Viral: ನಾಥೂರಾಮ ಗೋಡ್ಸೆ;’ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ’

|

Updated on: Oct 06, 2023 | 5:12 PM

Nathuram Godse : 'ಚರ್ಚಿಲ್ ಎಷ್ಟು ಮಂದಿಯ ಸಾವಿಗೆ ಕಾರಣನಾದ ಗೊತ್ತೇ?', 'ಗಾಂಧಿಯೂ ಎಲ್ಲರಂತೆ ಕೊರತೆಗಳುಳ್ಳ ಸಾಧಾರಣ ಮನುಷ್ಯ. ಗೋಡ್ಸೆಗೆ ಅವನ ತತ್ವಗಳು ಒಪ್ಪಿಗೆಯಾಗಿರಲಿಕ್ಕಿಲ್ಲ' ಎಂಬ ಸಮಜಾಯಿಷಿಗಳೂ ಈ ಫೋಟೋದಡಿ ಇವೆ. 'ಅಭಿವ್ಯಕ್ತಿ ಸ್ವಾತಂತ್ರ್ಯ'ದ ತುತ್ತೂರಿಯನ್ನೂ ಕೆಲವರು ಊದಿದ್ದಾರೆ. ಈ ಫೋಟೋ ನೋಡಿದ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿದೆ?

Viral: ನಾಥೂರಾಮ ಗೋಡ್ಸೆ;ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ
ಹೈದರಾಬಾದಿನ ಆಟೋವೊಂದರ ಮೇಲೆ ನಾಥೂರಾಮ ಗೋಡ್ಸೆ ಪೋಸ್ಟರ್
Follow us on

Hyderabad : ಈ ಆಟೋರಿಕ್ಷಾ ನೋಡಿದರೆ ನಿಮಗೇನೆನ್ನಿಸುತ್ತದೆ? ಇತರರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಂತೆ ಈ ಆಟೋ ಡ್ರೈವರ್ (Auto Driver) ಕೂಡ ಇಲ್ಲಿ ನಿಂತಿದ್ದಾನೆ. ಸಿಗ್ನಲ್​ನ ಹಸಿರು ದೀಪಕ್ಕಾಗಿ ಕಾಯುತ್ತಿದ್ದಾನೆ. ಇದರಲ್ಲೇನು ವಿಶೇಷ ಎನ್ನಿಸುತ್ತದಲ್ಲವೇ? ರೆಡ್ಡಿಟ್‌ ಜಾಲತಾಣದಲ್ಲಿ ಈ ಫೋಟೋ ಪೋಸ್ಟ್ ಮಾಡಿರುವವರೊಬ್ಬರು ಜೊತೆಗೆ, ‘ಇದನ್ನು ನಾನಿಂದು ಹೈದರಾಬಾದ್‌ನಲ್ಲಿ ನೋಡಿ ಆಘಾತಗೊಂಡೆ. ಒಬ್ಬ ಕೊಲೆಗಡುಕನ ವೈಭವೀಕರಣ ಇದು’ ಎಂಬ ಒಕ್ಕಣೆ ಹಾಕಿದ್ದಾರೆ. ಆಟೋವನ್ನು ಗಮನವಿಟ್ಟು, ಬೇಕಿದ್ದಲ್ಲಿ ಝೂಮ್ ಮಾಡಿ ನೋಡಿದಾಗ ವಿಷಯ ಏನೆಂದು ತಿಳಿಯುತ್ತದೆ. ಆಟೋದ ಮೇಲೆ ಇರುವ ಫೋಟೋ ನಾಥೂರಾಮ್ ಗೋಡ್ಸೆಯದು (Nathuram Ghodse).

ಇದನ್ನೂ ಓದಿ: Viral: ‘2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

‘ಇದೇನೂ ಅಲ್ಲ, ‘ಹಿಟ್ಲರ್ ಬಟ್ಟೆ ಅಂಗಡಿ’ ಇರುವುದು ಗೊತ್ತಾ?’, ”ನಾನು ಪಂಜಾಬ್‌ನ ವಾಸಿ. ಇಲ್ಲಿ ಕಾರು, ಬಸ್ಸುಗಳ ಮೇಲೆ, ಕೆಲವು ಕಚೇರಿಗಳಲ್ಲೂ ಭಿಂದ್ರನ್‌ವಾಲೇಯ ಫೋಟೋಗಳಿವೆ.”, ‘ಉಗ್ರವಾಗಿಗಳನ್ನ, ಭಯೋತ್ಪಾದಕರನ್ನ ವೈಭವೀಕರಿಸುವ ಸಂಸ್ಕೃತಿಯೇ ನಮ್ಮಲ್ಲಿದೆ’ ಅಂತೆಲ್ಲ ಷರಾ ಬರೆದಿದ್ದಾರೆ ಕೆಲವರು. ಈ ಪೋಸ್ಟ್‌ಗೆ ಅನೇಕ ಪರ ವಿರೋಧ ಹೇಳಿಕೆಗಳು ಬಂದು ವರ್ತಮಾನದ ಧ್ರುವೀಕರಣಕ್ಕೆ ಇದೊಂದು ನಿದರ್ಶನವಾಗಿದೆ. ‘ನಾನು ಎಷ್ಟೋ ಕಡೆ ಸಲ್ಮಾನ್ ಖಾನ್ ಫೋಟೊ ಹಾಕಿರುವುದನ್ನು ನೊಡುತ್ತೇನೆ. ಅವನ ಸಿನೆಮಾಗಳನ್ನು ಹುಚ್ಚೆದ್ದು ನೊಡುತ್ತಾರೆ. ಅವನು ಕೊಲೆಗಡುಕನಲ್ಲವೇ?’ ಎಂದೊಬ್ಬರು ವಿಚಿತ್ರ ಪ್ರಶ್ನೆ ಹಾಕಿದ್ದಾರೆ. ಮಂದಿಗೆ ನಿಜಕ್ಕೂ ಮರುಳೋ, ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೋ ಎನ್ನಿಸಬೇಕು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೈದರಾಬಾದಿನ ಆಟೋವೊಂದರ ಮೇಲೆ ಗೋಡ್ಸೆ ಪೋಸ್ಟರ್​

&

Saw this today in Hyderabad and was shocked and repulsed
byu/diva-fairytale-boss inindia

‘ಚರ್ಚಿಲ್ ಎಷ್ಟು ಮಂದಿಯ ಸಾವಿಗೆ ಕಾರಣನಾದ ಗೊತ್ತೇ?’, ‘ಗಾಂಧಿಯೂ ಎಲ್ಲರಂತೆ ಕೊರತೆಗಳುಳ್ಳ ಸಾಧಾರಣ ಮನುಷ್ಯ. ಗೋಡ್ಸೆಗೆ ಅವನ ತತ್ವಗಳು ಒಪ್ಪಿಗೆಯಾಗಿರಲಿಕ್ಕಿಲ್ಲ’ ಎಂಬ ಸಮಜಾಯಿಷಿಗಳೂ ಇವೆ. ತಲೆಯುಳ್ಳ ಶಾಂತಮನಸಿರಲ್ಲಿ ಕೆಲವರು, ‘ಸೈದ್ಧಾಂತಿಕ ವಿರೋಧ ಬೇರೆ ಅದಕ್ಕಾಗಿ ಹತ್ಯೆ ಮಾಡುವುದು ಬೇರೆ. ದ್ವೇಷ ಎನ್ನುವುದು ಒಂದು ಸಿದ್ಧಾಂತವಲ್ಲ’ ಎಂದು ಚರ್ಚೆಯನ್ನು ದಾರಿಗೆ ತರಲು ಯತ್ನಿಸುವುದನ್ನು ನೋಡಬಹುದು. ಆದರೆ ಒಟ್ಟಾರೆ ಅಲ್ಲಿ ಸೂಕ್ಷ್ಮತೆ ಎನ್ನುವುದು ಕಳೆದುಹೋಗಿ ವಿತಂಡವಾದಗಳೇ ಏರ್ಪಟ್ಟಿವೆ.

ಇದನ್ನು ನೋಡಿ ನಿಮಗೆ ಏನನ್ನಿಸಿತು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ