AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1963ರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಇಂದಿನ ಸ್ಮಾರ್ಟ್​ಫೋನ್​ಗಳ ಬಗ್ಗೆ ಉಲ್ಲೇಖ

Smart Phone : ‘1960ರಲ್ಲಿ ನನ್ನ ತಂದೆ ನ್ಯಾಷನಲ್​ ಜಿಯಾಗ್ರಫಿಕ್ ಸೊಸೈಟಿಯ ಮ್ಯೂಸಿಯಂಗೆ ಕರೆದೊಯ್ದಿದ್ದರು. ಭವಿಷ್ಯದಲ್ಲಿ ನಾವು ವ್ಯಕ್ತಿಯನ್ನು ನೋಡುತ್ತಲೇ ಮಾತನಾಡುವುದು ಹೇಗೆ ಎನ್ನುವುದರ ಪ್ರಾತ್ಯಕ್ಷಿಕೆ ಅದಾಗಿತ್ತು.’ 

1963ರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಇಂದಿನ ಸ್ಮಾರ್ಟ್​ಫೋನ್​ಗಳ ಬಗ್ಗೆ ಉಲ್ಲೇಖ
1963ರಲ್ಲಿ ಪ್ರಕಟವಾದ ಲೇಖನದಲ್ಲಿ ಇಂದಿನ ಮೊಬೈಲ್​ಗಳ ಬಗ್ಗೆ ಉಲ್ಲೇಖ
TV9 Web
| Edited By: |

Updated on:Jan 24, 2023 | 2:41 PM

Share

Viral News : ಸ್ಮಾರ್ಟ್​ ಫೋನ್​ಗಳಿಲ್ಲದೆ ನಮ್ಮ ಜೀವನವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಸಾಧ್ಯವೇ ಇಲ್ಲವಲ್ಲ? ಫೋನ್​ ಕಾಲ್​, ಮೆಸೇಜ್​ಗಳಿಗಷ್ಟೇ ಸೀಮಿತವಾಗಿದ್ದ ಮೊಬೈಲ್​ ಹೇಗೆ ನಮ್ಮನ್ನು ಇಡೀಯಾಗಿ ಆವರಿಸಿಕೊಂಡಿದೆ ಎನ್ನುವುದನ್ನು ಬರೆಯುತ್ತ ಹೋದರೆ ಅದೊಂದು ದೊಡ್ಡ ಸಂಶೋಧನಾ ಪ್ರಬಂಧವೇ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ನೋಡಿ. 1963ರಲ್ಲಿ ಮ್ಯಾನ್ಸ್​ಫೀಲ್ಡ್​ ನ್ಯೂಸ್​ ಜರ್ನಲ್​ನಲ್ಲಿ ಪ್ರಕಟವಾದ ಲೇಖನವಿದು. ಆಗಿನ ಕಾಲದಲ್ಲಿ ಸ್ಮಾರ್ಟ್​ಫೋನ್​ ಎಂದರೆ ಏನು ಗ್ರಹಿಕೆ ಇತ್ತು ಎನ್ನುವುದನ್ನು ಇದು ಒಳಗೊಂಡಿದೆ. ಮೊಬೈಲ್​ಫೋನ್​ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಬಹುದು ಎಂಬ ಭವಿಷ್ಯವನ್ನು ಆಗಲೇ ನುಡಿಯಲಾಗಿತ್ತು!

ಮುಂಬರುವ ದಿನಗಳಲ್ಲಿ ನೀವು ಚಲಿಸುತ್ತಲೇ ಫೋನ್ ಕರೆಗಳನ್ನು ಸ್ವೀಕರಿಸಬಹುದು, ಇನ್ನೊಬ್ಬರಿಗೆ ಫೋನ್​ ಮಾಡಿ ಮಾತನಾಡಬಹುದು. ಎಲ್ಲಿಯೂ ನೀವು ಫೋನ್​ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಬಹುದು ಎಂಬ ಸಾರಾಂಶ ಈ ಲೇಖನದ್ದು. ಈ ಲೇಖನವನ್ನು ಟ್ವಿಟರ್ ಖಾತೆದಾರರೊಬ್ಬರು ಜನವರಿ 23ರಂದು ಹಂಚಿಕೊಂಡಿದ್ದಾರೆ. ಈತನಕ ಸುಮಾರು 90,000 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ನಮ್ಮ ಹಪ್ಪಳವನ್ನು ‘ಏಷ್ಯನ್​ ನಾಚೋಸ್​’ ಎಂದು ಮಾರಾಟ ಮಾಡುತ್ತಿರುವ ಮಲೇಷಿಯನ್​ ರೆಸ್ಟೋರೆಂಟ್​

1960ರಲ್ಲಿ ನನ್ನ ತಂದೆ ನ್ಯಾಷನಲ್​ ಜಿಯಾಗ್ರಫಿಕ್ ಸೊಸೈಟಿಯ ಮ್ಯೂಸಿಯಂಗೆ ಕರೆದೊಯ್ದಿದ್ದರು. ಅಲ್ಲಿ ನಾನು ನೋಡಿದ ಒಂದು ಅದ್ಭುತ ನನಗಿನ್ನೂ ನೆನಪಿದೆ. ಭವಿಷ್ಯದಲ್ಲಿ ನಾವು ವ್ಯಕ್ತಿಯನ್ನು ನೋಡುತ್ತಲೇ ಮಾತನಾಡುವುದು ಹೇಗೆ ಎನ್ನುವುದರ ಪ್ರಾತ್ಯಕ್ಷಿಕೆ ಅದಾಗಿತ್ತು. ಮುಂದಿನ 60 ವರ್ಷಗಳಲ್ಲಿ ಈ ತಾಂತ್ರಿಕ ಪ್ರಗತಿ ನಮ್ಮ ಮುಂದಿನ ಪೀಳಿಗೆಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬ ಕುತೂಹಲ ಮತ್ತು ಆತಂಕ ಜೊತೆಜೊತೆಗೇ ಇದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:40 pm, Tue, 24 January 23

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ