AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಕೆ.ಜಿ ತೂಕದ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ 71 ಸಾವಿರ ರೂ ಬಹುಮಾನ

ಇದೀಗಾ ಮೀರತ್‌ನ ಬೃಹತ್​​ ಗಾತ್ರದ ಸಮೋಸಾ ಭಾರೀ ಸುದ್ದಿಯಲ್ಲಿದೆ. ಈ ಸಮೋಸಾವನ್ನು ನೀವು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ರೂಪಾಯಿ ನಗದು ನೀಡಲಾಗುವುದು ಎಂದು ಸ್ವತಃ ಹೋಟೆಲ್​​ ಮಾಲೀಕರು ಘೋಷಿಸಿದ್ದಾರೆ.

12 ಕೆ.ಜಿ ತೂಕದ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ 71 ಸಾವಿರ ರೂ ಬಹುಮಾನ
ಬಾಹುಬಲಿ ಸಮೋಸಾImage Credit source: tribuneindia.com
ಅಕ್ಷತಾ ವರ್ಕಾಡಿ
|

Updated on:Jun 18, 2023 | 5:53 PM

Share

ಮೀರತ್‌: ಸಾಮಾನ್ಯವಾಗಿ ನೀವು 10, 15 ರೂಪಾಯಿಗಳ ಸಮೋಸಾವನ್ನು ತಿಂದಿರುತ್ತೀರಿ. ಆದರೆ ಎಂದಾದರೂ 12 ಕೆ.ಜಿ ತೂಕದ ಬೃಹತ್​​ ಸಮೋಸಾವನ್ನು ನೋಡಿದ್ದೀರಾ? ಇದೀಗಾ ಮೀರತ್‌ನ ಬೃಹತ್​​ ಗಾತ್ರದ ಸಮೋಸಾ ಭಾರೀ ಸುದ್ದಿಯಲ್ಲಿದೆ. ಈ ಸಮೋಸಾವನ್ನು ನೀವು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ರೂಪಾಯಿ ನಗದು ನೀಡಲಾಗುವುದು ಎಂದು ಸ್ವತಃ ಹೋಟೆಲ್​​ ಮಾಲೀಕರು ಘೋಷಿಸಿದ್ದಾರೆ.

ಲಾಲ್ಕುರ್ತಿ ಮೂಲದ ಕೌಶಲ್ ಸ್ವೀಟ್ಸ್‌ನಲ್ಲಿ ಈ ವಿಭಿನ್ನ ಸಮೋಸಾವನ್ನು ತಯಾರಿಸಲಾಗಿದೆ. 12 ಕೆಜಿಯ ‘ ಈ ಬಾಹುಬಲಿ’ ಸಮೋಸಾ ತಯಾರಿಸಲು ಮೂವರು ಬಾಣಸಿಗರು ಹಾಗೂ ಎಣ್ಣೆಯಲ್ಲಿ ಫ್ರೈ ಮಾಡಲು 90 ನಿಮಿಷ ತೆಗೆದುಕೊಂಡಿದ್ದಾರೆ. ತಯಾರಿಸಲು ಆರು ಗಂಟೆಗಳು ಬೇಕಾಗಿದೆ. ಮತ್ತೊಂದು ವಿಶೇಷತೆ ನೀವಿದನ್ನು ಹುಟ್ಟು ಹಬ್ಬದಂದು ಕೇಕ್​​ ಬದಲಾಗಿ ಈ ಸಮೋಸಾವನ್ನು ಕತ್ತರಿಸಬಹುದು ಎಂದು ಮಾಲೀಕರಾದ ಶುಭಂ ಕೌಶಲ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ

ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್ ಮತ್ತು ಡ್ರೈ ಫ್ರೂಟ್ಸ್ ಸೇರಿಸಿ ಈ ಸಮೋಸಾ ತಯಾರಿಸಿದ್ದು, ಇದರ ಬೆಲೆ 1,500 ರೂ. ದೇಶದಲ್ಲೇ ಅತಿ ದೊಡ್ಡದಾದ ಸಮೋಸಾ ಇದಾಗಿದೆ. ಸೋಶಿಯಲ್​​ ಮೀಡಿಯಾಗಳಲ್ಲಿ ಈ ಸಮೋಸಾ ಸುದ್ದಿ ಹರಿದಾಡುತ್ತಿದ್ದಂತೆ ಈಗಾಗಲೇ ಸುಮಾರು 40-50 ಆರ್ಡರ್‌ಗಳು ಬಂದಿವೆ ಎಂದು ಕೌಶಲ್ ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:52 pm, Sun, 18 June 23

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ