ ಯಾರೂ ಏನನ್ನೂ ಅವರಿಷ್ಟದಂತೆ ಭಜಿಸಬಹುದು. ಈ ವಿದೇಶಿಗರು ಪಾಶ್ಚಾತ್ಯ ಶೈಲಿಯಲ್ಲಿ ಹನುಮಾನ್​ ಚಾಲೀಸಾ ಪಠಿಸಿದ್ದಾರೆ. ನೆಟ್ಟಿಗರು ಇವರ ತನ್ಮಯತೆಯನ್ನು ಕೊಂಡಾಡುತ್ತಿದ್ದಾರೆ.

ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್​ನೊಂದಿಗೆ ಹನುಮಾನ್​ ಚಾಲೀಸಾ ಪಠಣ
Foreigners Chant Hanuman Chalisa With Guitar At Varanasi Temple
TV9 Web
| Edited By: |

Updated on:Oct 13, 2022 | 11:49 AM

Share

Viral Video : ವಿದೇಶಿಯರು ಭಾರತದ ವಿವಿಧ ಸಂಸ್ಕೃತಿಗೆ ಮರುಳಾಗುವುದು ಹೊಸತೇನಲ್ಲ. ಇಲ್ಲಿಯ ಸಂಗೀತ ಕಲೆ ಸಂಸ್ಕೃತಿಯ ಶ್ರೀಮಂತಿಕೆ ಅವರನ್ನು ಅಗಾಧವಾಗಿ ಆಕರ್ಷಿಸಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿ ಕಲಾವಿದರು ವಾರಣಾಸಿಯ ದೇವಸ್ಥಾನವೊಂದರಲ್ಲಿ ಕುಳಿತು ಪಾಶ್ಚಿಮಾತ್ಯ ಶೈಲಿಯಲ್ಲಿ ಹನುಮಾನ್​ ಚಾಲೀಸಾ ಪಠಿಸುತ್ತಿದ್ದಾರೆ. ಪಠಣೆಗೆ ಪೂರಕವಾಗಿ ಗಿಟಾರ್, ವಯೋಲಿನ್​ ಮತ್ತು ತಾಳವಾದ್ಯದ ಒತ್ತಾಸೆ ಪಡೆದಿದ್ದಾರೆ. 1.7 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 3,000ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ. ‘The Lost Girl’ ಎಂಬ ಟ್ವಿಟರ್​ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. 12,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.

ಶಕ್ತಿಗೆ ಧೈರ್ಯಕ್ಕೆ ರೂಪಕವಾದ ಹನುಮಂತ ಎಲ್ಲ ಸಂಕಟಗಳನ್ನು ನಿವಾರಿಸುತ್ತಾನೆ, ಸಮಸ್ಯೆಗಳಿಂದ ಪಾರುಮಾಡುತ್ತಾನೆ ಎನ್ನುವ ಪರಂಪರಾಗತ ನಂಬಿಕೆಯಡಿ ಜನರು ಹನುಮಾನ್​ ಚಾಲೀಸಾ ಪಠಿಸುತ್ತಾರೆ. ಅವರವರಿಗೆ ಬೇಕಾದ ಲಯದಲ್ಲಿ, ಸ್ವರಸಂಯೋಜನೆಯಲ್ಲಿ ಅಳವಡಿಸಿಕೊಂಡು ಹಾಡುವುದರಲ್ಲಿ ತನ್ಮಯರಾಗುತ್ತಾರೆ.

ಮನಸ್ಸನ್ನು ಏಕಾಗ್ರಸ್ಥಿತಿಗೆ ತಂದುಕೊಳ್ಳಲು ಇಂಥ ಆರಾಧನೆಗಳಲ್ಲಿ ಮುಳುಗಿಹೋಗುವುದು ಅನೇಕರಿಗೆ ಸಮಾಧಾನ ಕೊಡುತ್ತದೆ. ಯಾರು ಯಾವ ದೇಶದಿಂದಲೇ ಬಂದಿರಲಿ, ಯಾವ ಹಿನ್ನೆಲೆಯಿಂದಲೇ ಕೂಡಿರಲಿ, ಯಾವ ಧರ್ಮ, ಜಾತಿ, ಮತ ಪಂಥದವರೇ ಆಗಿರಲಿ ದೇವರು ಒಬ್ಬನೇ, ನಾಮ ಹಲವು ಅಲ್ಲವೆ? ಒಟ್ಟಿನಲ್ಲಿ ಶಾಂತಿ, ಸಮಾಧಾನ ಮುಖ್ಯ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:47 am, Thu, 13 October 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್