Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ

Harassing Employee : ಶೌಚಾಲಯ ಮತ್ತು ಊಟದ ವಿರಾಮಗಳಿಗೂ ಸೈನೌಟ್​ ಮಾಡಬೇಕೆಂದು ಹೊಸ ಮೇಲಧಿಕಾರಿಯು ಹೇಳುತ್ತಿದ್ದಾರೆ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ನೀಡುತ್ತಿದ್ದಾರೆ, ಕೆಲಸವನ್ನು ತೊರೆಯಲೇ? ಆದರೆ ನನಗೆ ಮನಸ್ಸಿಲ್ಲ ಎನ್ನುತ್ತಿದ್ದಾರೆ ರೆಡ್ಡಿಟ್​ ಖಾತೆದಾರರೊಬ್ಬರು. ಈ ವಿಷಯವಾಗಿ ನೆಟ್ಟಿಗರು ಮೇಲಧಿಕಾರಿಯ ನಡೆಗೆ ಕಾರಣವನ್ನೂ ವಿವರಿಸಿದ್ದಾರೆ ಮತ್ತು ಸಲಹೆಗಳನ್ನೂ ನೀಡಿದ್ದಾರೆ.

Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ
ಪ್ರಾತಿನಿಧಿಕ ಚಿತ್ರ
Follow us
|

Updated on:Aug 24, 2023 | 10:55 AM

Office : ‘ನಾನು 18 ವರ್ಷಗಳಿಂದ ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಟೀಮ್​ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಿರಿಯ ಉದ್ಯೋಗಿಯೂ ಆಗಿದ್ದೇನೆ. ಆದರೆ ಇದೀಗ ಹೊಸ ಮೇಲಧಿಕಾರಿಯು (Boss) ಬಂದಾಗಿನಿಂದ ಶೌಚಾಲಯ ಮತ್ತು ಊಟದ ವಿರಾಮಕ್ಕೂ ನಮ್ಮಿಂದ ಸೈನ್​ಔಟ್​ ಮಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಅಂದರೆ ಸದಾಕಾಲ ನಾವು ಎಲ್ಲಿದ್ದೇವೆ ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅವರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಆದರೆ ಅವರ ಈ ಅನವಶ್ಯಕ ನಿಯಮವನ್ನು ನಾನು ನಿರಾಕರಿಸಿದ್ದೇನೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ರೆಡ್ಡಿಟ್​ನಲ್ಲಿ ಈ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ‘ಯಾರು ನ್ಯೂಸ್​ ನೋಡುತ್ತಿದ್ದಾರೆಂದು ನೆನಪಿಸಬಹುದೆ?’ ಆ್ಯಂಕರ್ ಲೈವ್​ನಲ್ಲಿ ತಡವರಿಸಿದ ಆ ಕ್ಷಣಗಳು

ಮುಂದುವರಿದ ಅವರು, ‘ಪತ್ರ ನನಗೀಗ ವಯಸ್ಸು 40. ನಾನೀಗ ಅವರ ಚೇಂಬರಿನೆದುರು ಕೂಡ ಓಡಾಡುತ್ತಿಲ್ಲ. ಆದರೆ ಶೌಚಾಲಯಕ್ಕೆ ಹೋಗುವಾಗ ಸಿಗ್ನಲ್​ ಸೆಟ್​ ಮಾಡಿ ಹೋಗುತ್ತೇನೆ. ಇನ್ನು ಊಟದ ವಿರಾಮ 30ನಿಮಿಷ ತೆಗೆದುಕೊಳ್ಳುತ್ತೇನೆ. ಈ ವಿರಾಮ ಸಮಯದಲ್ಲಿ ನಾನು ಸೈನ್​ಔಟ್ ಆಗದೇ ಇರುವ ಕಾರಣ ಅಸಹಕಾರ ಮತ್ತು ಸೂಚನೆಗಳನ್ನು ಅನುಸರಿಸುವಲ್ಲಿ ವಿಫಲನಾಗಿದ್ದೇನೆ ಎಂಬ ಕಾರಣ ನೀಡಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ.’ ಎಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೆಡ್ಡಿಟ್​ನಲ್ಲಿಯ ಈ ಪೋಸ್ಟ್​

My new boss wants us to sign out anytime we go to bathroom or take lunch. I refuse to do so and have been threatened to be written up. What do I do? by u/Maleficent_Ad7033 in antiwork

‘ಈ ಕಾರಣದಿಂದಾಗಿ ಕೆಲಸವನ್ನೇ ತೊರೆಯುವ ಬಗ್ಗೆ ಯೋಚಿಸುತ್ತಿದ್ದೇನೆ. ಆದರೆ ಡಿಸೈನ್​ ಎಂಜಿನಿಯರಿಂಗ್​ ನನ್ನ ಆಸಕ್ತಿಕರ ಕ್ಷೇತ್ರ ಹೆಚ್ಚಿನದನ್ನು ಸಾಧಿಸಲು ಇಷ್ಟಪಡುತ್ತೇನೆ, ಈಗಾಗಲೇ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದೇನೆ. ಹಾಗಾಗಿ ಎಚ್​ಆರ್​ ಬಳಿ ಮಾತನಾಡಬೇಕು ಎಂದುಕೊಂಡಿದ್ದೇನೆ. ಈ ವಿಷಯವಾಗಿ ನೀವು ಏನು ಸಲಹೆ ನೀಡುತ್ತೀರಿ?’ ಎಂದು ನೆಟ್ಟಿಗರಲ್ಲಿ ಕೇಳಿದ್ದಾರೆ.

ಇದನ್ನೂ ಓದಿ : Viral Video: 13 ಗಂಟೆಗಳಲ್ಲಿ 73 ಕಿಮೀ ನಡೆದು ಬೆಂಗಳೂರಿನಲ್ಲಿ ‘ಭಾರತದ ನಕ್ಷೆ’ ಗುರುತಿಸಿದ ಈ ವ್ಯಕ್ತಿ

ಈ ತನಕ ಸುಮಾರು 22,000 ಜನರು ಈ ಪೋಸ್ಟ್​ ಅನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇವರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದ್ದಾರೆ. ನೀವು 18 ವರ್ಷಗಳಿಂದ ಈ ಕಂಪೆನಿಯಲ್ಲಿಯೇ ಕೆಲಸ ಮಾಡುತ್ತಿದ್ದೀರಿ. ಅಂದರೆ ಹೆಚ್ಚು ಸಂಬಳ ಪಡೆಯುವವರಲ್ಲಿ ಒಬ್ಬರಾಗಿದ್ದೀರಿ. ಕಂಪೆನಿಯ ಲಾಭ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನಿಮ್ಮನ್ನು ಕೆಲಸದಿಂದ ತೆಗೆಯುವುದು ಅವರ ಆಲೋಚನೆಯಾಗಿರಬಹುದು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ಬೆಂಗಳೂರು; ನಾಯಿಮಾಂಸ ಕಾನೂನುಬದ್ಧಗೊಳಿಸಿ; ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ

ಎಚ್ಆರ್​ ಪಾಲಿಸಿಗೂ ನಿಮ್ಮ ಮೇಲಧಿಕಾರಿಯ ಈ ಹೊಸ ನಿಯಮಗಳಿಗೂ ಸಂಬಂಧವೇ ಇಲ್ಲ. ಬೇರೆ ಕಂಪೆನಿಯಲ್ಲಿ ಕೆಲಸ ಹುಡುಕಿಕೊಳ್ಳುವುದು ಸೂಕ್ತ, ಸಾಮಾನ್ಯವಾಗಿ ಮೇಲಧಿಕಾರಿಯು ಎಚ್​​ಆರ್​ನೊಂದಿಗೆ ಚರ್ಚಿಸಿಯೇ ಮತ್ತು ತಮ್ಮ ಕಾರ್ಯರೂಪಯೋಜನೆಗೆ ಪೂರಕವಾಗಿ ಇಂಥ ನಿಯಂತ್ರಣಾ ತಂತ್ರವನ್ನು ರೂಪಿಸಿರುತ್ತಾರೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಕಾನ್ಫಿಡೆನ್ಸ್​ ಈಸ್ ಸೆಕ್ಸಿ; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!

ಬಾತ್ರೂಮ್​ ಬ್ರೇಕ್​​, ಲಂಚ್ ಬ್ರೇಕ್​, ಕಾಫೀ ಬ್ರೇಕ್​ ಅನ್ನು ನಿಯಂತ್ರಿಸುವುದರಿಂದ ಉದ್ಯೋಗಿಗಳಿಂದ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡಿಸಲು ಸಾಧ್ಯ ಎಂದು ನಿಮ್ಮ ಮೇಲಧಿಕಾರಿ ತಿಳಿದುಕೊಂಡಿದ್ದರೆ ಅದು ಶುದ್ಧ ಮೂರ್ಖತನ. ಇದು ಅವರ ಅಸಾಮರ್ಥ್ಯವನ್ನು ತೋರಿಸುತ್ತದೆ. ಆಗ ಅಸಹಾಯಕತೆಯಿಂದ ಅವರು ವಿನಾಕಾರಣ ನಿಯಂತ್ರಿಸಲು ಶುರುಮಾಡುತ್ತಾರೆ ಎಂದು ಹೇಳಿದ್ದಾರೆ ಮತ್ತೊಬ್ಬರು.

ಈ ವಿಡಿಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:52 am, Thu, 24 August 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ