AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ

Rescue : ನಾಯಿಯನ್ನು ಪ್ರಾಣಿಯಂತೆ ನೋಡದೆ ಮನೆಯ ಸದಸ್ಯರಂತೆ ನೋಡಿದಾಗ ಮಾತ್ರ ಇಂಥ ಧೈರ್ಯ ಮತ್ತು ಅಪಾಯಕ್ಕೆ ಒಡ್ಡಿಕೊಳ್ಳುವ ಮನಸ್ಸಾಗುತ್ತದೆ. ಈ ವಿಡಿಯೋದಲ್ಲಿ ಅಗ್ನಿಶಾಮಕದಳದವರು ನಿಂತಿರುವ ರೀತಿ ನೋಡಿದರೆ ಯಾಕೋ ವಿಚಿತ್ರವೆನ್ನಿಸುತ್ತದೆ. ಆದರೆ ತನ್ನ ನಾಯಿಯನ್ನು ಈತ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನುಗ್ಗಿ ರಕ್ಷಿಸಿದ ರೀತಿ ಮಾತ್ರ ಭಲೇ!

Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ
ಬೆಂಕಿ ಬಿದ್ದ ಮನೆಯಿಂದ ತನ್ನ ನಾಯಿಯನ್ನು ರಕ್ಷಿಸಿದ ವ್ಯಕ್ತಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ| Edited By: |

Updated on:Jul 05, 2026 | 10:05 AM

Share

ಆಕಸ್ಮಿಕವಾಗಿ ಈ ಮನೆಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ದಳದವರು ಇಲ್ಲಿದ್ದಾರೆ. ಇದ್ದಕ್ಕಿದ್ದಂತೆ ಅಲ್ಲಿಗೆ ಓಡಿಬಂದ ವ್ಯಕ್ತಿಯೊಬ್ಬ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನುಗ್ಗಿ ಸಾಕುನಾಯಿಯನ್ನು ಹೊರಗೆ ಕರೆದುಕೊಂಡು ಬರುತ್ತಾನೆ. ರಕ್ಷಣೆ ಕಾರ್ಯಾಚರಣೆಯಲ್ಲಿ ಅವನ ಕೈಗಳಿಗೆ ಸುಟ್ಟ ಗಾಯಗಳಾದರೂ ಅವ ಲೆಕ್ಕಿಸುವುದಿಲ್ಲ. ಹೀಗೆ ಓಡಿಬಂದು ರಕ್ಷಿಸಿದ್ದು ತನ್ನ ನಾಯಿಯನ್ನೇ. ಈ ವಿಡಿಯೋ ಇದೀಗ ವೈರಲ್ (Viral Video) ಆಗುತ್ತಿದ್ದು ಸಾಮಾಜಿಕ ಜಾಲತಾಣಿಗರು ಇವನ ಪ್ರಾಣಿಪ್ರೇಮ, ಧೈರ್ಯ ಮತ್ತು ಪ್ರಯತ್ನವನ್ನು ಶ್ಲಾಘಿಸುತ್ತಿದ್ದಾರೆ. ಜೊತೆಗೆ ಅಗ್ನಿಶಾಮಕ ದಳದವರು ಯಾಕೆ ಹೀಗೆ ಸುಮ್ಮನೇ ನಿಂತಿದ್ದಾರೆ!? ಎಂದೂ ಪ್ರಶ್ನಿಸುತ್ತಿದ್ದಾರೆ.

ತನ್ನ ಜೀವವನ್ನು ಲೆಕ್ಕಿಸದೇ ಸುರಕ್ಷಾ ವಿಧಾನಗಳನ್ನೂ ಅನುಸರಿಸದೇ ಅಷ್ಟು ದೊಡ್ಡ ಜ್ವಾಲೆಗಳ ಮಧ್ಯೆಯೇ ಮನೆಯೊಳಗೆ ನುಗ್ಗುವ ಈ ವ್ಯಕ್ತಿಯನ್ನು ನೋಡಿದಾಗ ಭಯವೂ ಅಚ್ಚರಿಗೂ ಒಮ್ಮೆಲೇ ಆಗುತ್ತದೆ. ಯಾವುದೋ ಸಿನೆಮಾದ ದೃಶ್ಯವಲ್ಲ ತಾನೆ? ಎಂದು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ. ಅಂತೂ ಮನೆಯೊಳಗಿನಿಂದ ನಾಯಿಯನ್ನು ಹೊರಗೆ ಓಡಿಸಿಕೊಂಡು ಬರುತ್ತಾನೆ.

ತನ್ನ ನಾಯಿಯನ್ನು ರಕ್ಷಿಸಿದ ಈ ವ್ಯಕ್ತಿ

ನಾಯಿಗಳು ಮತ್ತು ಮನುಷ್ಯರ ನಡುವಿನ ಈ ಅನುಬಂಧವನ್ನು ವರ್ಣಿಸುವುದು ಕಷ್ಟ. ಅದೇನಿದ್ದರೂ ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕು. ಕೆಲವರು ಮನೆ ಕಾಯಲು ನಾಯಿಯನ್ನು ಸಾಕುತ್ತಾರೆ. ಕೆಲವರು ತಮ್ಮೊಂದಿಗೆ ಒಂದು ಪ್ರಾಣಿ ಇರಲಿ ಎಂದು ಸಾಕುತ್ತಾರೆ. ಇನ್ನೂ ಕೆಲವರು ಮಕ್ಕಳಂತೆ ನಾಯಿಯನ್ನು ಸಾಕುತ್ತಾರೆ. ಮಕ್ಕಳಂತೆ ನೋಡಿಕೊಂಡವರಿಗೆ ಮಾತ್ರ ತಮ್ಮ ಪ್ರಾಣದ ಹಂಗು ತೊರೆದು ಹೀಗೆ ಕಾಪಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಅಗ್ನಿಶಾಮಕ ದಳದವರು ಎಷ್ಟೊಂದು ಆರಾಮಾಗಿ ನಿಂತಿದ್ದಾರಲ್ಲ? ಗಂಟೆ ಲೆಕ್ಕದಲ್ಲಿ ಅವರಿಗೆ ಹಣ ಪಾವತಿ ಮಾಡಲಾಗಿದೆಯೇ ಏನು ಕಥೆ? ಎಂದಿದ್ದಾರೆ ಒಬ್ಬರು. ಅಗ್ನಿಶಾಮಕದಳದವನರನು ನಾನೆಂದೂ ಕ್ಷಮಿಸಲಾರೆ, ಸದ್ಯ ಮನೆಯ ಮಾಲಿಕ ತನ್ನ ನಾಯಿಯನ್ನು ಕಾಪಾಡಿದನಲ್ಲ ಸಾಕು ಎಂದು ಇನ್ನೊಬ್ಬರು. ನಾಯಿ ಬಿಟ್ಟರೆ ನನಗೇ ಬದುಕೇ ಇಲ್ಲ ಎಂದು ಪ್ರೀತಿಸುವವರು ಮಾತ್ರ ಇಂಥ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ ಎಂದಿದ್ದಾರೆ ಮತ್ತೊಬ್ಬರು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:32 pm, Thu, 24 August 23

Follow Us
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್