AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಪೊಲೀಸ್ ಆಂಟೀ, ನಿಮ್ಮ ಲಾಠಿ ನನಗೆ ಬೇಕು ಅಂದ್ರೆ ಬೇಕು ಅಷ್ಟೆ!

Little Girl in Mumbai : ರಾತ್ರಿಯಾಗಿದೆ. ಮುಂಬೈನ ಮಹಿಳಾ ಪೊಲೀಸ್​ ತಮ್ಮಪಾಡಿಗೆ ತಾವು ಕರ್ತವ್ಯ ನಿರತರಾಗಿದ್ದಾರೆ. 21ತಿಂಗಳ ಈ ಹೆಣ್ಣುಮಗು, ತನಗೆ ಲಾಠಿ ಬೇಕು ಎಂದು ದುಂಬಾಲುಬಿದ್ದಿದೆ. ಎಂಟು ಮಿಲಿಯನ್ ನೆಟ್ಟಿಗರು ಈ ಮುದ್ದಾದ ವಿಡಿಯೋಗೆ ಫಿದಾ!

Viral Video : ಪೊಲೀಸ್ ಆಂಟೀ, ನಿಮ್ಮ ಲಾಠಿ ನನಗೆ ಬೇಕು ಅಂದ್ರೆ ಬೇಕು ಅಷ್ಟೆ!
ಕೋಲು ಬೇಕು!
TV9 Web
| Edited By: ಶ್ರೀದೇವಿ ಕಳಸದ|

Updated on:Sep 05, 2022 | 11:32 AM

Share

Viral Video : ಪೊಲೀಸ್​ ಎಂದರೆ ಮಕ್ಕಳಲ್ಲಿ ಭಯಹುಟ್ಟಿಸಿದ ಪೋಷಕರು ಸಾಕಷ್ಟಿದ್ದಾರೆ. ಹಾಗೆಯೇ ಪೊಲೀಸ್​ ಎಂದರೆ ಫ್ರೆಂಡ್​ ಎಂದು ಪ್ರೀತಿಯಿಂದ ಅವರೊಂದಿಗೆ ಒಡನಾಟ ಹುಟ್ಟಿಸಿದ ಪೋಷಕರೂ ನಮ್ಮ ನಡುವೆ ಇದ್ದಾರೆ. ಆದರೆ ಕೆಲ ಮಕ್ಕಳು ತಾವಾಗಿಯೇ ಪೊಲೀಸರನ್ನು ಸ್ನೇಹಿತರನ್ನಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರಲ್ಲ! ಅದು ಬಹಳ ವಿಶೇಷ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮುಂಬೈನಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರ ಕೈಯಲ್ಲಿರುವ ಲಾಠಿ ತನಗೆ ಬೇಕೇ ಬೇಕೆಂದು ಈ ಹೆಣ್ಣುಮಗು ಹಠ ಹಿಡಿದಿದೆ. 8 ಮಿಲಿಯನ್​ ವೀಕ್ಷಣೆಗೆ ಒಳಗಾಗಿರುವ ಈ ವಿಡಿಯೋ ಬಹಳ ಮುದ್ದಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಕನಿಷ್ಕಾ ಬಿಷ್ಣೋಯ್ ಎಂಬ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕನಿಷ್ಕಾಗೆ 21 ತಿಂಗಳು. ಲಾಠಿಯನ್ನು ಆಟಿಕೆ ಎಂದುಕೊಂಡಿದೆಯೋ ಏನೋ. ತನಗದು ಬೇಕು ಎಂದು ಕೇಳುವ ರೀತಿಗೆ ಪೊಲೀಸ್​ ಅದು ನಿನಗೆ ಯಾಕೆ ಬೇಕು, ಯಾರಿಗೆ ಹೊಡೆಯಲು ಬೇಕು ಎಂದು ತಮಾಷೆ ಮಾಡಿದ್ದಾರೆ. ಅಮ್ಮನಿಗಾ? ಎಂದಾಗ ಅಸ್ಪಷ್ಟವಾಗಿ ಹೂಂ ಎಂದ ಹಾಗಿದೆ.

ದಿನಗಟ್ಟಲೆ ನಿಂತು ಜಂಜಾಟದಲ್ಲಿ ಕಳೆದುಹೋಗುವ ಪೊಲೀಸ್​ ಮುಖದಲ್ಲಿ ಹೀಗೆ ಈ ಮುದ್ದುಕೂಸು ನಗುತರಿಸಿದೆ. ಸಾಕಷ್ಟು ನೆಟ್ಟಿಗರು ಈ ವಿಡಿಯೋ ಮೆಚ್ಚಿ ಕೊಂಡಾಡಿದ್ದಾರೆ. ಮತ್ತೆ ಮತ್ತೆ ನೋಡಿ ನಗುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:24 am, Mon, 5 September 22

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’