AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ

ಆದರೆ ಒಂದೇ ರಾತ್ರಿಯಲ್ಲಿ ಭಯಾನಕ ಅನುಭವವಾಗಿದ್ದು, ದುಡ್ಡಿಗಿಂತಲೂ ಆರೋಗ್ಯ ಮುಖ್ಯ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಯಾವುದೋ ದೈವ,ಭೂತ ಅಥವಾ ಮನುಷ್ಯರ ಕಾಟವಲ್ಲ, ಇದಕ್ಕಿಂತಲೂ ಮಿಗಿಲಾಗಿ ಒಂದೇ ರಾತ್ರಿಯಲ್ಲಿ 200ರಕ್ಕೂ ಹೆಚ್ಚು ತಿಗಣೆಗಳು ಮಹಿಳೆಯ ರಕ್ತ ಹೀರಿದೆ.

ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ
ಅಕ್ಷತಾ ವರ್ಕಾಡಿ
|

Updated on: Jun 09, 2024 | 4:00 PM

Share

ದೂರ ಪ್ರಯಾಣ ಮಾಡುವಾಗ ಉಳಿದುಕೊಳ್ಳಲು ಒಂದು ಒಳ್ಳೆ ರೂಮ್​​​ ಬೇಕು, ಜಾಗ ಬದಲಾದರೂ ಕೂಡ ನಿದ್ದೆ ಚೆನ್ನಾಗಿ ಬರಬೇಕು ಎಂಬುದು ಪ್ರಯಾಣ ಬೆಳೆಸುವ ಮುನ್ನವೇ ಯೋಚನೆ ಮಾಡುವುದು ಸಹಜ. ಅದರಂತೆಯೇ ಎಂದೆರಡು ದಿನಕ್ಕೆ ಬಾಡಿಗೆ ಜಾಸ್ತಿ ಕೇಳಿದರೂ ಕೂಡ ಯೋಚನೆ ಮಾಡದೇ ಹಣ ಪಾವತಿ ಮಾಡಿ ಬಿಡುತ್ತೇವೆ. ಐಷಾರಾಮಿ ಹೋಟೆಲ್​ ಎಂದರೆ ಸೌಲಭ್ಯಗಳಿಗೆ ಏನೂ ಕೊರತೆ ಇರಲ್ಲ ಬಿಡಿ. ಅಂದರಂತೆಯೇ ಇಲ್ಲೊಬ್ಬರು ಮಹಿಳೆ ಹೋಟೆಲ್‌ ರೂಮ್​​ ಒಂದರಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಲು ಬರೋಬ್ಬರಿ 17000 ರೂ. ಪಾವತಿ ಮಾಡಿದ್ದಾರೆ. ಆದರೆ ಒಂದೇ ರಾತ್ರಿಯಲ್ಲಿ ಭಯಾನಕ ಅನುಭವವಾಗಿದ್ದು, ದುಡ್ಡಿಗಿಂತಲೂ ಆರೋಗ್ಯ ಮುಖ್ಯ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಯಾವುದೋ ದೈವ,ಭೂತ ಅಥವಾ ಮನುಷ್ಯರ ಕಾಟವಲ್ಲ, ಇದಕ್ಕಿಂತಲೂ ಮಿಗಿಲಾಗಿ ಒಂದೇ ರಾತ್ರಿಯಲ್ಲಿ 200ರಕ್ಕೂ ಹೆಚ್ಚು ತಿಗಣೆಗಳು ಮಹಿಳೆಯ ರಕ್ತ ಹೀರಿದೆ.

ಯುನೈಟೆಡ್ ಕಿಂಗ್‌ಡಂನ ಬ್ಲ್ಯಾಕ್‌ಪೂಲ್‌ನಲ್ಲಿರುವ ಕ್ಯಾಲಿಪ್ಸೊ ಎಂಬ ಹೋಟೆಲ್​​​ನಲ್ಲಿ ಶರೋನ್ ಹಸ್ಲಾಮ್(65) ತನ್ನ ಸ್ನೇಹಿತೆ ಮರಿಯನ್ ಪಿಯರ್ಸನ್ ಅವರ ಬರ್ತ್​ ಡೇ ಪಾರ್ಟಿಯ ಸಲುವಾಗಿ ಹೋಟೆಲ್‌ನಲ್ಲಿ ಕೊಠಡಿಯನ್ನು ಎರಡು ದಿನಕ್ಕೆ 17,000 ರೂ ಕೊಟ್ಟು ಕಾಯ್ದಿರಿಸಿದ್ದರು. ಕೋಣೆಗೆ ಪ್ರವೇಶಿಸಿದಾಗ ಹಾಸಿಗೆಯು ಸ್ವಚ್ಛವಾಗಿತ್ತು ಮತ್ತು ಎಲ್ಲಾ ಸೌಲಭ್ಯಗಳು ಚೆನ್ನಾಗಿಯೇ ಇತ್ತು ಎಂದು ಹಸ್ಲಾಮ್ ಹೇಳಿದ್ದಾರೆ.

ಇದನ್ನೂ ಓದಿ: 5 ಕೋಟಿ ರೂ ಬೆಲೆಯ ವಿಶ್ವದ ಅತ್ಯಂತ ದುಬಾರಿ ಹಾಸಿಗೆ; ಇದರ ವಿಶೇಷತೆ ಏನು ಗೊತ್ತಾ?

ಹಸ್ಲಾಮ್ಗೆ ಪಾರ್ಟಿ ಮಾಡಿ ಸಾಕಷ್ಟು ಸುಸ್ತಾಗಿದ್ದರಿಂದ ಒಳ್ಳೆ ನಿದ್ದೆ ಬಂದಿದೆ. ಆದರೆ ಬೆಳಗ್ಗೆ ಏಳುವ ಹೊತ್ತಿಗೆ ಮೈಯೆಲ್ಲಾ ತುರಿಕೆ ಮತ್ತು ದದ್ದು ಕಾಣಿಸಿಕೊಂಡಿದೆ. ಇದಲ್ಲದೇ ಹಾಸಿಗೆಯ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದೆ. ಆದರೆ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಸ್ಲಾಮ್ ಹತ್ತು ನಿಮಿಷ ತೆಗೆದುಕೊಂಡಿದ್ದಾರೆ. ತೆವಳುತ್ತಿರುವ ಜೀವಂತ ತಿಗಣೆಯನ್ನು ಹಾಸಿಗೆ ಮೇಲೆ ನೋಡಿದ್ದಾರೆ. ಬಳಿಕ ಹೋಟೆಲ್​​ ಅವರ ನಿರ್ಲಕ್ಷ್ಯದ ವಿರುದ್ದ ದೂರು ನೀಡಿದ್ದು, ಸಂಪೂರ್ಣ ಹಣವನ್ನು ಹೋಟೆಲ್​​​​​ ಮರುಪಾವತಿ ಮಾಡುವುದರ ಜೊತೆಗೆ 8,787 ರೂ ಹಣವನ್ನು ಪರಿಹಾರದ ರೂಪದಲ್ಲಿ ನೀಡಿದೆ ಎಂದು ವೇಲ್ಸನ್‌ಲೈನ್ ವರದಿಯಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ