Viral Video: ಶಿವಲಿಂಗದ ಮೇಲೆ ಅರ್ಘ್ಯದಿಂದ ಕೈ ತೊಳೆದುಕೊಂಡ ಉತ್ತರಪ್ರದೇಶದ ಸಚಿವ; ಪ್ರತಿಪಕ್ಷಗಳಿಂದ ಟೀಕೆ

|

Updated on: Sep 05, 2023 | 11:56 AM

Shivling : ಸಚಿವ ಸತೀಶ ಶರ್ಮಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ, 'ಸನಾತನ ಧರ್ಮವನ್ನು ಅವಮಾನಿಸಿದ ಶರ್ಮಾ ರಾಜೀನಾಮೆ ಕೊಡಬೇಕು' ಎಂದು ಒತ್ತಾಯಿಸುತ್ತಿವೆ. ಸಚಿವ ಉದಯನಿಧಿ ಸ್ಟಾಲಿನ್​ 'ಸನಾತನ ಧರ್ಮ'ದ ಕುರಿತಾಗಿ ನೀಡಿದ ಹೇಳಿಕೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ವಿಡಿಯೋ ಪ್ರತಿಪಕ್ಷಗಳಿಗೆ ಅವಕಾಶ ಮಾಡಿಕೊಟ್ಟಿದೆ.

Viral Video: ಶಿವಲಿಂಗದ ಮೇಲೆ ಅರ್ಘ್ಯದಿಂದ ಕೈ ತೊಳೆದುಕೊಂಡ ಉತ್ತರಪ್ರದೇಶದ ಸಚಿವ; ಪ್ರತಿಪಕ್ಷಗಳಿಂದ ಟೀಕೆ
ಉತ್ತರ ಪ್ರದೇಶದ ಸಚಿವ ಸತೀಶ ಶರ್ಮಾ ಶಿವಲಿಂಗದೊಳಗೆ ಕೈ ತೊಳೆಯುತ್ತಿರುವ ದೃಶ್ಯ
Follow us on

Uttar Pradesh: ಉತ್ತರ ಪ್ರದೇಶದ ಸಚಿವ ಸತೀಶ್​ ಶರ್ಮಾ (Satish Sharma) ಬಾರಾಬಂಕಿಯ ಲೋಧೇಶ್ವರ ಮಹಾದೇವ ದೇವಸ್ಥಾನದಲ್ಲಿರುವ ಅರ್ಘ್ಯದಿಂದ ಶಿವಲಿಂಗದ ಮೇಲೆ ಕೈತೊಳೆದುಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಪ್ರತಿಪಕ್ಷಗಳಿಂದ ಸತೀಶ ಶರ್ಮಾ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಶರ್ಮಾ ಅವರು ಕೈತೊಳೆದುಕೊಳ್ಳಲು ಪುರೋಹಿತರು ಸಹಾಯ ಮಾಡುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ದ್ರಾವಿಡ ಮುನ್ನೇತ್ರ ಕಳಗಂ ಸಚಿವ ಉದಯನಿಧಿ ಸ್ಟಾಲಿನ್​ ‘ಸನಾತನ ಧರ್ಮ’ದ ಕುರಿತಾಗಿ ನೀಡಿದ ಹೇಳಿಕೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ವಿಡಿಯೋ ಪ್ರತಿಪಕ್ಷಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ : Viral Video: ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡ ಆ ಕ್ಷಣಗಳು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸತೀಶ ಶರ್ಮಾ ಅವರ ಈ ನಡೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್​ ರೈ ಅಸಮಾಧಾನ ವ್ಯಕ್ತಪಡಿಸಿ, ‘ಅರ್ಘ್ಯದಿಂದ ಶಿವಲಿಂಗದ ಮೇಲೆ ಕೈತೊಳೆದು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ’ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್, ‘ಈ ಮೂಲಕ ಅವರು ಶಿವನನ್ನೇ ಅವಮಾನಿಸಿದ್ದಾರೆ. ಸನಾತನ ಧರ್ಮದ ಬಗ್ಗೆ ಅಗೌರವ ತೋರುವವರು ಮಾತ್ರ ಇಂಥ ನಡೆವಳಿಕೆ ಪ್ರದರ್ಶಿಸುತ್ತಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧರ್ಮಿಯಾದ ಇವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಇಲ್ಲವೇ ಶರ್ಮಾ ಸ್ವತಃ ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಸತೀಶ ಶರ್ಮಾ ಶಿವಲಿಂಗದ ಮೇಲೆ ಕೈತೊಳೆಯುತ್ತಿರುವ ವಿಡಿಯೋ

ಸಮಾಜವಾದಿ ಪಕ್ಷದ ನಾಯಕ ಸುನಿಲ್ ಸಿಂಗ್ ಸಜನ್, ‘ಈ ವಿಡಿಯೋ ಬಿಜೆಪಿಯ ನಿಜವಾದ ನಡೆಯನ್ನು ಬಹಿರಂಗಗೊಳಿಸಿದೆ. ಯೋಗಿ ಆದಿತ್ಯನಾಥ್ ಇಂಥ ಅಧರ್ಮೀಯ ಸಚಿವರನ್ನು ಯಾವಾಗ ವಜಾ ಮಾಡುತ್ತದೆ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೆಟ್ಟಿಗರನೇಕರು ಈ ವಿಡಿಯೋ ನೋಡಿ ಕಿಡಿ ಕಾರಿದ್ದಾರೆ. ಸಚಿವರು ಅಧರ್ಮಿ ಸರಿ, ಆದರೆ ಆ ಪುರೋಹಿತ? ಇಲ್ಲಿ ಇಬ್ಬರದೂ ತಪ್ಪು ಇದೆ ಎಂದು ಕೆಲವರು ಹೇಳಿದ್ದಾರೆ. ಈ ಘಟನೆಯಿಂದ ಪುರೋಹಿತನೂ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ