AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್​ನೊಂದಿಗೆ ಹನುಮಾನ್​ ಚಾಲೀಸಾ ಪಠಣ

Hanuman Chalisa : ಮನಸಿನ ನೆಮ್ಮದಿಗಾಗಿ ಯಾರೂ ಏನನ್ನೂ ಅವರಿಷ್ಟದಂತೆ ಭಜಿಸಬಹುದು. ಈ ವಿದೇಶಿಗರು ಪಾಶ್ಚಾತ್ಯ ಶೈಲಿಯಲ್ಲಿ ಹನುಮಾನ್​ ಚಾಲೀಸಾ ಪಠಿಸಿದ್ದಾರೆ. ನೆಟ್ಟಿಗರು ಇವರ ತನ್ಮಯತೆಯನ್ನು ಕೊಂಡಾಡುತ್ತಿದ್ದಾರೆ.

ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್​ನೊಂದಿಗೆ ಹನುಮಾನ್​ ಚಾಲೀಸಾ ಪಠಣ
Foreigners Chant Hanuman Chalisa With Guitar At Varanasi Temple
TV9 Web
| Edited By: |

Updated on:Oct 13, 2022 | 11:49 AM

Share

Viral Video : ವಿದೇಶಿಯರು ಭಾರತದ ವಿವಿಧ ಸಂಸ್ಕೃತಿಗೆ ಮರುಳಾಗುವುದು ಹೊಸತೇನಲ್ಲ. ಇಲ್ಲಿಯ ಸಂಗೀತ ಕಲೆ ಸಂಸ್ಕೃತಿಯ ಶ್ರೀಮಂತಿಕೆ ಅವರನ್ನು ಅಗಾಧವಾಗಿ ಆಕರ್ಷಿಸಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿ ಕಲಾವಿದರು ವಾರಣಾಸಿಯ ದೇವಸ್ಥಾನವೊಂದರಲ್ಲಿ ಕುಳಿತು ಪಾಶ್ಚಿಮಾತ್ಯ ಶೈಲಿಯಲ್ಲಿ ಹನುಮಾನ್​ ಚಾಲೀಸಾ ಪಠಿಸುತ್ತಿದ್ದಾರೆ. ಪಠಣೆಗೆ ಪೂರಕವಾಗಿ ಗಿಟಾರ್, ವಯೋಲಿನ್​ ಮತ್ತು ತಾಳವಾದ್ಯದ ಒತ್ತಾಸೆ ಪಡೆದಿದ್ದಾರೆ. 1.7 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 3,000ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ. ‘The Lost Girl’ ಎಂಬ ಟ್ವಿಟರ್​ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. 12,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.

ಶಕ್ತಿಗೆ ಧೈರ್ಯಕ್ಕೆ ರೂಪಕವಾದ ಹನುಮಂತ ಎಲ್ಲ ಸಂಕಟಗಳನ್ನು ನಿವಾರಿಸುತ್ತಾನೆ, ಸಮಸ್ಯೆಗಳಿಂದ ಪಾರುಮಾಡುತ್ತಾನೆ ಎನ್ನುವ ಪರಂಪರಾಗತ ನಂಬಿಕೆಯಡಿ ಜನರು ಹನುಮಾನ್​ ಚಾಲೀಸಾ ಪಠಿಸುತ್ತಾರೆ. ಅವರವರಿಗೆ ಬೇಕಾದ ಲಯದಲ್ಲಿ, ಸ್ವರಸಂಯೋಜನೆಯಲ್ಲಿ ಅಳವಡಿಸಿಕೊಂಡು ಹಾಡುವುದರಲ್ಲಿ ತನ್ಮಯರಾಗುತ್ತಾರೆ.

ಮನಸ್ಸನ್ನು ಏಕಾಗ್ರಸ್ಥಿತಿಗೆ ತಂದುಕೊಳ್ಳಲು ಇಂಥ ಆರಾಧನೆಗಳಲ್ಲಿ ಮುಳುಗಿಹೋಗುವುದು ಅನೇಕರಿಗೆ ಸಮಾಧಾನ ಕೊಡುತ್ತದೆ. ಯಾರು ಯಾವ ದೇಶದಿಂದಲೇ ಬಂದಿರಲಿ, ಯಾವ ಹಿನ್ನೆಲೆಯಿಂದಲೇ ಕೂಡಿರಲಿ, ಯಾವ ಧರ್ಮ, ಜಾತಿ, ಮತ ಪಂಥದವರೇ ಆಗಿರಲಿ ದೇವರು ಒಬ್ಬನೇ, ನಾಮ ಹಲವು ಅಲ್ಲವೆ? ಒಟ್ಟಿನಲ್ಲಿ ಶಾಂತಿ, ಸಮಾಧಾನ ಮುಖ್ಯ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:47 am, Thu, 13 October 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ