AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಪೆಟ್ರೋಲ್​ ಬಂಕ್​ನಲ್ಲಿ ಹಣ ಕದ್ದು ಸಿಕ್ಕಿಬೀಳುವ ಭಯದಲ್ಲಿ 14 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದೇಕೆ?

ಚೀನಾದ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್​ನಿಂದ ಹಣ ಕದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ 14 ವರ್ಷಗಳ ಕಾಲ ಗುಹೆಯಲ್ಲಿ ತಲೆಮರೆಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.

Viral News: ಪೆಟ್ರೋಲ್​ ಬಂಕ್​ನಲ್ಲಿ ಹಣ ಕದ್ದು ಸಿಕ್ಕಿಬೀಳುವ ಭಯದಲ್ಲಿ 14 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದೇಕೆ?
ಮೊಫು
ನಯನಾ ರಾಜೀವ್
|

Updated on: Mar 05, 2023 | 8:05 AM

Share

ಚೀನಾದ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್​ನಿಂದ ಹಣ ಕದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ 14 ವರ್ಷಗಳ ಕಾಲ ಗುಹೆಯಲ್ಲಿ ತಲೆಮರೆಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ. ಮೊಫು ಎಂಬ ವ್ಯಕ್ತಿ 2009ರಲ್ಲಿ ತನ್ನ ಸಹಚರರೊಂದಿಗೆ ಪೆಟ್ರೋಲ್​ ಬಂಕ್​ನಲ್ಲಿ 156 ಯುವಾನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 1859 ರೂ.ವನ್ನು ಕದ್ದಿದ್ದ.

ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಹೆಯೊಂದರಲ್ಲಿ ತಲೆ ಮರೆಸಿಕೊಂಡಿದ್ದ, ಆತ ಬರೋಬ್ಬರಿ 14 ವರ್ಷಗಳ ಕಾಲ ಯಾರಿಗೂ ಕಾಣದಂತೆ ವಾಸಿಸುತ್ತಿದ್ದ, ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಚೀನಾದ ಹ್ಯೂಬೆ ಪ್ರಾಂತ್ಯದಲ್ಲಿ ನಡೆದಿದೆ. ಎನ್ಶಿ ಸಿಟಿಯ ಲಿಯು ಮೊಫು ಎಂಬ ವ್ಯಕ್ತಿ ಪೆಟ್ರೋಲ್ ಬಂಕ್​ನಲ್ಲಿ ಹಣ ಕದ್ದಿದ್ದ, ಲೂಟಿ ಮಾಡಿದ ಹಣದಲ್ಲಿ ಮೊಫು ಮತ್ತು ಅವನ ಸಹಚರರು 60 ಯುವಾನ್ ಖರ್ಚು ಮಾಡಿದ್ದರು. ಉಳಿದ ಹಣವನ್ನು ಹಂಚಿಕೊಂಡರು. ತನಿಖೆಯ ಬಳಿಕ ಮೊಫು ಸಹಚರರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಓದಿ: Video Viral: ಲೋಹದ ಬೇಲಿ ಮುರಿದ ಮೊಸಳೆ, ಇದು ಭಯಾನಕ ದೃಶ್ಯ ಎಂದ ನೆಟ್ಟಿಗರು

ಮೊಫು ಆಶ್ರಯಕ್ಕಾಗಿ ನಗರದಿಂದ ದೂರವಿರುವ ಪರ್ವತಗಳಲ್ಲಿನ ಗುಹೆಯನ್ನು ಆರಿಸಿಕೊಂಡಿದ್ದ, ಈ ಪ್ರದೇಶದಲ್ಲಿ ಜನರ ಓಡಾಟ ಕಡಿಮೆ ಇತ್ತು. ಪರಿಣಾಮವಾಗಿ ಮೊಫು ಸುರಕ್ಷಿತವಾಗಿದ್ದ. ಆದರೆ ಸಮಯ ಕಳೆದಂತೆ ಅಲ್ಲಿ ಬದುಕುವುದು ಹೆಚ್ಚು ಕಷ್ಟಕರವಾಯಿತು. ಮೊಫು ಭೇಟಿಯಾಡುವ ಮೂಲಕ ಆಹಾರ ತರುತ್ತಿದ್ದ. ತನ್ನ ರಕ್ಷಣೆಗಾಗಿ ನಾಯಿಯನ್ನೂ ಸಾಕಿದ್ದ.

ಇಂತಹ ಪರಿಸ್ಥಿತಿಗಳಲ್ಲಿ 14 ವರ್ಷಗಳನ್ನು ಕಳೆದ ಮೊಫು ಕುಟುಂಬದವರ ಕೋರಿಕೆ ಮೇರೆಗೆ ಪೊಲೀಸರಿಗೆ ಶರಣಾಗಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ