AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು

Stray Dog : ಬೀದಿನಾಯಿಯೊಂದು ನೀರಡಿಸಿ ಇಲ್ಲಿ ಬಂದಿದೆ. ನಲ್ಲಿಯಿಂದ ನೀರು ಬರುತ್ತದೆ ಎನ್ನುವಷ್ಟು ತಿಳಿವಳಿಕೆ ಸಹಜ. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ನಲ್ಲಿ ತಿರುಗಿಸಿ ನಾಯಿಗೆ ಸಹಾಯ ಮಾಡಿದ್ದಾರೆ. ಮೊದಲು ಹೆದರಿಕೊಂಡ ನಾಯಿ ಕ್ರಮೇಣ ತಣಿವು ತೀರಿಸಿಕೊಂಡಿದೆ. ಮಹಿಳೆಯ ಸಹಾನುಭೂತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು
ನೀರಡಿಸಿರುವ ಬೀದಿನಾಯಿಗೆ ನೀರು ಕುಡಿಯಲು ಸಹಾಯ ಮಾಡಿದ ಮಹಿಳೆ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Aug 25, 2023 | 3:41 PM

Share

Dog Lover: ಸಾಕಿದ ನಾಯಿಗಳ ಹಸಿವು ಹೊತ್ತುಹೊತ್ತಿಗೆ ತಣಿಯುತ್ತದೆ. ಆದರೆ ಬೀದಿನಾಯಿಗಳದ್ದು (Stray Dogs) ? ಎಲ್ಲಿ ನೀರು ಸಿಗುತ್ತದೋ ಅಲ್ಲಿ ಕುಡಿಯಬೇಕು, ರಸ್ತೆಯಲ್ಲಿ ಏನಾದರೂ ಕಣ್ಣಿಗೆ ಬಿದ್ದರೆ ತಿನ್ನಬೇಕು. ಜಾಗ ಸಿಕ್ಕಲ್ಲಿ ಮಲಗಬೇಕು. ಹೇಳಿಕೇಳಿ ಬೀದಿನಾಯಿ, ಕಂಡಲ್ಲೆಲ್ಲ ಓಡಿಸುವವರೇ, ತಿನ್ನಲು, ಕುಡಿಯಲು ಏನಾದರೂ ಸಿಕ್ಕೀತೆಂದು ಸುಮ್ಮನೇ ಅವುಗಳು ಮೂಸಿದರೂ ಸರಿ, ಎಲ್ಲಿಂದಲೋ ಕಲ್ಲುಗಳು ಬಂದು ಬೀಳುತ್ತವೆ. ಇಂಥ ಅನಿಶ್ಚಿತತೆಯ ನಡುವೆಯೇ ಬೀದಿನಾಯಿಗಳು ರೊಚ್ಚಿಗೇಳುವುದು, ಕಚ್ಚುವುದು, ಬೆನ್ನಟ್ಟುವುದು ಇನ್ನೂ ಏನೆಲ್ಲವೂ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ನಾಯಿ ನಲ್ಲಿಯ ಬಳಿ ನೀರು ಕುಡಿಯಲು ಹವಣಿಸುತ್ತಿದೆ. ಇದನ್ನು ಕಂಡ ಮಹಿಳೆಯೊಬ್ಬರು ನಲ್ಲಿಯನ್ನು ತಿರುಗಿಸಿ ನೀರು ಕುಡಿಲು ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ : Viral Video: ಬಿಹಾರ; ವಿದೇಶದಿಂದ ಮರಳಿದ ಗಂಡ ತಲಾಖ್​ ನೀಡಿದ, ಹೆಂಡತಿ ಬೀದಿರಂಪಕ್ಕಿಳಿದಳು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೀದಿನಾಯಿಯ ಬಗ್ಗೆ ಅನುಕಂಪ ತೋರಿದ ಈ ಮಹಿಳೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ಅನ್ನು ಗಿವ್ ಇಂಡಿಯಾ ಎಂಬ ಇನ್​ಸ್ಟಾ ಪುಟದಿಂದ ಹಂಚಿಕೊಳ್ಳಲಾಗಿದೆ. ಆ. 2ರಂದು ಹಂಚಿಕೊಂಡ ಈ ವಿಡಿಯೋ ಅನ್ನು 16,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ.

ನೋಡಿ ಸಹಾನುಭೂತಿಯ ಈ ದೃಶ್ಯ

View this post on Instagram

A post shared by Give (@give_india)

ಪ್ರತಿಯೊಬ್ಬರೂ ಉಡುಗೊರೆಯಂತೆ ನೀಡಲು ಸಾಧ್ಯವಾಗುವುದೆಂದರೆ ಕರುಣೆ, ಸಹಾನುಭೂತಿ, ದಯೆ ಎಂದಿದ್ದಾರೆ ಒಬ್ಬರು. ನೀವು ಮಾಡುವ ಕೆಲಸ ಹಣ ಕೊಟ್ಟು ಕಲಿಸಿದರೂ ಬರುವಂಥದ್ದಲ್ಲ, ನಿಮ್ಮಂಥವರ ಸಂತತಿ ಹೆಚ್ಚಲಿ ಎಂದಿದ್ದಾರೆ ಇನ್ನೊಬ್ಬರು. ನಾಯಿಗೆ ಸಹಾಯ ಮಾಡಿದ್ದಕ್ಕಾಗಿ ನಮ್ಮೆಲ್ಲರ ಪರವಾಗಿ ನಿಮಗೆ ಧನ್ಯವಾದ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್

ಸಹಾನುಭೂತಿ ಎನ್ನುವುದು ಎಳವೆಯಿಂದಲೇ ಬರುವಂಥದ್ದು. ಪೂರಕ ಪರಿಸರವನ್ನು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಕಲ್ಪಿಸಿ ಕೊಡಬೇಕು. ಇಲ್ಲವಾದಲ್ಲಿ ಸ್ವಾರ್ಥತನ ಬಲುಬೇಗನೇ ಮೈಗೂಡಿಬಿಡುತ್ತದೆ. ಇನ್ನೊಬ್ಬರ ನೋವು ದುಃಖ ಕೂಡ ಅರ್ಥ ಮಾಡಿಕೊಳ್ಳದಷ್ಟು ಕಾಠಿಣ್ಯ ಬೆಳೆದುಬಿಡುತ್ತದೆ. ಹಾಗಾಗಿ ನಿತ್ಯವೂ ಮನೆಯಂಗಳದಲ್ಲಿ ಅಥವಾ ಬೀದಿಬಳಿ ಅನ್ನಾಹಾರ ನೀಡುವ ಕ್ರಮವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಅನಾಥರಿಗೆ ಅಥವಾ ಹಸಿವು ಎಂದವರಿಗೆ ಉಪಚರಿಸುವುದನ್ನು ಕಲಿಸಿ ಕೊಡಬೇಕು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:39 pm, Fri, 25 August 23

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ